Moving text

Mandya District Police

DAILY CRIME REPORT DATED : 30-06-2013

  Please Click below URL

DAILY CRIME REPORT DATED : 30-06-2013

Daily Crime Report Dt:29-06-2013


Please click the below URL

Daily Crime Report of Mandya District Dt:29-06-2013

Daily Crime Report Dated:28-06-2013

Daily Crime Report Dated : 28-06-2013

Please click the below URL

Daily Crime Reprot of Mandya District Dt:28-06-213

DAILY CRIME REPORT DATED : 27-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-06-2013ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಅಕ್ರಮ ಗ್ಯಾಸ್ ರಿಫೀಲಿಂಗ್ ಪ್ರಕರಣಗಳು ಹಾಗು 8 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತವೆ. 

ರಾಬರಿ ಪ್ರಕರಣ:

ಬೆಳ್ಳೂರು ಪೊಲೀಸ್ ಠಾಣೆ ಮೊ.ಸಂ.186/13 ಕಲಂ. 392ಐ.ಪಿ.ಸಿ

    ದಿನಾಂಕ : 27-06-2013 ರಂದು ಪಿರ್ಯಾದಿ ಶ್ರೀಮತಿ ಆಶಾ ಕೋಂ ನಾಗರಾಜು 20ವರ್ಷ ರಮಾನಂದನಗರ ಗ್ರಾಮ ಬೆಳ್ಳೂರು ಹೋಬಳಿ ನಾಗಮಂಗಲ ತಾ|| ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 27-06-2013 ರಂದು 08-30 ಎ.ಎಂ ಗಂಟೆಯಲ್ಲಿ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಶ್ರೀಆಧಿಚುಂಚನಗಿರಿ ಕ್ಷೇತ್ರದ ಬಳಿ ಬೆಳಿಗ್ಗೆ 8-15 ಗಂಟೆಗೆ ಶಾಲೆಯಿಂದ ನಡೆದುಕೊಂಡು ಶ್ರಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹೊಸದಾಗಿ ನಿಮರ್ಾಣವಾಗಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮಾರ್ಗವಾಗಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 8-30 ಗಂಟೆ ಸಮಯದಲ್ಲಿ, ನನ್ನ ಹಿಂದಿನಿಂದ ಒಂದು  ಕಪ್ಪುಬಣ್ಣದ ಪಲ್ಸರ್ ಮೋಟಾರ್ ಸೈಕಲ್ನಲ್ಲಿ ಬಂದ ಯಾರೋ ಇಬ್ಬರು ಅಪರಿಚಿತರು  ಸುಮಾರು  20 ರಿಂದ 25 ವರ್ಷ ವಯಸ್ಸಿನವರು ಮೋಟಾರ್ ಸೈಕಲ್ ಸವಾರರು, ನನ್ನನ್ನು ಹಲೋ ಮೇಡಂ ಎಂದು ಕರೆದರು. ಆಗ ನಾನು ಅವರ ಕಡೆ ತಿರುಗಿ ನೋಡಿದಾಗ ಮೋಟಾರ್ ಸೈಕಲ್ನ ಹಿಂಭಾಗದಲ್ಲಿ ಕುಳಿತಿದ್ದವನು ನನ್ನ ಕತ್ತಿಗೆ ಕೈ ಹಾಕಿ, ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಚೈನನ್ನು ಹಿಡಿದು ಎಳೆದುಕೊಂಡು ನನ್ನನ್ನು ನೂಕಿದನು ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 ಮನುಷ್ಯ ಕಾಣೆಯಾದ ಪ್ರಕರಣಗಳು :

1.ಶಿವಳ್ಳಿ ಪೊಲೀಸ್ ಠಾಣೆ ಮೊ.ಸಂ.113/13 ಕಲಂ.ಮನುಷ್ಯ ಕಾಣೆಯಾಗಿದ್ದಾನೆ,

ದಿನಾಂಕ : 27-06-2013 ರಂದು ಪಿರ್ಯಾದಿ ಯಾಲಕ್ಕಿಗೌಡ ಬಿನ್ ಲೇ|| ಕಾರ್ಲಾ ತಿಮ್ಮೇಗೌಡ. 73 ವರ್ಷ, ಒಕ್ಕಲಿಗರು, ಮಾರನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 08-12-2011 ರಂದು ಬೆಳಿಗ್ಗೆ 10-00ಯಲ್ಲಿ ನನ್ನ ಮಗ ಉಮೇಶನು ಮಾರನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದಾನೆ.   ಉಮೇಶ, ವಯಸ್ಸು ಸುಮಾರು 33 ವರ್ಷ, ಎತ್ತರ ಸುಮಾರು 5.5 ಅಡಿ, ಗೋದಿ ಬಣ್ಣದ ಅಗಲವಾದ ಮುಖ, ಬಲಕಾಲಿನ ಮಂಡಿಯ ಕೆಳಗೆ ಗಾಯದ ಮಚ್ಚೆ ಮತ್ತು ಬೆನ್ನಿನ ಕೆಳಗೆ ನಡುವಿನ ಮೇಲೆ ಎಡಗಡೆ ಕಪ್ಪು ಬಣ್ಣದ ಮತ್ತಿ ಇರುತ್ತದೆ ಕಾಣೆಯಾಗಿರುವ ನನ್ನ ಮಗ ಉಮೇಶನನ್ನು ತಾವುಗಳು ಪತ್ತೆಮಾಡಿಕೊಡಬೇಕಾಗಿ ಕೇಳಿಕೊಳ್ಳತ್ತೇನೆ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 258/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ : 27-06-2013 ರಂದು ಪಿರ್ಯಾದಿ ವಹೀದ ಬೇಗಂ ಕೋಂ. ಅಜ್ಮಲ್ ಷರೀಫ್, ವಾಸ ಮನೆ ನಂ,168/ಎ, 11ನೇ ಕ್ರಾಸ್, ನೂರಾನಿ ಮೊಹಲ್ಲಾ,  ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅಜ್ಮಲ್ ಷರೀಫ್ ಬಿನ್ ಲೇ|| ಮೊಹಮ್ಮದ್ ಷರೀಫ್ ಎಂಬುವವರು ದಿನಾಂಕಃ 25-06-2013ರಲ್ಲಿ ಸುಮಾರು 12-00 ಪಿ.ಎಂ. ರಲ್ಲಿ ಮನೆಯಿಂದ ಹೊರೆಹೋಗಿದ್ದು ಇಲ್ಲಿಯವರೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನನ್ನ ಗಂಡನ ವಯಸ್ಸು 45 ವರ್ಷ, 5.6 ಅಡಿ ಎತ್ತರವಿರುತ್ತಾರೆ ಅವರು ಮನೆಯಿಂದ ಹೋಗುವಾಗ ಸಿಮೆಂಟ್ ಕಲರ್ ಪ್ಯಾಂಟ್. ಸಿಮೆಂಟ್ ಕಲರ್ ರೈನ್ ಕೋಟ್,  ಚೆಕ್ಸ್ ಶರಟು ಧರಿಸಿರುತ್ತಾರೆ. ಕಪ್ಪು ಬಣ್ಣ. ದೃಢಕಾಯ ಶರೀರ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕಳವು ಪ್ರಕರಣ : 

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 266/13 ಕಲಂ. 379 ಐ.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಎನ್.ಕುಮಾರ ಬಿನ್. ಯಜಮಾನ್, ನಿಂಗೇಗೌಡ, 35 ವರ್ಷ, ಚನ್ನಪ್ಪನದೊಡ್ಡಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರಂದು, ಕಲ್ಲಹಳ್ಳಿ,ಯಲ್ಲಿರುವ ಸೋಮೇಶ್ವರ ಸಮುದಾಯ ಭವನಕ್ಕೆ ಅವರ ಮೋಟಾರ್ ಸೈಕಲ್ ನಲ್ಲಿ ಮದುವೆಗೆ ಹೋಗಿದ್ದು, ನಂತರ ವಾಪಸ್ಸು ರಾತ್ರಿ 10-00 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 15,000/- ರೂ. ಗಳಾಗಿರುತ್ತೆ ಅದನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಯು.ಡಿ.ಆರ್. ಪ್ರಕರಣ:

ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಪುಟ್ಟಸ್ವಾಮಿಗೌಡ ಬಿನ್. ಲೇಟ್. ಕ್ಯಾತೇಗೌಡ,  ಮೇಣಾಗರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು ರಾತ್ರಿ 10-30ಗಂಟೆಯಲ್ಲಿ ಗಾಣದಾಳು ಗ್ರಾಮದಲ್ಲಿ ಅವರ ಹೆಂಡತಿ ತನ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೊಟ್ಟೆನೋವು ಬಂದು ತಾಳಲಾರದೆ, ತಾನೇ ಮೈ-ಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯಗಳಾಗಿ ಕಿರುಚಾಡುವಾಗ ಅಕ್ಕಪಕ್ಕದವರು ಮತ್ತು ತನ್ನ ಗಂಡ ಬಂದು ಆಕೆಯನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 27-06-2013ರಂದು ಬೇಳಗಿನ ಜಾವ 4 ಗಂಟೆಯಲ್ಲಿ ಸತ್ತುಹೋಗಿರುವುದಾಗಿ ಹಾಗೂ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.

ಅಕ್ರಮ ಗ್ಯಾಸ್ ರಿಫೀಲಿಂಗ್ ಪ್ರಕರಣಗಳು :

1.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 256/13 ಕಲಂ. 285 ಐ.ಪಿ.ಸಿ. 

ದಿನಾಂಕ : 27-06-2013 ರಂದು ಪಿರ್ಯಾದಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ನೀಡಿದ ದೂರಿನ ವಿವರವೇನೆಂದರೆ, ಅವರಿಗೆ ದಿನಾಂಕ: 27-06-2013 ರಂದು ಬೆಳಿಗ್ಗೆ  10-30 ಘಂಟೆಯಲ್ಲಿ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿ ಏನೆಂದರೆ ಮಂಡ್ಯ ಸಿಟಿ, ಲೇಬರ್ ಕಾಲೋನಿ, 6 ನೇ ಕ್ರಾಸ್ನಲ್ಲಿರುವ, ಆರೋಪಿತನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಅವಿನಾಶ್ ಬಿನ್. ಕೆಂಪಲಿಂಗೇಗೌಡ, 20 ವರ್ಷ, ವಕ್ಕಲಿಗರು, ಆಟೋಚಾಲಕ, ವಾಸ  6ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ ಸಿಟಿ ರವರು ತಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ದೊಡ್ಡ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಆಟೋ ರಿಕ್ಷಾಗಳಿಗೆ ಬಳಸುವ ಚಿಕ್ಕ ಚಿಕ್ಕ ಸಿಲಿಂಡರ್ ಗಳಿಗೆ  ರೀಫಿಲ್ ರಾಡ್ ಮೂಲಕ ರೀಫಿಲ್ಲಿಂಗ್ ಮಾಡಿ  ಕೆಜಿ 1ಕ್ಕೆ 70 /- ರೂ ನಂತೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ, ಇದು ಜನ ಸಂದಣಿಯ ಸ್ಥಳವಾಗಿದ್ದು ಮಾನವ ಜೀವಕ್ಕೆ ಅಪಾಯವಾಗುವ ಸಾದ್ಯತೆಗಳು ಇರುತ್ತದೆ ಎಂದು ತಿಳಿದು ಬಂದ ಮೇರೆಗೆ ಸದರಿ ಸ್ಥಳಕ್ಕೆ ದಾಳಿಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.

