Moving text

Mandya District Police

Press Note - Srirangapatana Rural PS Murder Case Detected

                                                                                                       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
                                                    ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 09-08-2017

ಪತ್ರಿಕಾ ಪ್ರಕಟಣೆ 

                      ದಿಃ03/08/2017 ರಂದು ಮುಂಜಾನೆ ಪಾಂಡವಪುರ ತಾಲ್ಲೂಕು ಕೆ.ಬೆಟ್ಟಹಳ್ಳಿ ಬಳಿ ಚಾಗಶೆಟ್ಟಹಳ್ಳಿ ಗ್ರಾಮದ ಕಡೆಯ ರಸ್ತೆಯಲ್ಲಿ ದೊರೆತ ಮಹಿಳಾ ಶವವು ಕೆ.ಬೆಟ್ಟಹಳ್ಳಿ ಗ್ರಾಮದ ರಘು ಎಂಬುವರ ಹೆಂಡತಿ 38 ವರ್ಷದ ಮಮತ ರವರ ಶವ ದೊರೆತಿದ್ದು, ಈಕೆಯು ದಿಃ02/08/2017 ರಂದು ರಾತ್ರಿ 8.30 ಗಂಟೆಯಲ್ಲಿ ಮನೆಯಿಂದ ಹೋಗಿದ್ದು ಈಕೆಯನ್ನು ಯಾರೋ, ಯಾವುದೋ ರೀತಿಯಲ್ಲಿ ಕೊಲೆ ಮಾಡಿ  ರುವ ಬಗ್ಗೆ ಅನುಮಾನ ಇರುವುದಾಗಿ ಮೃತಳ ಮಗ ಸಂಧೀಪ ನೀಡಿದ ದೂರಿನಂತೆ ಕೊಲೆ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.240/2017 ಕಲಂ 302, 201 ಐಪಿಸಿ ವರದಿಯಾಗಿತ್ತು. 

            ಮೃತಳು ಹಾಗೂ ಹಾರೋಹಳ್ಳಿ ಗ್ರಾಮದ ಗಾರೆಕೆಲಸದ ಕೃಷ್ಣನಿಗೆ ಸಂಬಂಧಿಸಿದಂತೆ ತಳಮಟ್ಟದಿಂದ ಮಾಹಿತಿಯನ್ನು ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಹಾರೋಹಳ್ಳಿ ಗ್ರಾಮದ ಕೃಷ್ಣನನ್ನು ದಿಃ07/08/2017 ರಂದು ಮುಂಜಾನೆ ಪಾಂಡವಪುರದಲ್ಲಿ ತನಿಖಾಧಿಕಾರಿಗಳು ಪತ್ತೆ ಮಾಡಿ ತನಿಖೆ ನಡೆಸಿದಾಗ, ಕೃಷ್ಣ ಹಾರೋಹಳ್ಳಿ ಗ್ರಾಮ ಈತನು ಮೃತೆ ಮಮತಳೊಂದಿಗೆ 12 ವರ್ಷಗಳಿಂದ ಪರಿಚಯ ಇಟ್ಟುಕೊಂಡಿದ್ದು, ತನ್ನೊಂದಿಗೆ ಗಾರೆಕೆಲಸಕ್ಕೆ ಕರೆದುಕೊಂಡು ಹೋಗುತಿದ್ದು ಇತ್ತೀಚೆಗೆ ಈಕೆ ತನಗಿಂತ ಬೇರೆಯವರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿರಬಹುದೆಂಬ ದ್ವೇಷವನ್ನು ಹೊಂದಿ, ಕೊಲೆ ಮಾಡುವ ಉದ್ದೇಶದಿಂದ ದಿಃ02/08/2017 ರಂದು ರಾತ್ರಿ ಆಕೆಯನ್ನು ಹಾರೋಹಳ್ಳಿಯ ರಾಮಕೃಷ್ಣೆಗೌಡರ ಬೋರೆಹೊಲದ ಬಳಿ ಹೇಮಾವತಿ ಪಾಳು ಸೀಳು ನಾಲೆಯ ಬಳಿಗೆ ಕರೆದುಕೊಂಡು ಹೋಗಿ ಆಕೆಗೆ ಮದ್ಯಪಾನ ಮಾಡಿಸಿ, ಆಕೆಯ ಕುತ್ತಿಗೆಗೆ ಟವಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಈ ಅಪರಾದ ತನ್ನ ಮೇಲೆ ಬರದಂತೆ ಮುಚ್ಚಿಹಾಕಿ ಸಾಕ್ಷಿ ನಾಶಗೊಳಿಸುವ ಉದ್ದೇಶದಿಂದ ಶವವನ್ನು ಅದೇ ರಾತ್ರಿ ಕೆ.ಬೆಟ್ಟಹಳ್ಳಿಯ ಬಳಿಗೆ ಬೈಕಿನಲ್ಲಿ ಸಾಗಿಸಿ, ಆಕೆಯೇ ವಿಷ ಕುಡಿದು ಸತ್ತಿರುತ್ತಾಳೆಂದು ಭಾವಿಸಿಕೊಳ್ಳಲೆಂದು, ಹೆಣದ ಬಳಿಗೆ ಹೈಡ್ರೋಜನ್ ಪೆರಾಕ್ಸ್‍ಡ್ ಖಾಲಿ ಡಬ್ಬಿಯನ್ನು ಇಟ್ಟು ಹೊರಟು ಹೋಗಿದುದು ತನಿಖೆಯಿಂದ ತಿಳಿದು ಬಂದಿರುತ್ತದೆ

                  ಸದರಿ ಪ್ರಕರಣವನ್ನು  ಡಿ.ಎಸ್.ಪಿ. ಶ್ರೀ. ವಿಶ್ವನಾಥ್‍ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ.ಎಂ.ಚಂದ್ರಶೇಖರ್, ಯೋಗಾಂಜನಪ್ಪ, ಪಿ.ಎಸ್.ಐ,. ಶ್ರೀರಂಗಪಟ್ಟಣ ಟೌನ್, ಪಿಎಸ್‍ಐ ಬ್ಯಾಟರಾಯಗೌಡ, ಹಾಗೂ ಸಿಬ್ಬಂದಿಯವರಾದ ವಿಜಯ್‍ಕುಮಾರ್, ಕೆ.ಕುಮಾರ, ವರದರಾಜ, ರವೀಶ.ಎಸ್.ಇವರುಗಳು ಪ್ರಕರಣವನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಲು ಶ್ರಮಿಸಿರುತ್ತಾರೆ. ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಇವರೆಲ್ಲರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆರವರು ಪ್ರಶಂಶಿಸಿರುತ್ತಾರೆ. 

No comments:

Post a Comment