2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 257/13 ಕಲಂ. 285 ಐ.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಕೆ.ಲಕ್ಷ್ಮೀನಾರಾಯಣ, ಪಿ.ಎಸ್.ಐ. ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 27-06-2013ರಂದು ಸಂಜೆ 05-30 ಘಂಟೆಯಲ್ಲಿ. ಮಂಡ್ಯ ಸಿಟಿ, ಗಿರಿಜಾ ಸ್ಲಂ, 1 ನೇ ಕ್ರಾಸ್ನ,  ಪುಟ್ಟಸ್ವಾಮಿ ರವರ ಮನೆಯ ಮುಂದಿನ ಖಾಲಿ ಜಾಗದ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಆರೋಪಿ ಸಂತೋಷ್ ಬಿನ್ ಪುಟ್ಟೇಗೌಡ, 22 ವರ್ಷ,ವಕ್ಕಲಿಗರು, ಆಟೋಚಾಲಕ, ವಾಸ ಗಿರಿಜಾ ಸ್ಲಂ, ಷುಗರ್ ಪ್ಯಾಕ್ಟರಿ ಸರ್ಕಲ್, ಮಂಡ್ಯ ಸಿಟಿ ರವರು ಅವರ ಮನೆಯ ಮುಂದಿನ ಖಾಲಿ ಜಾಗದ ಸಾರ್ವಜನಿಕ ರಸ್ತೆ ಪಕ್ಕ ಸಂತೋಷ ಎಂಬುವನು  ಅಕ್ರಮವಾಗಿ ದೊಡ್ಡ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟು ಕೊಂಡು ಆಟೋ ರಿಕ್ಷಾಗಳಿಗೆ ಬಳಸುವ ಚಿಕ್ಕ ಚಿಕ್ಕ ಸಿಲಿಂಡರ್ಗಳಿಗೆ  ರೀಫಿಲ್ ರಾಡ್ ಮೂಲಕ ರೀಫಿಲ್ಲಿಂಗ್ ಮಾಡಿ ಕೆಜಿ 1 ಕ್ಕೆ 70.00 ರೂ ನಂತೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ. ಇದು ಜನ ಸಂದಣಿಯ ಸ್ಥಳವಾಗಿದ್ದು ಮಾನವ ಜೀವಕ್ಕೆ ಅಪಾಯವಾಗುವ ಸಾದ್ಯತೆಗಳು ಇರುತ್ತದೆ ಎಂದು ತಿಳಿದು ಪ್ರಕರಣ ದಾಖಲು ಮಾಡಿರುತ್ತೆ.

DAILY CRIME REPORT DATED : 26-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-06-2013 ರಂದು ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  2 ಸಾಮಾನ್ಯ ಕಳವು ಪ್ರಕರಣಗಳು,  1 ಅಕ್ರಮ ಗ್ಯಾಸ್ ಫಿಲಿಂಗ್ ಪ್ರಕರಣ,  2 ಅಕ್ರಮ ಮರಳು ಗಣಿಗಾರಿಕೆ/ಕಳವು/ಸಾಗಾಣಿಕೆ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  3 ಕೊಲೆ ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.      


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 92/13 ಕಲಂ. 498(ಎ)-323-324-506 ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಕೆ.ಆರ್.ವರಲಕ್ಮಿ ಕೋಂ.ವೆಂಕಟೇಶ, ಡಿ.ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 25-06-2013, ಡಿ.ಕೋಡಿಹಳ್ಳಿ ಗ್ರಾಮ, .ಆರೋಪಿಗಳಾದ ಅವರ ಗಂಡ 1. ವೆಂಕಟೇಶ ಬಿನ್ ರಾಮಯ್ಯ, 2. ರಾಮಯ್ಯ, 3. ಸಾಕಮ್ಮ ಕೋಂ. ರಾಮಯ್ಯ ಡಿ.ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾ. ಈ ಮೂವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು ನನಗೆ ಹೊಡೆದ ಗೊದಮೊಟೆಯನ್ನು ಅಲ್ಲೇ ಬಿಸಾಡಿ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಪ್ರಾಣಭಯ ಉಂಟು ಮಾಡಿ ಹೊರಟುಹೋದರು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 316/13 ಕಲಂ. 498(ಎ)-504-506 ಕೂಡ 149 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.

      ದಿನಾಂಕ: 25-06-2013 ರಂದು ಪಿರ್ಯಾದಿ ಪುಷ್ಪಶ್ರೀ ಕೋಂ. ಸಂತೋಷ್ @ ಪಾಪ, 21 ವರ್ಷ, ಗೃಹಿಣಿ, ಒಕ್ಕಲಿಗರು, ಸೂನಗಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:25-06-2013ರ ರಾತ್ರಿ 09-00 ಗಂಟೆಯಲ್ಲಿ ಅರೋಪಿಗಳಾದ ಪಿರ್ಯಾದಿಯ ಗಂಡ 1] ಸಂತೋಷ @ ಪಾಪ ಮತ್ತು ಮಾವ 2] ನಿಂಗೇಗೌಡ, ಅತ್ತೆ 3] ಸಾಕಮ್ಮ ಕೋಂ ನಿಂಗೇಗೌಡ, ಹಾಗು 4] ಅನಿಲ್ಕುಮಾರ್ ಬಿನ್ ನಿಂಗೇಗೌಡ, 5] ಸ್ಪೂರ್ತಿ ಕೋಂ. ಅನಿಲ್ ಕುಮಾರ್, ಎಲ್ಲರೂ ಸೂನಗಹಳ್ಳಿ ರವರುಗಳು ವರದಕ್ಷಿಣೆ ವಿಚಾರವಾಗಿ ಎಲ್ಲರೂ ಜಗಳ ತೆಗೆದು ಅಶ್ಲೀಲ ಪದಗಳಿಂದ ಬೈದು, ಕೈಗಳಿಂದ ತಲೆ, ಬೆನ್ನು, ಎದೆ & ಕೆನ್ನೆಯ ಮೇಲೆ ಹೊಡೆದು ತನ್ನ ಗಂಡ ದೊಣ್ಣೆಯಿಂದ ಹೊಡೆದು ನೋವುಟು ಮಾಡಿರುತ್ತಾರೆ. ನಂತರ ದಿನಾಂಕ:26-6-2013 ರ ಬೆಳಿಗ್ಗೆ 04-00 ಗಂಟೆಯಲ್ಲಿ ಎಲ್ಲರೂ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಶ್ ಠಾಣೆ ಮೊ.ನಂ. 197/13 ಕಲಂ. 341-504-324-506-307 ಕೂಡ 34 ಐಪಿಸಿ ಮತ್ತು 3 ಕ್ಲಾಸ್ [10] ಎಸ್.ಸಿ./ಎಸ್.ಟಿ ಪಿ.ಎ. ಆಕ್ಟ್. 1989.

ದಿನಾಂಕ: 25-06-2013 ರಂದು ಪಿರ್ಯಾದಿ ಚಿಕ್ಕಬೋರಯ್ಯ ಬಿನ್. ದೊಡ್ಡಸಿದ್ದಯ್ಯ, ತೊರೆಬೊಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು ಮದ್ಯಾಹ್ನ ಆರೋಪಿಗಳಾದ 1] ಅರಕೇಶ 2] ಶಿವಲಿಂಗಯ್ಯ @ ದ್ಯಾಪ, ತೊರೆಬೊಮ್ಮನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯನ್ನು ಕುರಿತು ನಿನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಕೇಸು ರಾಜಿ ಮಾಡಿಕೊಂಡೆ, ಈಗ ನನ್ನ ಹತ್ತಿರ ಏನು ಕಿತ್ತುಕೊಳ್ಳುತ್ತೀಯಾ  ಸೂಳೆ ಮಗನೆ ಎಂದು ತೀಟೆ ಜಗಳ ತೆಗೆದು ಪಿಯರ್ಾದಿಯನ್ನು ಆರೋಪಿಗಳಿಬ್ಬರೂ ತಡೆದು ಅವಾಚ್ಯವಾಗಿ ಬೈಯ್ದು ರೀಪೀಸ್ ಪಟ್ಟಿಯಿಂದ ತಲೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ರಕ್ತಗಾಯ ಮಾಡಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 281/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿರುತ್ತಾರೆ.

ದಿನಾಂಕ: 25-06-2013 ರಂದು ಪಿರ್ಯಾದಿ ಸ್ವಾಮಿಗೌಡ ಬಿನ್. ಈರೇಗೌಡ, ಅಗಸನಪುರ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12-06-2013 ರಂದು ಮದ್ದೂರು ಟೌನ್ ಹೊಳೆ ಬೀದಿಯಲ್ಲಿರುವ ಕೆಂಪೇಗೌಡರ ಮನೆಯಿಂದ ರಜನಿ ಕೋಂ. ಕುಮಾರ, 26ವರ್ಷ ಹೊಸಕೋಟೆ ಗ್ರಾಮ, ಪಾಂಡವಪುರ ತಾ. ಐಶ್ವರ್ಯ ಕೋಂ. ಕುಮಾರ, 04 ವರ್ಷ, ಹೊಸಕೋಟೆ ಗ್ರಾಮರವರು ತನ್ನ ಗಂಡನ ಮನೆಗೆ ಹೋಗುತ್ತೇನೆಂದು  ತನ್ನ ಮಗಳು ಐಶ್ವರ್ಯಳನ್ನು ಕರೆದುಕೊಂಡು ಹೋದವಳು ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ. ಅವಳನ್ನು ಎಲ್ಲಾ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಕೇಸು ನೊಂದಾಯಿಸಲಾಗಿದೆ. 

2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 141/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 25-06-2013 ರಂದು ಪಿರ್ಯಾದಿ ಶಶಿಕಲಾ ಕೊಂ. ಗುರು, ಚೊಟ್ಟನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು, ಬೆಳಗಿನ ಜಾವ 05-00 ಗಂಟೆಯಲ್ಲಿ ಗುರು, 28 ವರ್ಷ, ಚೊಟ್ಟನಹಳ್ಳಿ ಗ್ರಾಮ ರವರು ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂದು ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

3. ಹಲಗೂರು ಪೊಲೀಸ್ ಠಾಣೆ ಮೊ.ನಂ. 138/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 25-06-2013 ರಂದು ಪಿರ್ಯಾದಿ ಕಾಳಯ್ಯ ಬಿನ್. ಲೇಃ ಕರಿಯಯ್ಯ, 36ವರ್ಷ, ಕೂಲಿ ಕೆಲಸ, ಮಾರಗೌಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸರೋಜ ಕೋಂ. ಕಾಳಯ್ಯ, 27ವರ್ಷ, ಆಶಾ ಕಾರ್ಯಕತರ್ೆ, ವಾಸ-ಮಾರಗೌಡನಹಳ್ಳಿ ಗ್ರಾಮ ರವರು ಪಿರ್ಯಾದಿಯವರ ಮನೆಯಲ್ಲಿದ್ದ ರೂ.1000/-, ಎ.ಟಿ.ಎಂ. ಕಾಡರ್್, ಒಂದು ಜೊತೆ ಓಲೆ, ಜುಮುಕಿ, ಎರಡು ಜೊತೆ ಬಟ್ಟೆಗಳು, ಒಂದು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿರುತ್ತಾರೆ ಮನೆಯಲ್ಲಿ ಒಂದು ಬಿಳಿಯ ಕಾಗದದಲ್ಲಿ ನನ್ನ ಸಾವಿಗೆ ನಾನೇ ಕಾರಣ ನನ್ನನ್ನು ಯಾರು ಹುಡುಕಬೇಡಿ, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ನನ್ನು ಗಂಡನಿಗೆ ಇನ್ನೊಂದು ಮದುವೆ ಮಾಡಿ ಹೀಗೆ ಬರೆದಿಟ್ಟು ಮನೆಬಿಟ್ಟು ಹೋಗಿರುತ್ತಾರೆ ಇವರನ್ನು ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

4. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 25-06-2013 ರಂದು ಪಿರ್ಯಾದಿ ಪಿ. ಸುಮಾ ಕೋಂ. ಬಿ.ಎಸ್. ಸತೀಶ್, 42 ವರ್ಷ, ಬುರಾಯನಕೊಪ್ಪಲು, ಶ್ರೀರಂಗಪಟ್ಟಣ ತಾ| ರವರು ನೀಡಿದ ದೂರು ಏನೆಂದರೆ ಅವರ ಗಂಡ ಬಿ.ಎಸ್.ಸತೀಶ್ ರವರು 2010ನೇ ಫೆಬ್ರವರಿ ತಿಂಗಳಿನಲ್ಲಿ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬರಲಿಲ್ಲ. ಕಾಣೆಯಾಗಿದ್ದಾನೆ. ಕುಡಿದು ಅಂಗಡಿಗಳ ಬಳಿ ಮತ್ತು ಎಲ್ಲೆಂದರಲ್ಲಿ ಮಲಗಿ ಬಿಡುತ್ತಿದ್ದರು ಆ ರೀತಿ ಎಂದು ತಿಳಿದು ಸುಮ್ಮನೆ ಇದ್ದು ಮತ್ತು ಪಿರ್ಯಾದಿಯವರು  ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣ :

 ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 315/13 ಕಲಂ.279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 25-06-2013 ರಂದು ಪಿರ್ಯಾದಿ ಹೆಚ್.ಎಸ್. ಚೇತನ್ ಬಿನ್. ಎನ್.ನಂಜುಂಡೇಗೌಡ, ಹುಲ್ಕರೆ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು 10-00 ಎಎಂ. ನಲ್ಲಿ ಇಂಡುವಾಳು ಗ್ರಾಮದ ಬಸ್ ನಿಲ್ದಾಣದ ನೇರದಲ್ಲಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಆರೋಪಿ ನಂ. ಕೆಎ-09-ಎಫ್-3670 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಜೆ. ಚಂದ್ರಶೇಖರ್ ರವರು  ಹೋಗುತ್ತಿದ್ದ ಮೋಟಾರ್ ಸೈಕಲ್ನ ಎಡಭಾಗದ ಹ್ಯಾಂಡೆಲ್ಗೆ ಡಿಕ್ಕಿ ಮಾಡಿಸಿದ ಪರಿಣಾಮ ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ವೈದ್ಯರು ಇವರನ್ನು ಪರೀಕ್ಷಿಸಿ ಅವರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.


ಸಾಮಾನ್ಯ ಕಳವು ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 313/13 ಕಲಂ. 379-511 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ವೈ.ಎಂ. ಪಾರ್ಥ ಬಿನ್. ಮುಟ್ಟಲಿಂಗೇಗೌಡ, ಯಲಿಯೂರು ಗ್ರಾಮ, ಮಂಡ್ಯ ತಾ. ರರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-06-2013 ರಂದು ಯಲಿಯೂರು ಗ್ರಾಮದ ಪಿರ್ಯಾದಿರವರ ಜಮೀನಿನ ಬಳಿ ಬಂದಾಗ ರವರು ಒಬ್ಬ ವ್ಯಕ್ತಿ ಅವರ ಜಮೀನಿಗೆ ನುಗ್ಗಿ ಪಂಪ್ ಸೆಟ್ಗೆ ಆಳವಡಿಸಿದ್ದ ಪೈಪ್ ಕಟ್ಟ ಮಾಡುತ್ತಿದ್ದು ಆತನನ್ನು ಹಿಡಿದು ವಿಚಾರ ಮಾಡಲಾಗಿ ಆತ ಶಿವರಾಜು ,ಚಂದಗಾಲು ಗ್ರಾಮ, ಮಂಡ್ಯ ತಾ. ಎಂದು ತಿಳಿಸಿದ್ದು ಗದ್ದೆಯ ಬಳಿ ಕೆಎ-11-ಎ-5249 ರ ಟಾಟಾ ಏಸ್ ಗುಡ್ಸ್ ವಾಹನದಲ್ಲಿ ತಾನು ಕಳ್ಳತನ ಮಾಡಿದ ಪೈಪ್ನ್ನು ತುಂಬುಕೊಂಡು  ಹೋಗಲು ಬಂದಿದ್ದೆನು ಎಂದು ತಿಳಿಸಿರುತ್ತಾನೆ. ಈ ಸಂಬಂಧ ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 434-447-379  ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಮರಿಕೃಷ್ಣೇಗೌಡ, 36 ವರ್ಷ, ಹುಲ್ಲೇಗಾಲ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: ದಿನಾಂಕಃ 26-06-2013  ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಆರೋಪಿಗಳಾದ 1] ಈರಣ್ಣ 2] ಶಿವರಾಜು(ಗಣಿಯ) 3] ರಾಧ ಕೋಂ. ಈರಣ್ಣ, 4] ಪ್ರಜೀತ ಕೋಂ. ಶಿವರಾಜು, ಹುಲ್ಲೇಗಾಲ ಗ್ರಾಮ ರವರುಗಳು ನಮ್ಮಗಳ ಮೇಲೆ ವಿನಾ ಕಾರಣ ಜಗಳ ತೆಗೆದು ಬಾಲ ಭಾಷೆಗಳಲ್ಲಿ  ನಿಂದಿಸಿರುವುದಲ್ಲದೆ. ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿ ನಮ್ಮೆಲ್ಲರಿಗೂ ಪ್ರಾಣ ಬೆದರಿಕೆ ಹಾಕಿರುವುದರಿಂದ ಹಾಗೂ ಘಟನೆಯು ತೀವ್ರ ಸ್ವರೂಪ ತಾಳಲು ರಾಧ ಕೋಂ. ಈರಣ್ಣ ಹಾಗೂ ಪ್ರಜೀತ ಕೋಂ. ಶಿವರಾಜುರವರುಗಳು ಎಲ್ಲರನ್ನೂ ಪ್ರಚೋದಿಸುತ್ತಾ ಮನೆಯಿಂದ ಬೆಂಕಿಪಟ್ಟಣ ತಂದು ಕೊಟ್ಟು  ಬೆಂಕಿ ಹಚ್ಚಲು ಪ್ರೋತ್ಸಾಹಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿರುತ್ತದೆ.


ಅಕ್ರಮ ಗ್ಯಾಸ್ ಫಿಲಿಂಗ್ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 265/13 ಕಲಂ. 285 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಹೆಚ್.ಎನ್.ಬಾಲು, ಪಿಎಸ್ಐ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ದೇವರಾಜು @ ದೇವು ಬಿನ್ ಬಿ.ಪುಟ್ಟಸ್ವಾಮಿ, 32 ವರ್ಷ, ವಕ್ಕಲಿಗರು, ಆಟೋರಿಕ್ಷಾ ಚಾಲಕ, ವಾಸ 4ನೇ ಕ್ರಾಸ್, ಲೇಬರ್ಕಾಲೋನಿ, ಮಂಡ್ಯ ಸಿಟಿ ರವರು ಯಾವುದೇ ಅಧಿಕೃತ ದಾಖಲಾತಿಗಳಿಲ್ಲದೆ, ಸರ್ಕಾರದಿಂದ ಸಾರ್ವಜನಿಕರ ಉಪಯೋಗಕ್ಕೆ ವಿತರಿಸುವ ಅವಶ್ಯಕ ವಸ್ತುಗಳಾದ ಅಡಿಗೆ ಅನಿಲದ ಸಿಲಿಂಡರ್  ಅನ್ನು ಅಕ್ರಮವಾಗಿ ಆಟೋರಿಕ್ಷಾಗೆ ಉಪಯೋಗಿಸುವ ಚಿಕ್ಕ ಸಿಲಿಂಡರ್ ಹೆಚ್ಚಿನ ಹಣ ಪಡೆದುಕೊಂಡು ರೀಫಿಲ್ಲಿಂಗ್ ಮಾಡಿಕೊಡುತ್ತಿರುವುದು ಮತ್ತು ಸಾರ್ವಜನಿಕರು ವಾಸಿಸುವ ಸ್ಥಳದಲ್ಲಿ ಅಕ್ರಮವಾಗಿ ದಹ್ಯ ವಸ್ತುವನ್ನು ನಿರ್ಲಕ್ಷತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಅಡಿಗೆ ಅನಿಲದ ಸಿಲಿಂಡರ್ನಿಂದ ಚಿಕ್ಕ ಸಿಲಿಂಡರ್ಗೆ ರೀಫಿಲ್ಲಿಂಗ್ ಮಾಡುತ್ತಿರುವುದು ಕಂಡುಬಂದಿದ್ದರಿಂದ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಗಣಿಗಾರಿಕೆ/ಕಳವು/ಸಾಗಾಣಿಕೆ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 3-42-44 ಕೆ.ಎಂ.ಎಂ.ಸಿ.ಆರ್. 1994 ನಿಯಮ ಕೂಡ 4(1ಎ)-21 (1 ರಿಂದ 5) ಎಂ.ಎಂ.ಆರ್.ಡಿ-1957 ನಿಯಮ ಕೂಡ 379 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಬಿ.ಆರ್.ವೆಂಕಟರಂಗಯ್ಯ, ರಾಜಸ್ವ ನಿರೀಕ್ಷಕರು, ಹೊನಕೆರೆ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ 54-3608ರ ಲಾರಿ ಚಾಲಕ. ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 26-06-2013 ರಂದು ಬೆಳಿಗ್ಗೆ 09-30ಗಂಟೆ ಸಮಯದಲ್ಲಿ ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಸುಖಧರೆ ಗ್ರಾಮದ ಹಾಲಿನ ಡೈರಿಯ ಹತ್ತಿರ ತಪಾಸಣೆ ಮಾಡುತ್ತಿದ್ದಾಗ, ಕೆ.ಎ-54/3608 ರ ಲಾರಿ ಚಾಲಕ ಲಾರಿಯಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದೆ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 188/13 ಕಲಂ. 188-379 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಎಸ್. ಸಂತೋಷ್. ಪಿಎಸ್ಐ, ಕೊಪ್ಪ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ದಿನಾಂಕ: 26-06-2013ರ ಬೆಳಿಗ್ಗೆ 7-30 ಗಂಟೆಯಲ್ಲಿ, ಯಡವನಹಳ್ಳಿ ಗ್ರಾಮದಲ್ಲಿ ಆರೋಪಿಗಳು ನಂ. ಕೆಎ-11-ಟಿ-6141 ಮರಳು ತುಂಬಿದ ಟ್ರಾಕ್ಟರ್ ಚಾಲಕ, ಹಾಗು ಕೆಎ-52-8205 ಲಾರಿ ಚಾಲಕ ಇವರುಗಳು ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದು. ಸದರಿ ವಾಹನಗಳ ಚಾಲಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶಿಂಷಾನದಿಯಿಂದ ಮರಳು ತುಂಬುತ್ತಿದ್ದುದು ದೃಢಪಟ್ಟ ಮೇರೆಗೆ ಸ್ಥಳಕ್ಕೆ ಪಂಚಾಯಿತುದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಮಹಜರು ಕ್ರಮ ಜರುಗಿಸಿ, ಪ್ರಕರಣ ದಾಖಲು ಮಾಡಿರುತ್ತೆ.


ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿಯವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:26-6-2013ರ ಹಿಂದಿನ ದಿನಗಳಲ್ಲಿ. ಕೆ.ಆರ್.ಸಾಗರದ ರಾಚೇಗೌಡ ಬಿನ್. ಲೇಟ್. ಸಿದ್ದೇಗೌಡ, 80ವರ್ಷ ರವರಿಗೆ ಹೊಟ್ಟೆನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಸಹ ಗುಣಮುಖವಾಗಿರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:22-06-2013ರಂದು ಬೆಳಿಗ್ಗೆ 07-00 ಗಂಟೆಯ ಸಮಯದಲ್ಲಿ ಪಿರ್ಯಾದಿಯವರ ಹೆಂಡತಿಗೆ ಮೃತ ರಾಚೇಗೌಡರವರು ಹೊಲದ ಬಳಿ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸ್ ಮನೆಗೆ ಹೋಗದೆ ದಿನಾಂಕಃ26-06-2013ರ ಹಿಂದಿನ ದಿನಗಳಲ್ಲಿ ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿಗೆ ಬಿದ್ದು ಮೃತಪಟ್ಟಿರುವುದಾಗಿರುತ್ತೆ. ಆದ್ದರಿಂದ ಶವದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 143-147-447-504-323-384-354 ಕೂಡ 149 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ನಿರ್ಮಲಮ್ಮ ಬಿನ್.ಮಹದೇವ, ಹೆಗ್ಗಡಹಳ್ಳಿ ಗ್ರಾಮ, ಕಸಬಾ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ದಿನಾಂಕ: 25-05-2013ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಮಂಡ್ಯ ಜಿಲ್ಲೆ. ಕೆ.ಆರ್ ಪೇಟೆ ತಾ||, ಕಸಬಾ ಹೋಬಳಿ, ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಪಿಯರ್ಾದಿಯವರ ಜಮೀನಿಗೆ ಆರೋಪಿಗಳಾದ 1] ಗೌರಮ್ಮ ಕೊಂ ಪುಟ್ಟಯ್ಯ 2] ರೇಣುಕ ಕೊಂ ಚಂದ್ರಯ್ಯ 3] ನಳಿನಿ ಬಿನ್ ಪುಟ್ಟಯ್ಯ 4] ರಮೇಶ ಬಿನ್ ಪುಟ್ಟಯ್ಯ, 5] ತುಳಸಿರಾಜ ಬಿನ್ ಚಂದ್ರಯ್ಯ  6] ತುಳಸಿರಾಜನ ತಂಗಿ ಪುಟ್ಟಿ 7] ಗೌರಮ್ಮ ಕೋಂ. ಪುಟ್ಟಯ್ಯ, ಎಲ್ಲರೂ ಶಿಂಧಘಟ್ಟ ಗ್ರಾಮ, ಶೀಳನೆರೆ ಹೋಬಳಿ,  ಕೆ.ಆರ್. ಪೇಟೆ ತಾಲ್ಲೋಕು ರವರುಗಳು ಮೇಲ್ಕಂಡ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಪಿಯರ್ಾದಿ ಬೆಳೆದಿದ್ದ ಬೆಳೆಯನ್ನು ಟ್ರಾಕ್ಟರ್ನಿಂದ ಉಳಿಸಲು ಬಂದಿದ್ದು  ಇದನ್ನು ಕೇಳಲು ಹೋದ ಪಿಯರ್ಾದಿಯವರಿಗೆ ಆರೋಪಿಗಳು ಅವರ ಮುಂದಲೆ   ಹಿಡಿದು ಎಳೆದಾಡಿ ಸೂಳೆ ಬಡ್ಡಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರ ಸೀರೆಯನ್ನು ಹಿಡಿದು ಎಳೆದಾಡಿ ಪಿರ್ಯಾದಿಯವರ ಕೊರಳಿನಲ್ಲಿದ್ದ 30 ಗ್ರಾಂ ನ ಮಾಂಗಲ್ಯದ ತಾಳಿಯನ್ನು ಕಿತ್ತುಕೊಂಡು ಹೋಗಿರುತ್ತಾರೆ. ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 302 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಎಂ.ಮಹದೇವಸ್ವಾಮಿ, ಪಿಎಸ್ಐ, ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-01-2013ರಂದು ಕುಂದೂರು ಬೆಟ್ಟದ ಶ್ರೀ ಮಲ್ಲಿಕಾಜರ್ುನಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಅಪರಿಚಿತ ಮನುಷ್ಯನ ತಲೆಬರುಡೆ, ಕೈ ಮತ್ತು ಕಾಲುಗಳ ಮೂಳೆಗಳನ್ನು ದೊರೆಕಿದ್ದು, ಇವುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೇವಸ್ಥಾನದ ಅರ್ಚಕರು, ಶ್ರೀಧರ್ ಎಂಬುವವರು ನೀಡಿದ ದೂರಿನ ಮೇರೆಗೆ ಠಾಣಾ ಯುಡಿಆರ್ ನಂ. 01/12 ಕಲಂ 174(3) ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ಮೂಳೆಗಳ ಬಗ್ಗೆ ಪೋರೆನ್ಸಿಕ ತಜ್ಞರು ಹಾಗೂ ವೈದ್ಯರು ಪರೀಕ್ಷೆ ಮಾಡಿ ಈ ಮೂಳೆಗಳು ಸುಮಾರು 30 ವರ್ಷ ವಯಸ್ಸಿನ ಗಂಡಸಿನದ್ದೆಂದು ಹಾಗೂ ತಲೆಗೆ ಪ್ರಾಕ್ಚರ್ ಆಗಿ ಸಾವುಂಟಾಗಿರುತ್ತೆಂದು ಹಾಗೂ ಯಾರೋ ತಲೆಗೆ ಹೊಡೆದು ಕೊಲೆ ಮಾಡಿರುವ ಸಂಭವವಿದೆಯೆಂದು ವರದಿ ನೀಡಿದ ಮೇರೆಗೆ ಸ್ವತಃ ದೂರು ದಾಖಲಿಸಿರುತ್ತೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 317/13 ಕಲಂ. 302 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ನಳಿನಿ ಕೊಂ. ಸಿದ್ದರಾಜು, 24ವರ್ಷ, ಗಂಗಾಮತ ಜನಾಂಗ, ಅಕರ್ೆಶ್ವರ ನಗರ, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013ರ ಹಿಂದಿನ ದಿನಗಳಲ್ಲಿ, ಹೊಳಲು ಗ್ರಾಮದ ಶಿವಲಿಂಗ ಅವನ ಊರು ಹೊಳಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಮತ್ತು ಬೆತ್ತಲೆ ಪೊಟೋ ತೆಗೆದು ಆ ಫೋಟೋಗಳನ್ನು ಇಟ್ಟುಕೊಂಡು ಎದುರಿಸುತ್ತಿದ್ದನು. ದಿನಾಂಕ: 22-12-2012 ರಂದು ಶಿವಲಿಂಗ ಚಿತ್ತದುರ್ಗಕ್ಕೆ ನನ್ನನ್ನು ಕರೆದುಕೊಂಡು ಹೋದನು ಅಲ್ಲಿ ಕೆಟ್ಟದಾಗಿ ನನ್ನ ಜೊತೆ ನೆಡೆದುಕೊಂಡನು, ದಿನಾಂಕ:25-12-2012 ರಂದು ಮತ್ತೆ ವಾಪಸ್ ಕರೆದುಕೊಂಡು ಬಂದ,   ದಿನಾಂಕ:29-12-2012ರಂದು ಬಾಡಿಗೆ ಕೊಟ್ಟಿದ್ದ ಶಿವಲಿಂಗ ಅತ್ತಿಬೆಲೆಯಲ್ಲಿ ಎರಡು ತಿಂಗಳು ಬಾಡಿಗೆ ಮನೆ ಮಾಡಿ ಇರಿಸಿದ್ದ ಅಲ್ಲಿ ನನ್ನನ್ನು ಹೊಡೆದು ಹಿಂಸೆ ಕೊಡುತ್ತಿದ್ದ ಆದ್ದರಿಂದ ಶಿವಲಿಂಗನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 399/13 ಕಲಂ. 302 ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ರಮೇಶ ಬಿನ್. ಲೇಟ್. ಕೃಷ್ಣೇಗೌಡ, 44 ವರ್ಷ, ಒಕ್ಕಲಿಗರು ಇವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 26-06-13 ರ ಹಿಂದಿನ ಸಮಯದಲ್ಲಿ ಅರಳಕುಪ್ಪೆ ಗ್ರಾಮದ ಆರೋಪಿಗಳಾದ 1) ರವಿ ಬಿನ್ ಹುರಿಗೌಡ,  2) ನಿಂಗಮ್ಮ ಕೋಂ ಹುರಿಗೌಡ 3) ಇಂದ್ರ ಬಿನ್. ಹುರಿಗೌಡ ರವರುಗಳು ಭಾಗ್ಯಳಿಗೆ ಗಲಾಟೆ ಮಾಡಿ ಹೊಡೆಯುವುದು ಮತ್ತು ಬಯ್ಯುವುದು ಮಾಡಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು ಈ ದಿವಸ ಭಾಗ್ಯಳನ್ನು ಮೇಲ್ಕಂಡ ಆರೋಪಿಗಳೆಲ್ಲರೂ ಸೇರಿ  ಸಾಯಿಸಿ ನಂತರ ಹುಣಸೆ ಮರಕ್ಕೆ ನೇಣು ಹಾಕಿರುತ್ತಾರೆ ಎಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 25-06-2013


ಮಂಡ್ಯ ಜಿಲೆಯಲ್ಲಿ ದಿನಾಂಕ : 25-06-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ಮೋಸ/ವಂಚನೆ ಪ್ರಕರಣ, 4 ಕಾಣೆಯಾದ ಪ್ರಕರಣಗಳು, 1 ಅಕ್ರಮ ಮರಳು ಕಳ್ಳತನ/ಸಾಗಾಣಿಕೆ ಪ್ರಕರಣ, 1 ಅಪಹರಣ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು ಇತರೆ 11   ಐ.ಪಿ.ಸಿ./ಕೆ,ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರ ಪೊಲೀಸ್ ಠಾಣೆ  ಮೊ ಸಂ: 82/13 ಕಲಂ: 279,337, 304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ 

     ದಿನಾಂಕ: 25-06-2013 ರಂದು ಪಿರ್ಯಾದಿ ಸೋಮಶೇಖರ ಬಿನ್ ಲೇಟ್ ಸಿದ್ದೇಗೌಡ ಗೊರವನಹಳ್ಳಿ ರವರು ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಆರೋಪಿ ಕೆ.ಎ.11-ಎ-2557 ರ ಲಾರಿ ಚಾಲಕ ಲಾರಿಯ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಇದ್ದಕ್ಕಿದಂತೆ ಬ್ರೇಕ್ ಹಾಕಿ ಲಾರಿಯನ್ನು ನಿಧಾನಗೊಳಿಸಿದ ಹಿಂದಿನಿಂದ ಬಂದ ಜಿ.ಜೆ-18 ಎ.ಎಲ್-7643 ಮೋಟಾರ್ ಸೈಕಸವಾರ ಲಾರಿಯ ಹಿಂಬಾಗದ ಎಡಬಾಗಕ್ಕೆ ಡಿಕ್ಕಿ ಹೊಡೆಸಿಕೊಂಡು ಅಪಘಾತ ಉಂಟಾದ ಪರಿಣಾಮ ಮೋಟಾರ್ ಬೈಕ್ ಸವಾರ ಅರುಣ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಮತ್ತು ಸುರೇಶನನ್ನು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾರುತ್ತೆ  ಎಂದು ನೀಡಿದ ದೂರನ್ನು ಸ್ವಿಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

ಮೋಸ/ವಂಚನೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 406-408-409-420 ಐ.ಪಿ.ಸಿ.

     ದಿನಾಂಕ: 25-06-2013 ರಂದು ಪಿರ್ಯಾದಿ  ಪಿ, ಶ್ರೀಧರ, ಹಿರಿಯ ವಿಭಾಗದಿಕಾರಿಗಳು, ಬಾರತೀಯ ಜೀವ ವಿಮಾ ನಿಗಮ, ವಿಭಾಗೀಯ ಕಛೇರಿ, ಬನ್ನಿಮಂಟಪ್ಪ, ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 22-06-2013ರ ಹಿಂದಿನ ದಿನಗಳಲ್ಲಿ ಮೈಕ್ರೋ ಇನ್ಸೂರೆನ್ಸ್ ಪ್ರತಿನಿಧಿ ಕಚೇರಿ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ಮೊಃಹನ್, ಕಾರ್ಯದಶರ್ಿ, ಭೂಮಿಕ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ. 2] ಟಿ.ಎಸ್.ಸಂತೋಷ್ ಕುಮಾರ್, ಕಾರ್ಯದಶರ್ಿ, ಬಾಳಿಗೊಂದು ಗುರಿ, ಗ್ರಾಮೀಣಾಭಿವೃದ್ಧಿ ಸಂಸ್ಥೆ,  ತುಮಕೂರು ಜಿಲ್ಲೆ ಹಾಗು ಇತರೆ 19 ಜನರುಗಳು ಸಾರ್ವಜನಿಕರಿಂದ ಸಂಗ್ರಹಿಸಿದ ವಿಮಾ ಕಂತುಗಳ ಹಣದಲ್ಲಿ 5,74,013 ರೂ. ಮೊತ್ತದ ಹಣವನ್ನು ಪಾಲಿಸಿದಾರರ ಖಾತೆಗೆ ಜಮಾ  ಮಾಡಲು ಎಲ್.ಐ.ಸಿ. ಸಂಸ್ಥೆಗೆ ಕಟ್ಟದೆ ಅಥವಾ ಪಾಲಿಸಿದಾರರಿಗೂ ವಾಪಸ್ ನೀಡದೇ ಪಾಲಿಸಿದಾರರಿಗೆ ಹಾಗೂ ಎಲ್.ಐ.ಸಿ. ಸಂಸ್ಥೆಗೆ ನಂಬಿಕೆ ದ್ರೋಹವೆಸಗಿ ವಂಚನೆ ಮಾಡಿರುತ್ತಾರೆಂದು ಹಾಗೂ ಈ ಎರಡೂ ಸಂಸ್ಥೆಗಳು ನಕಲಿ ದಾಖಲೆ/ ನಕಲಿ ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ರೂ. 4,89,427 ರೂ,. ಮೊತ್ತವನ್ನು  ಮರಣದಾವೆ ಮೂಲಕ ಪಡೆದುಕೊಂಡು ಎಲ್.ಐ.ಸಿಗೆ ಮೋಸ ಮಾಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.


ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 25-06-2013 ರಂದು ಪಿರ್ಯಾದಿ  ಗೋವಿಂದೇಗೌಡ ಬಿನ್. ಲೇಟ್. ಗಿರಿಗೌಡ, ಹರಿಹರಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಮಂಜುಳಮ್ಮ ಕೋಂ. ಗೋವಿಂದೇಗೌಡ, 25, ಹರಿಹರಪುರ ಗ್ರಾಮ  ರವರು ದಿನಾಂಕ: 19-06-2013ರಂದು ಮದ್ಯಾಹ್ನ 02-00 ಗಂಟೆಯಲ್ಲಿ, ಹರಿಹರಪುರ ಗ್ರಾಮದಿಂದ ಅವಳ ತವರಿಗೆ ಹೋಗಿಬರುತ್ತೇನೆಂದು ಮಕ್ಕಳಿಗೆ ಹೇಳಿ ಹೋದವಳು ವಾಪಸ್ ಬಂದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 184/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 25-06-2013 ರಂದು ಪಿರ್ಯಾದಿ  ರಾಜೇಗೌಡ ಬಿನ್. ಪಾಂಡುರಂಗೇಗೌಡ, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪವನ್ ಎಲ್.ಆರ್. ಬಿನ್. ರಾಜೇಗೌಡ, 14 ವಿದ್ಯಾಥರ್, ಲಕ್ಷ್ಮಿಪುರ ಗ್ರಾಮ,   ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗ ಪವನ್ ಬೊಮ್ಮೇನಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತಿದಿನ ಗ್ರಾಮದಿಂದ ಹೋಗಿ ಬರುತ್ತಿದ್ದು ದಿನಾಂಕ 19-06-2013ರಂದು ಬೆಳಗ್ಗೆ 09-00 ಗಂಟೆಯಲ್ಲಿ ಮಾಮೂಲಿನಂತೆ ಶಾಲೆಗೆ ಹೋದವನು ಪುನಃ ಮನೆಗೆ ಬಂದಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ.

3. ಕೆ ಆರ್ ಪೇಟೆ ಟೌನ್ ಪೊಲೀಸ್  ಠಾಣೆ ಮೊ ಸಂ: 192/13 ಕಲಂ: ಮನುಷ್ಯ ಕಾಣೆಯಾಗಿದ್ದಾನೆ. 

     ದಿನಾಂಕ: 25-06-2013 ರಂದು ಪಿರ್ಯಾದಿ ಉಮೇಶ ಬಿನ್ ಚೌಡಯ್ಯ ಊಚನಹಳ್ಳಿ ಗ್ರಾಮ ಕೆಆರ್ ಪೇಟೆ ತಾ| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ  20.06.2013 ಬೆಳಿಗ್ಗೆ 09.00 ಗಂಟೆ ಊಚನಹಳ್ಳಿ ಗ್ರಾಮ ಕೆಆರ್ ಫೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚೌಡಯ್ಯ 55 ವರ್ಷ, ಊಚನಹಳ್ಳಿ ಗ್ರಾಮ,  ಕೆಆರ್ ಪೇಟೆ ತಾ|| ರವರು ಕೆ.ಆರ್.ಪೇಟೆಗೆ ಹೋಗುತ್ತೇನೆಂದು ನಮ್ಮ ತಂದೆಯವರು ಮನೆಯಿಂದ ಹೋದವರು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲಾ ನಾವುಗಳು ನೆಂಟರ ಮನೆಯನ್ನೆಲ್ಲಾ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ ನಮ್ಮ ತಂದೆ ಚೌಡಯ್ಯ ರವರನ್ನು ಪತ್ತೆಮಾಡಿಕೊಡಿ ಎಂದು ಈ ದಿವಸ ತಡವಾಗಿ ಬಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

4. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 225/13 ಕಲಂ. ಮಕ್ಕಳು ಕಾಣೆಯಾಗಿದ್ದಾರೆ.

     ದಿನಾಂಕ: 25-06-2013 ರಂದು ಪಿರ್ಯಾದಿ ಚಾಮುಂಡಿ ಕೋಂ. ಲೇಟ್. ನರಸಿಂಹ, ಕೆನ್ನಾಳು ಗ್ರಾಮ, ಪಾಂಡವಪುರ ತಾ. ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ 1]ವಿಶ್ವನಾಥ, 10 ವರ್ಷ. 2] ಚಂದ್ರ ಬಿನ್. ನರಸಿಂಹ, 4 ವರ್ಷ, ಇಬ್ಬರೂ ಕೆನ್ನಾಳು ಗ್ರಾಮ ರವರುಗಳು ದಿನಾಂಕ: 16-06-2013 ರಂದು ಸಂಜೆ 07-00 ಗಂಟೆಯಲ್ಲಿ ಕೆನ್ನಾಳು ಗ್ರಾಮ. ಪಾಂಡವಪುರ ತಾ. ನಲ್ಲಿರುವ ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದು. ನಂತರ 08-30 ಗಂಟೆ ಸಮಯದಲ್ಲಿ  ಮಕ್ಕಳು ಮನೆಗೆ ಬರಲಿಲ್ಲವೆಂದು ಹೊರಗೆ ಬಂದು ನೋಡಿದಾಗ ಮಕ್ಕಳು ಕಾಣಿಸಲಿಲ್ಲ ನಾನು ಗಾಬರಿಯಿಂದ ಎಲ್ಲಾ ಕಡೆ ಹುಡುಕಾಡಿ ನೋಡಿದರು ಸಿಕ್ಕಲಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕಾಣೆಯಾದ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 280/13 ಕಲಂ. 279-379-188 ಐ.ಪಿ.ಸಿ.

     ದಿನಾಂಕ: 25-06-2013 ರಂದು ಪಿರ್ಯಾದಿ  ಬಿ.ಎಸ್. ಶ್ರೀಧರ್ ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು ಅವರ ಬಾಬ್ತು ನಂ. ಕೆಎ-11-ಟಿ-8169ರ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ರವರು ದಿನಾಂಕ: 25-06-2013 ರಂದು ಮದ್ದೂರು ತಾ. ಕೆ.ಕೋಡಿಹಳ್ಳಿ ಗ್ರಾಮದ ಬಳಿ ಶಿಂಷಾ ನದಿಯಲ್ಲಿ ಸಕರ್ಾರದ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಟ್ರಾಕ್ಟರ್ಗೆ ತುಂಬಿಕೊಂಡು ಕಳ್ಳತದಿಂದ ಸಾಗಾಣಿಕೆ ಮಾಡುತ್ತಿದ್ದಾಗ ಹಿಡಿಯಲು ಹೋದಾಗ ಟ್ರ್ಯಾಕ್ಟರ್ ಚಾಲಕ ಅತಿವೇಗವಾಗಿ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಾಲನೆ ಮಾಡಿರುತ್ತಾನೆ ಈ ಬಗ್ಗೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅಪಹರಣ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 366-506-114 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ರಾಮಕೃಷ್ಣ, ವ್ಯವಸಾಯ, ಕೋರೇಗಾಲ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಕೆ.ಎನ್.ರವಿ, 2) ಶ್ರೀನಿವಾಸ, 3)ನಾರಾಯಣಪ್ಪ, 4) ಆನಂದ ಹಾಗು 5. ರತ್ನಮ್ಮ ಕೋರೇಗಾಲ ಗ್ರಾಮ ರವರುಗಳು ದಿನಾಂಕ: 20-06-2013ರಂದು ಬೆಳಿಗ್ಗೆ ಕೋರೇಗಾಲ ಗ್ರಾಮ, ಮಳವಳ್ಳಿ ತಾಲ್ಲೊಕು ರವರುಗಳು ಪಿರ್ಯಾದಿಯವರ ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾನೆ ಹಾಗು ಕೊಲೆ ಹಾಕಿರುತ್ತಾನೆಂದು ಹಾಗೂ ಇದಕ್ಕೆಲ್ಲಾ ಕುಮ್ಮಕ್ಕು ನೀಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. . 174 ಸಿ.ಅರ್.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಮಹದೇವಮ್ಮ, ದುಗ್ಗನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ದಿನಾಂಕ: 24-06-2013 ರಂದು ಮಳವಳ್ಳಿ ಟೌನ್, ತಾಲ್ಲೋಕು ಕಛೇರಿಯ ಪಕ್ಕದ ಗಣೇಶ ದೇವಸ್ಥಾನದ ಬಳಿ ಮಂಜುಳಾ. ಹುಚ್ಚನದೊಡ್ಡಿ ಗ್ರಾಮ, ಮಳವಳ್ಳಿ ತಾಲ್ಲೋಕು ಎಂಬುವವರು ಹೊಟ್ಟೆನೋವು ತಾಳಲಾರದೇ ಯಾವುದೋ ಕ್ರಿಮಿನಾಷಕ ಔಷಧಿಯನ್ನು ಕುಡಿದು ಒದ್ದಾಡುತ್ತಿದ್ದವಳನ್ನು ಮಳವಳ್ಳಿ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗಳು ದಿನಾಂಕ: 24-06-2013 ರಂದು ರಾತ್ರಿ 09-15 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 262/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ  ಡಾ|| ಕೆ.ನರಸಿಂಹಾಚಾರ್, ಪ್ರಾದ್ಯಾಪಕರು, ಪಿ.ಇ.ಎಸ್.ಇಂಜಿನಿಯರಿಂಗ್ ಕಾಲೇಜು, ಮಂಡ್ಯ, ಮನೆ ನಂ. 484, 18ನೇ ಕ್ರಾಸ್, ವಿ.ವಿ.ನಗರ ರವರು ನೀಡಿದ ದೂರು ಏನೆಂದರೆ ದಿನಾಂಕ: 25-06-2013 ರಂದು ಯಾರೋ ಕಳ್ಳರು ಅವರ ಮನೆಯ ಕಬ್ಬಿಣದ ಜಾಲರಿಯ ಬೀಗವನ್ನು ಜಖಂ ಮಾಡಿ ಒಳಗಡೆ ಪ್ರವೇಶ ಮಾಡಿ ಹಿಂಭಾಗದ ಬಾಗಿಲ ಡೋರ್ ಲಾಕ್ ಅನ್ನು ಜಖಂ ಮಾಡಿ ಒಳಗಡೆ ಬಂದು ರೂಮಿನ ಡೋರ್ ಲಾಕ್ಗಳನ್ನು ಜಖಂ ಮಾಡಿ ಒಳಗಡೆ ಪ್ರವೇಶ ಮಾಡಿ ರೂಮಿನಲ್ಲಿದ್ದ ಚಿನ್ನದ ಒಡವೆಗಳನ್ನು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಚಿನ್ನದ ಒಡವೆಗಳ ಒಟ್ಟು ತೂಕ 153 ಗ್ರಾಂ ಇದ್ದು ಇವುಗಳ ಒಟ್ಟು ಮೌಲ್ಯ 3,75,000-00 ರೂ.ಗಳಾಗಿರುತ್ತದೆ ಅವುಗಳನ್ನು. ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 447-504-324-323-354-341-506 ಕೂಡ 34 ಐ.ಪಿ.ಸಿ ಹಾಗೂ ಎಸ್.ಸಿ 3ಕ್ಲಾಸ್ [1] [10], [11] ಎಸ್.ಸಿ/ಎಸ್.ಟಿ ಪಿ ಎ ಆಕ್ಟ್, 1989 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ  ಡಿ. ಪದ್ಮ ಕೊಂ. ಕುಮಾರ್, ಹುಳ್ಳೇನಹಳ್ಳಿ ಗ್ರಾಮ, ದುದ್ದ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಹೆಚ್.ಸಿ ನರಸಿಂಹರಾಜ ಉ!! ರಾಜ ಬಿನ್ ಹೆಚ್.ಸಿ ಚನ್ನೇಗೌಡ ಎಂಬುವವರು ಪಿರ್ಯಾದಿಯವರಿಗೆ ಲೇ ಒಲೆಯ ಬಡ್ಡಿ, ನಿನಗೆ ಇಷ್ಟಕ್ಕೆ ಮುಗಿಯಲಿಲ್ಲ, ನೀನು ಈ ನೀಲಗಿರಿ ಮರದ ವಿಚಾರವಾಗಿ ನನ್ನನ್ನು ಕೇಳಿಕೊಂಡು ಬಂದರೆ ನಾನು ಜೈಲಿಗೆ ಹೋದರೂ ಸರಿಯೇ, ನಿನ್ನ್ನನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

DAILY CRIME REPORT DATED : 24-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಗತ್ಯ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  2 ಕಳ್ಳತನ ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ನಾಗೇಶ ಬಿನ್. ಜವರೇಗೌಡ, 40 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸಃ ರೈಸ್ಮಿಲ್ ಪಕ್ಕ ಮಹದೇವಪುರ ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:24-06-2013ರಂದು ಹಿಂದಿನ ದಿನಗಳಲ್ಲಿ ಮಹದೇವಪುರ ಗ್ರಾಮದ ಸ್ನಾನಘಟ್ಟದ ಬಳಿ ಲಕ್ಷ್ಮಮ್ಮ ಕೊಂ. ಜವರೇಗೌಡ, 60 ವರ್ಷ, ಒಕ್ಕಲಿಗರು, ಮನೆಕೆಲಸ, ಮಂಡ್ಯಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ22-06-2013ರಂದು ಬೆಳಿಗ್ಗೆ 06-00 ಗಂಟೆಯ ಸಮಯದಲ್ಲಿ ನಮ್ಮ ತಾಯಿ ಲಕ್ಷ್ಮಮ್ಮ ರವರು ತನ್ನ ಮಗಳ ಮನೆ ಮಂಡ್ಯದಕೊಪ್ಪಲಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ದಿನಾಂಕ:24-06-2013 ರಂದು ಬೆಳಿಗ್ಗೆ ಸ್ನಾನಘಟಗಟದ ಬಳಿ ಒಂದು ಹೆಣ ನೀರಿನಲ್ಲಿ ತೇಲುತ್ತಿದೆ ಎಂದು ವಿಚಾರ ಗೊತ್ತಾಗಿ ಹೋಗಿ ನೋಡಲಾಗಿ ಇದು ನಮ್ಮ ತಾಯಿ ಲಕ್ಷ್ಮಮ್ಮ ರವರದಾಗಿರುತ್ತದೆ ತನ್ನ ಮಗಳ ಮನೆಗೆ ಹೋಗುವಾಗ ಮಲ ಮೂತ್ರ ಮಾಡಿ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲುಜಾರಿ ನೀರುಕುಡಿದು ಮೃತಪಟ್ಟಿರುವುದಾಗಿರುತ್ತದೆ ಈ ಬಗ್ಗೆ ಕ್ರಮ ಜರುಗಿಸಬೇಕಾಗಿ ಪ್ರಾರ್ಥನೆ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ.09/13 ಕಲಂ.174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ನಾಗರಾಜು ಬಿನ್. ಮನಿಯಯ್ಯ, ಗೋಪನಹಳ್ಳಿ ಗ್ರಾಮ ಸಿ.ಎ.ಕೆರೆ ಹೋಬಳಿ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಮುನಿಯಯ್ಯ ಬಿನ್. ಲೇಟ್.ಚನ್ನಯ್ಯ, 52ವರ್ಷ, ಗಂಗಮತ ಜನಾಂಗ, ವ್ಯವಸಾಯ, ಗೋಪನಹಳ್ಳಿ. ಗ್ರಾಮ, ಸಿ..ಎ.ಕೆರೆ ಹೋಬಳಿ. ಮದ್ದೂರು ತಾ. ರವರು ದಿನಾಂಕ:20-06-2012ರ ರಾತ್ರಿ ವೇಳೆಯಲ್ಲಿ ಪಿರ್ಯಾದಿಯವರ ತಂದೆ ಮನಿಯಪ್ಪ ಎಂಬುವರು ಹೊಟ್ಟನೋವಿನ ಔಷದಿಯನ್ನು ಕುಡಿಯುವ ಬದಲು ಪಕ್ಕದಲ್ಲಿದ್ದ ಇಲಿ ಔಷಧಿಯನ್ನು ಕುಡಿದಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:24-06-2013ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆಂದು ಈ ಬಗ್ಗೆ ಕ್ರಮ ಜರುಗಿಸಿಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಕುಮಾರಿ ಕೊಂ. ಶಿವಣ್ಣಶೆಟ್ಟಿ, ಮೋದೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಿವಣ್ಣಶೆಟ್ಟಿ ಬಿನ್. ಹಾಲಶೆಟ್ಟಿ, ಗಾಣಿಗಶೆಟ್ಟರು, ಮೋದೂರು ಗ್ರಾಮ, ಕೆ.ಆರ್.ಪೇಟೆ ತಾ. ಮಂಡ್ಯ ಜಿಲ್ಲೆರವರಿಗೆ ಸುಮಾರು ಮೂರು ವರ್ಷಗಳಿಂದಲೂ ಎದೆನೋವು ಮತ್ತು ಅಸ್ತಮ ಕಾಯಿಲೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಅವರು ದಿನಾಂಕ:23-06-2013ರ ರಾತ್ರಿ ಊಟ ಮಾಡಿ 09-00 ಗಂಟೆ ಸಮಯದಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಹಾಗೇ ಎದೆನೋವು ಕಾಣಿಸಿಕೊಂಡು ನಂ.108 ವಾಹನದ ಮೂಲಕ ಕೆ.ಆರ್.ಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1.ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 194/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 24-06-2013 ರಂದು ಪಿರ್ಯಾದಿ ಸೌಮ್ಯ ಬಿನ್. ಬೋರೇಗೌಡ, ಅರೆಚಾಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಬಸವರಾಜು ಬಿನ್. ಕರೀಗೌಡ, 5.1/2 ಅಡಿ ಎತ್ತರ, 31ವರ್ಷ, ಕಂದು ಬಣ್ಣ ರವರು ದಿನಾಂಕ:02-06-2013ರ ಬೆಳಿಗ್ಗೆ ಕಾಫಿ ಕುಡಿದು ತನ್ನ ಗಂಡ ಬಸವರಾಜು ರವರು ಮನೆಯಿಂದ ಹೋದವರು ಈವರೆವಿಗೂ ಬಂದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ ಇವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2.ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 196/13 ಕಲಂ. ಹೆಂಗಸು ಕಾಣಿಯಾಗಿದ್ದಾಳೆ.

      ದಿನಾಂಕ: 24-06-2013 ರಂದು ಪಿರ್ಯಾದಿ ಮಂಜು ಬಿನ್. ಗೂಳೇಗೌಡ, ಅರೆಚಾಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಅವರ ತಾಯಿ ಮಾದಮ್ಮ ಬಿನ್. ಗೂಳೀಗೌಡ, 5.5ಅಡಿ ಎತ್ತರ, 66 ವರ್ಷ, ಗೋದಿ ಮೈ ಬಣ್ಣ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:22-06-2013ರ ಬೆಳಿಗ್ಗೆ ತನ್ನ ತಾಯಿಯವರಾದ ಮಾದಮ್ಮರವರು ಮನೆಯಿಂದ ಹೋದವರು ಈವರೆವಿಗೂ ಬಂದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಇವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 182/13 ಕಲಂ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ. 

 ದಿನಾಂಕ: 24-06-2013 ರಂದು ಪಿರ್ಯಾದಿ ವೆಂಕಟರಾಮಶೆಟ್ಟಿ ಬಿನ್. ಲೇಟ್, ನರಸಶೆಟ್ಟಿ, ಬಣ್ಣನಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಪುಣ್ಯವತಿ ಕೋಂ. ಸೋಮಶೆಟ್ಟಿ, 29 ವರ್ಷ, ಹಾಗು ಮಗು ಪೂಜಾ, 3ವರ್ಷ ರವರುಗಳು ಅವರ ತವರು ಮನೆ ಬಣ್ಣನಕೆರೆ ಗ್ರಾಮಕ್ಕೆ ಹಬ್ಬದ ಪ್ರಯುಕ್ತ ಬಂದಿದ್ದು ದಿನಾಂಕ:07-04-2013ರಂದು ಬೆಳಗ್ಗೆ 12-00 ಗಂಟೆಯಲ್ಲಿ ಗಂಡನ ಮನೆ ಚಿಟ್ಟನಹಳ್ಳಿ ಗ್ರಾಮಕ್ಕೆ ಹೋಗುತ್ತೇನೆಂದು ಮನೆಗೆ ತಿಳಿಸಿ  ಜೊತೆಯಲ್ಲಿ ಹೆಣ್ಣುಮಗಳಾದ ಪೂಜಾಳನ್ನು ಜೊತೆಯಲ್ಲಿ ಕರೆದುಕೊಂಡು ಹೋದವಳು ತನ್ನ ಗಂಡನ ಮನೆಗೆ ಹೋಗಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅಗತ್ಯ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :


ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಕೆರೋಸಿನ್ ಆರ್ಡರ್ 1993, 3 ಕೆ.ಇ. ಆರ್ಡರ್. 1989 ಮತ್ತು 18(4) ಪಿ.ಡಿ.ಎಸ್. ಆರ್ಡರ್ 1992 ಕೂಡ 3 ಮತ್ತು 7 ಇ.ಸಿ. ಆಕ್ಟ್. 

ದಿನಾಂಕ: 24-06-2013 ರಂದು ಪಿರ್ಯಾದಿ ಎ.ಕೆ.ರಾಜೇಶ್, ಪಿ.ಐ. ಮಳವಳ್ಳಿ ಪುರ ಪೊಲೀಸ್ ಠಾಣೆ, ಮಳವಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಪಂಚಾಯಿತಿದಾರರನ್ನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-614 ಮತ್ತು ಸಿಪಿಸಿ-292ರವರುಗಳನ್ನು ಜೊತೆಯಲ್ಲಿ ಕರೆದುಕೊಂಡು, ಗಂಗಾಬೀದಿಯ ಚೌಡಮ್ಮ ಕೋಂ. ಲೇಟ್. ನಂಜಯ್ಯ, 45 ವರ್ಷ, ಲಕ್ಕಿದಾಸಯ್ಯನಕೇರಿ, ಗಂಗಾಬೀದಿ, ಮಳವಳ್ಳಿ ಟೌನ್ ರವರ ಮನೆಯ ಹತ್ತಿರ ಹೋದಾಗ, 45 ಲೀಟರ್ನ 04 ಕ್ಯಾನ್ಗಳು, ಸುಮಾರು 15ಲೀಟರ್ನ 1 ಕ್ಯಾನ್, 5  ಲೀಟರ್ನ 1 ಕ್ಯಾನ್, 1 ಅಳತೆಯ ಮಾಪನ, 1 ಆಲಿಕೆ, ಒಂದು ಪ್ಲಾಸ್ಟಿಕ್ ಪೈಪ್ನ್ನು ಇಟ್ಟುಕೊಂಡಿದ್ದು ಅವುಗಳ ಬಗ್ಗೆ ಲೈಸೆನ್ಸ್ನ್ನು ಕೇಳಲಾಗಿ ಇಲ್ಲವೆಂದು ತಿಳಿಸಿದ ಮೇರೆಗೆ ಸಕರ್ಾರದ ಪರವಾಗಿ ಸ್ವಯಂ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 145/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.

ದಿನಾಂಕ: 24-06-2013 ರಂದು ಪಿರ್ಯಾದಿ ಎ.ಅಂಕೇಗೌಡ ಬಿನ್. ಲೇಟ್. ಅಂಕೇಗೌಡ, 48 ವರ್ಷ, ವ್ಯವಸಾಯ, ನೆಲ್ಲೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಟ್ರಾಕ್ಟರ್ ಚಾಲಕ ಶಿವಕುಮಾರ್ ಬಿನ್. ಲೇಟ್ ಕರೀಪುಟ್ಟೇಗೌಡ, ನೆಲ್ಲೂರು ಗ್ರಾಮ ರವರು ತಮ್ಮ ಟ್ರಾಕ್ಟರ್ & ಟ್ರೈಲರ್ ನಂ. ಕೆ.ಎ.-11-ಟಿ-3248 ಮತ್ತು ಟ್ರೈಲರ್ ನಂ. ಕೆ.ಎ.-11-ಟಿ-7777 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ತಂಗಿ ನಿಂಗಮ್ಮಳಿಗೆ ಡಿಕ್ಕಿ ಹೊಡೆಸಿದ್ದರಿಂದ ನಿಂಗಮ್ಮಳನ ತಲೆಗೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಸಾವನ್ನಪ್ಪಿರುತ್ತಾಳೆ ಅಪಘಾತ ಮಾಡಿದ ಮೇಲ್ಕಂಡ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಕೊಟ್ಟ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 252/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಬಿ.ಸಂತೋಷ್ ಕುಮಾರ್ ಶೆಟ್ಟಿ ಬಿನ್. ಬಿ. ಆನಂದ ಶೆಟ್ಟಿ, ಶ್ರೀ ವಿನಾಯಕ ಜನರಲ್ ಸ್ಟೋರ್ ಅಂಗಡಿಯ ಮಾಲೀಕರು, ಎಸ್.ಎಫ್. ಸರ್ಕಲ್, ಎಂ.ಸಿ. ರಸ್ತೆ, ಮಂಡ್ಯ. ಭೋವಿ ಕಾಲೋನಿ, 8 ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 22/23-06-2013ರ ರಾತ್ರಿ ವೇಳೆ ಯಾರೋ ಕಳ್ಳರು ಎಸ್.ಎಫ್. ಸರ್ಕಲ್, ಎಂ.ಸಿ. ರಸ್ತೆ  ಮಂಡ್ಯ ಸಿಟಿ ಶ್ರೀ.ವಿನಾಯಕ ಜನರಲ್ ಸ್ಟೋರ್ ಅಂಗಡಿಯಲ್ಲಿ ಬೀಗ ಮೀಟಿ ಒಳ ಹೋಗಿ ಕ್ಯಾಶ್ ಕೌಂಟರ್ನಲ್ಲಿ ಪಕ್ಕಇರುವ ಬಾಕ್ಸ್ನಲ್ಲಿ ಒಂದು ಬ್ಯಾಗ್ನ ಒಳಗೆ ಪೇಮೆಂಟ್ ಮಾಡಲು ಒಂದು ವಾರದ ವ್ಯಾಪಾರದ ಹಣ ಸುಮಾರು 4 ಲಕ್ಷ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಂದು ಪತ್ತೆಗಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

2. ಕಿರಗಾವಲು ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 457-380 ಐ.ಪಿ.ಸಿ.

ದಿನಾಂಕ: 24-06-2013 ರಂದು ಪಿರ್ಯಾದಿ ಬಿ.ಆರ್. ಪುಟ್ಟಸ್ವಾಮಿ, ಕಂದಾಯ ಪರಿವೀಕ್ಷಕರು, ಕಿರುಗಾವಲು ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ದಿನಾಂಕ: 23-06-2013ರಂದು ರಾತ್ರಿ  ವೀರಭದ್ರಸ್ವಾಮಿ ದೇವಸ್ಠಾನದ ಮುಂಬಾಗದ ಬೀಗ ಹಾಗೂ ಹುಂಡಿಯ ಬೀಗವನ್ನು ಮುರಿದು ಸುಮಾರು 8000/ ರೂಗಳನ್ನು ಕಳವು ಮಾಡಿರುತ್ತಾರೆ ಈ ಬಗ್ಗೆ ಸೂಕ್ರ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED: 23-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  1 ವರದಕ್ಷಿಣೆ ಕಿರುಕುಳ ಪ್ರಕರಣ,  1 ರಾಬರಿ ಪ್ರಕರಣ ಹಾಗು ಇತರೆ 15 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 

  ಯು.ಡಿ.ಆರ್. ಪ್ರಕರಣ : 

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ ಸಂ: 30/13 ಕಲಂ.174 ಸಿ.ಆರ್.ಪಿ.ಸಿ.

      ದಿನಾಂಕ: ದಿನಾಂಕ:23-06-2013  ರಂದು ಪಿರ್ಯಾದಿ ಜಯತೀರ್ಥ ಬಿನ್ ಎಸ್ ಕೆ ಗೋಪಿನಾಥ 22 ವರ್ಷ ಬ್ರಾಹ್ಮಣರು ಅರ್ಚಕರ ವೃತ್ತಿ ವಾಸ ನಂ 77 ಮುಖ್ಯ ರಸ್ತೆ ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:23-06-2013  ರ ಬೆಳಿಗ್ಗೆ 9-00 ಗಂಟೆಗಿಂತ ಹಿಂದಿನ ಸಮಯದಲ್ಲಿ ಪಶ್ಚಿಮವಾಹಿನಿ ಬಳಿ ಮೃತ ಅಪರಿಚಿತ ಗಂಡಸು ಸುಮಾರು 65-70 ವರ್ಷ ಈಗ್ಗೆ 5-6 ತಿಂಗಳಿಂದ ಪಶ್ಚಿಮವಾಹಿನಿ ಬಳಿ ಕೆಲಸ ಮಾಡಿಕೊಂಡು ಬರುವ ಭಕ್ತಧೀಗಳಿಂದ ಭಿಕ್ಷೆ ಮಾಡಿಕೊಂಡು ಬಂದ ಹಣದಿಂದ ಮಧ್ಯಪಾನ ಮಾಡಿ ಅಲ್ಲಿ ಇಲ್ಲಿ ಮಲಗುತ್ತಿದ್ದು ಸರಿಯಾಗಿ ಊಟಮಾಡದೇ ದೇಹ ನಿಂತ್ರಾಣಗೊಂಡಿದ್ದು, ಆತ ಬದುಕಿದ್ದಾಗ ನನ್ನ ಹೆಸರು ಕಡಗೂಟ ಶೆಟ್ಟಹಳ್ಳಿ ಎಂದು ತಿಳಿಸಿದ್ದು,  ದಿನಾಂಕ;-23-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ದೇವಸ್ಥಾನದ ಬಳಿ ಕುಳಿತ್ತಿದ್ದು 09-00 ಗಂಟೆಯಲ್ಲಿ ನೋಡಿದ್ದಾಗ ಸತ್ತುಹೋಗಿದ್ದನು. ಈ ಬಗ್ಗೆ ಮುಂದಿನ ಕ್ರಮ ಜರುಗೀಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ. 

  ಮನುಷ್ಯ ಕಾಣೆಯಾದ ಪ್ರಕರಣಗಳು

1.ಮಂಡ್ಯಪೂರ್ವ ಪೊಲೀಸ್ ಠಾಣೆ, ಮಂಡ್ಯ ಮೊ ಸಂ: 250/13 ಕಲಂ: ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: ದಿನಾಂಕ:23-06-2013  ರಂದು ಪಿರ್ಯಾದಿ ಕೆ,ಸಿದ್ದರಾಜು ಬಿನ್ ಕಾಳಪ್ಪ ವಾಸ ಸೀತಾರಾಮಾಂಜನೇಯ ರೈಸ್ ಮಿಲ್ ಹಿಂಬಾಗ,  ಗಾಡಿ ಚಿಕ್ಕಣ್ಣನವರ ಮನೆ, ಗುತ್ತಲು ಮಂಡ್ಯ ಸಿಟಿರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-06-2013 ರಂದು ರಾತ್ರಿ 08-30 ಗಂಟೆಯಲ್ಲಿ ಮಂಡ್ಯ ಸಿಟಿ,  ಎಸ್.ಎಪ್ ಸರ್ಕಲ್ ಬಳಿಯಿಂದ ನಳಿನಿ  ಮನೆಗೆ ಹೋಗುತ್ತೇನಂತ ಹೇಳಿ ಹೋದಳು ಆದರೆ ನನ್ನ ಹೆಂಡತಿ ಮನೆಗೆ ಬರಲಿಲ್ಲ. ನಾನು ನಮ್ಮ ಸಂಬಂದಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಅಲ್ಲಿಗೂ ಸಹ ಹೋಗಿರುವುದಿಲ್ಲ. ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ ಆದ್ದರಿಂದ  ಅವರನ್ನು ಪತ್ತೆ  ಮಾಡಿಕೊಡಬೇಕೆಂದು  ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.  

2.ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ ಸಂ: 138/13 ಕಲಂ ಹುಡುಗ ಕಾಣೆಯಾಗಿದ್ದಾನೆ,

    ದಿನಾಂಕ:23-06-2013ರಂದು ಪಿರ್ಯಾದಿ  ಯಲಕ್ಕಿ ತಿಮ್ಮೆಗೌಡ, ಬೆಟ್ಟಗೊನಹಳ್ಳಿರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 20-06-2013ರಂದು ಸಂಜಯ್, 13 ವರ್ಷ  ಶಾಲೆಗೆ ಹೊಗಿಬರುತ್ತೇನೆಂದು ಹೊದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಆದ್ದರಿಂದ ಅವನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 3(1) (10) ಎಸ್.ಸಿ. & ಎಸ್.ಟಿ. ಆಕ್ಟ್ ಹಾಗೂ 504 ಕೂಡ 34 ಐ.ಪಿ.ಸಿ.

ದಿನಾಂಕ:23-06-2013ರಂದು ಪಿರ್ಯಾದಿ ರೇವಣ್ಣ. ಟಿ.ಎಂ. ಬಿನ್. ಮರಿಲಿಂಗಯ್ಯ, ತಿರುಮಲಾಪುರ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಪುರುಷೋತ್ತಮ ಬಿನ್ ಶಿವಣ್ಣ, 2]ಯೋಗೇಶ ಬಿನ್ ಶಿವಣ್ಣ, ಇಬ್ಬರೂ ದೊಡ್ಡಬ್ಯಾಡರಹಳ್ಳಿ ಗ್ರಾಮ ರವರುಗಳು ದಿನಾಂಕ: 19-06-2013ರಂದು 11-00 ಗಂಟೆಯಲ್ಲಿ ನಾನು ಅಂದರೆ ರೇವಣ್ಣ .ಟಿ.ಎಂ. ನಾವು ಚಕ್ಕು ವಿತರಣೆ ಮಾಡುತ್ತಿದ್ದ. ಸಂದರ್ಭದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಕರ್ಾರಿ ಕೆಲಸಕ್ಕೆ ಅಡ್ಡಿಪಡಿಸಿ ಗ್ರಾಮ ಲೆಕ್ಕಿಗರ ಎದುರಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ''ಹೊಲೆಯ ನನ್ನ ಮಗನೆ ಎಂದು ದಿನಾಂಕ-19-06-2013 ರಂದು ಬೆಳಗ್ಗೆ 11-00 ಘಂಟೆ ಸಮಯದಲ್ಲಿ ದೊಡ್ಡಬ್ಯಾಡರಹಳ್ಳಿ ಗ್ರಾಮದ ಶಿವಣ್ಣ ರವರ ಮಕ್ಕಳಾದ 1ನೇ ಪುರುಷೋತ್ತಮ ಮತ್ತು     2ನೇ ಯೋಗೇಶ ರವರು ಜಾತಿ ನಿಂದನೆಮಾಡಿ ನನ್ನನ್ನು ಅವಮಾನಗೊಳಿಸಿರುತ್ತಾರೆ. ಮತ್ತು ನನಗೆ ಮಾನಸಿಕವಾಗಿ ತುಂಬ ಬೇಸರವಾಗಿದ್ದು ಇವರ ಮೇಲೆ ಕಾನೂನು ರೀತಿ ಶಿಸ್ತಿನ ಕ್ರಮ ಕೈಗೊಂಡು  ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಮನವಿ.ನಾನು ಈಗಾಗಲೇ ತಾಲ್ಲೋಕು ದಂಡಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದು, ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

 ವರದಕ್ಷಿಣೆ ಕಿರುಕುಳ ಪ್ರಕರಣ  

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 180/13 ಕಲಂ. 498(ಎ)-34 ಐ.ಪಿ.ಸಿ. ಮತ್ತು 3-4 ಡಿ.ಪಿ. ಆಕ್ಟ್.
     
         ದಿನಾಂಕ:23-06-2013ರಂದು ಪಿರ್ಯಾದಿ ಗೀತಾ ಕೊಂ. ಲೇಟ್.ಗೋವಿಂದರಾಜು, ಚೌಡೇನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ   ಪಿರ್ಯಾದಿಯವರ ಅತ್ತೆ   ಅಣ್ಣೇಗೌಡ ಹಾಗು ಮಾವ ರತ್ನಮ್ಮ ಇಬ್ಬರೂ ಚೌಡೇನಹಳ್ಳಿ  ಗ್ರಾಮ ರವರುಗಳು  ಅವರ ಮಗ,    ಪಿರ್ಯಾದಿವರ ಗಂಡ ಲೇಟ್ ಗೋವಿಂದರಾಜನಿಗೆ ಅನೇಕ ವರ್ಷಗಳಿಂದ ಏಡ್ಸ್ ರೋಗವಿದ್ದರೂ ಸಹ ವರದಕ್ಷಿಣೆ ಆಸೆಗೋಸ್ಕರ ಪಿರ್ಯಾದಿಯೊಡನೆ ವಿವಾಹಮಾಡಿ ವಂಚಿಸಿ 1.00.000/- ರೂಪಾಯಿ ಹಣ, 85 ಗ್ರಾಂ ಚಿನ್ನ, 3/4 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ಲಪಟಾಯಿಸಿ ತವರುಮನೆಗೆ ಕಳುಹಿಸಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ತುಂಬಾ ಹಿಂಸೆ ಹಾಗು ಅವಮಾನವಾಗಿರುತ್ತದೆ ಆದ್ದರಿಂದ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ. 

 ರಾಬರಿ ಪ್ರಕರಣ 

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 251/13 ಕಲಂ. 392 ಐ.ಪಿ.ಸಿ.

ದಿನಾಂಕ:23-06-2013ರಂದು ಪಿರ್ಯಾದಿ ಮಂಜುಳ ಬಿನ್. ಯೋನಂದ, ಸ್ವರ್ಣಸಂದ್ರ, ಮಂಡ್ಯ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23-06-2013ರಂದು ರಾತ್ರಿ 1045 ಗಂಟೆಯಲ್ಲಿ ಸ್ವರ್ಣಸಂದ್ರದ ಅವರ ಅಂಗಡಿಯ ಬಾಗಿಲು ಮುಚ್ದಿಕೊಂಡು ಮನೆಗೆ ಹೋಗುತ್ತಿದ್ಧಾಗ ಯಾರೋ ಕಳ್ಳರು ಹಿಂಬಾಲಿಸಿ ಕತ್ತಿನಲ್ಲಿದ್ದ ತಾಳಿ ಮತ್ತು ಎರಡು ಗುಂಡುಗಳನ್ನು  ಕಿತ್ತುಕೊಂಡು ಬಿಳಿ ಬಣ್ಣದ ಹೊಂಡ ಆಕ್ಟಿವ್ ನಲ್ಲಿ ಹೋಗಿರುತ್ತಾರೆಂದು ಅದರ ತೂಕ ಒಟ್ಟು 8 ಗ್ರಾಂ ಇರುತ್ತದೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 22-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ವಾಹನ ಕಳವು ಪ್ರಕರಣ,  1 ಮಹಿಳಾ ದೌಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನಿಲೆಂಡರ್ ಕಾಯಿದೆ-1961 ಹಾಗು ಕರ್ನಾಟಕ  ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004 ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಆಕಸ್ಮಿಕ ಬೆಂಕಿ ನಷ್ಟ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 8 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 388/13 ಕಲಂ. 366 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಶಿವಾನಂದ ಬಿನ್. ಮರೀಗೌಡ, ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವ ಬಿನ್. ಲೇಟ್ ಚಂದ್ರು, ಕೀಲಾರ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21-06-2013ರಂದು ಮಧ್ಯಾಹ್ನ,  ಕ್ಯಾತನಹಳ್ಳಿ, ಪಾಂಡವಪುರ ತಾ. ರವರು ಪಿರ್ಯಾದಿಯವರ ಮಗಳನ್ನು ಪುಸಲಾಯಿಸಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ಅನುಮಾನವಿರುತ್ತದೆ ಅವಳನ್ನು ಪತ್ತೆಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 88/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 22-06-2013 ರಂದು ಪಿರ್ಯಾದಿ ಶಫೀ ಅಹಮದ್ ಬಿನ್. ಆಲಮ್ಬಾಯ್, ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಹೆಂಡತಿ ಸುಮಯಾಭಾನು ಕೋಂ. ಶéಫೀ ಅಹಮದ್, 28ವರ್ಷ, ಮುಸ್ಲಿಂ ಜನಾಂಗ, ಬಸರಾಳು ಗ್ರಾಮ ಮಂಡ್ಯ ರವರು ಮನೆಯಿಂದ ಹೊರಗೆ ಹೋದವಳು ವಾಪಸ್ಸ್ ಬಂದಿರುವುದಿಲ್ಲ ಕಾಣೆಯಾಗಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 277/13 ಕಲಂ. 102, 41(ಡಿ) ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಗೋಪಾಲ, ಸಿಪಿಸಿ-694 ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಗೌತಮ್ ಶಂಕರ್ ವಿ.ಆರ್. @ ಲವ ವಳೆಗೆರೆಹಳ್ಳಿ ಮದ್ದೂರು ತಾ. ಎಂಬುವವರು ದಿನಾಂಕ: 21-06-2013ರಂದು ರಾತ್ರಿ ಕೆಎ06-ಎಕ್ಸ್-1280 ಹಿರೋಹೊಂಡಾ ಪ್ಯಾಷನ್ ಪ್ಲಸ್ ಗಾಡಿಯನ್ನು ರಾಮನಗರದ ಕೃಷ್ಣ ಹಾಗೂ ಆರೋಪಿಯು ಕದ್ದು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಕರ್ತವ್ಯದಲ್ಲಿದ್ದ ಪಿರ್ಯಾದಿಯು ವಶಕ್ಕೆ ತೆಗೆದುಕೊಂಡಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮಹಿಳಾ ದೌಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 278/13 ಕಲಂ. 506-34-498(ಎ)-504-323 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಸಿ.ಡಿ.ಸುಚಿತ್ರ ಕೋಂ ಜಿ.ಪಿ.ಪ್ರತಾಪ್ ಗೆಜ್ಜಲಗೆರೆ ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅವರ ಗಂಡ 1)ಜಿ.ಪಿ. ಪ್ರತಾಪ, ಅತ್ತೆ 2)ಸರೋಜಮ್ಮ ಇಬ್ಬರೂ ಗೆಜ್ಜಲಗೆರೆ ಗ್ರಾಮದವರುಗಳು ದಿನಾಂಕ:21-6-2013ರಂದು ಪಿರ್ಯಾದಿಯವರಿಗೆ ತಮ್ಮ ಖಚರ್ಿಗೆ ಹಣ ತರುವಂತೆ ಹೊಡೆದು ಬೈದು ತೊಂದರೆ ಕೊಡುತ್ತಿದ್ದು ದೈಹಿಕವಾಗಿ ಮಾನಸಿಕವಾಗಿ ಹಿಂಸೆನಿಡುತ್ತಿದ್ದು ಮನೆ ಬಿಟ್ಟು ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


 ಮನಿಲೆಂಡರ್ ಕಾಯಿದೆ-1961 ಹಾಗು ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004 ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 142/13 ಕಲಂ. 504-506-306 ಐ.ಪಿ.ಸಿ. ಹಾಗೂ 39 ಮನಿಲೆಂಡರ್ ಕಾಯಿದೆ-1961, ಮತ್ತು 3 & 4 ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004.

ದಿನಾಂಕ: 22-06-2013 ರಂದು ಪಿರ್ಯಾದಿ ಹೆಚ್.ಸಿ.ಅಭಿಷೇಕ್ ಗೌಡ ಬಿನ್. ಹೆಚ್.ಜೆ. ಚಂದ್ರಶೇಖರ್, 20 ವರ್ಷ, ವ್ಯವಸಾಯ, ಒಕ್ಕಲಿಗರು, ಕೆಸ್ತೂರು ಟೌನ್,  ಆತಗೂರು ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿತ ಡಿ. ರಾಮೇಗೌಡ ಬಿನ್. ದಾಸೇಗೌಡ, ಕೆಸ್ತೂರು ಟೌನ್ ರವರು ದಿನಾಂಕ: 12-06-2013 ರಂದು ಮಧ್ಯಾಹ್ನ 12-30 ಗಂಟೆಯ ಸಮಯದಲ್ಲಿ ಆರೋಪಿಯು ಕೊಟ್ಟಿದ್ದ ಸಾಲದ ಹಣದ ವಿಚಾರವಾಗಿ ನೀನು ಸಾಲ ತೀರಿಸಲಾಗದೆ ಹೋದರೆ ನೀನು ಸಾಯುವುದೇ ಮೇಲೂ ಎಂದು ಬೈದಿದ್ದರಿಂದ ಮನನೊಂದು ಯಾವುದೋ ಕ್ರಿಮಿನಾಶಕವನ್ನು ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಮಂಡ್ಯ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರುತ್ತಾರೆ ಆದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಮಂಜುಳ @ ಮಂಜು ಕೋಂ. ರಾಜು, ಕೆರಗೋಡು ಗ್ರಾಮ, ಮಂಡ್ಯ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾಯಿ  ಚನ್ನಮ್ಮ ಕೋಂ. ಚಿಕ್ಕಮುದ್ದೇಗೌಡ, ಸುಮಾರು 65 ವರ್ಷ, ಕೆರಗೋಡು ಗ್ರಾಮ, ಮಂಡ್ಯ ತಾ. ರವರು ಪಿರ್ಯಾದಿಯವರ ಮನೆಯ ಹಿಂದೆ ಗದ್ದೆಯ ಕಡೆಗೆ ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಹೆಜ್ಜೆ ಇಟ್ಟು, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರನ ನೊಂದಾಯಿಸಲಾಗಿದೆ.  


ಆಕಸ್ಮಿಕ ಬೆಂಕಿ ನಷ್ಟ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 220/13 ಕಲಂ. 435 ಐ.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಸಿ.ಪ್ರಕಾಶ್ ಬಿನ್. ಚಿಕ್ಕಪುಟೇಗೌಡ, ಚಿಕ್ಕಮರಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರ ಕಬ್ಬಿನ ಬೆಳೆಗೆ   ದಿನಾಂಕ: 21-06-2013ರಂದು ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ವೇಸ್ಟ್.ಡೀಸಲ್ ಹಾಕಿ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿರುತ್ತಾರೆ ಈ ಘಟನೆಯಿಂದ ಪಿರ್ಯಾದಿಗೆ ಸುಮಾರು 100.000/- ( ಒಂದು ಲಕ್ಷ) ರೂಪಾಯಿಗಳಷ್ಟು. ನಷ್ಟ ಆಗಿರುತ್ತದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ.


 ಕಳ್ಳತನ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 147/13 ಕಲಂ. 457-380 ಐ.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಜೇತುಸಿಂಗ್ ಬಿನ್. ಗಣೇಶ್ ಜೀ, ಕಿಕ್ಕೇರಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21-06-2013ರ ರಾತ್ರಿ ಯಾರೋ ಕಳ್ಳರು ಕಿಕ್ಕೇರಿ ಟೌನ್ ನಲ್ಲಿರುವ ಪಿರ್ಯಾದಿಯವರ ಚಿಲ್ಲರೆ ಅಂಗಡಿಯ ಬೀಗ ಮುರಿದು ರೂ 10,000/- ರೂ ನಗದು ಮತ್ತು ರೂ. 14,000/- ರೂ ಮೌಲ್ಯದ ಪದಾರ್ಥಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ .ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

DAILY CRIME REPORT DATED : 21-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಸ್ಪೋಟಕ ವಸ್ತುಗಳ ಅಧಿನಿಯಮ ಕಾಯಿದೆ ಪ್ರಕರಣ, 1ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ,   1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ ಸಂ101/13 ಕಲಂ: ಕಲಂ 342. 44 ಎಂ.ಎಂ.ಸಿ.ಆರ್. 1994 ಹಾಗು 4 (1ಎ) 21 (1-5) ಎಂ.ಎಂ.ಆರ್.ಡಿ. 1957 ಕೂಡ 379 ಐ.ಪಿ.ಸಿ.

     ದಿನಾಂಕ:21-06-2013 ರಂದು ಪಿರ್ಯಾದಿ ಹೆಚ್.ಆರ್. ಮಲ್ಲಿಕಾರ್ಜುನಸ್ವಾ, ರಾಜಸ್ವನಿರೀಕ್ಷಕರು, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ನಾಗಮಂಗಲ ತಾಲ್ಲೂಕು ದಂಡಾಧಿಕಾರಿರವರ ಆದೇಶದಂತೆ ಅಕ್ರಮ ಮರಳು ಸಾಗಣಿಕೆ ಮಾಡುತ್ತಿರುವ ಲಾರಿಗಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ರವರು ಮತ್ತು ಅವರ ಸಿಬ್ಬಂದಿಯವರ ಸಹಾಯದೊಡನೆ ಹೋಗಿ ಅಕ್ರಮ ಮರಳು ಸಾಗಿಸುತ್ತಿರುವವರನ್ನು ಚಕ್ ಮಾಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ನೀಡಿದ ಆಧೇಶದ ಪ್ರಕಾರ  ಕೆ.ಎ.54-3906, ಲಾರಿಯ ಚಾಲಕನ ಹೆಸರು ವಿಳಾಸ ತಿಳಿಯ ಬೇಕಾಗಿರುತ್ತದೆ ಸದರಿ ಲಾರಿಯ ಚಾಲಕನನ್ನು ಪತ್ತೆ ಮಾಡಿ ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿದ್ದ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 142/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ನಂಜುಂಡಸ್ವಾಮಿ ಬಿನ್. ಲೇಟ್. ಚನ್ನವಿರಪ್ಪ. 39 ವರ್ಷ, ಲಿಂಗಾಯ್ತರು, ವ್ಯವಸಾಯ, ಕೋರೇಗಾಲ ಗ್ರಾಮ, ಕಸಬಾ ಹೋಬಳಿ. ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ 55 ಕೆ 1793  ರ ಮೋಟಾರ್ ಸೈಕಲ್ ಸವಾರ ಪುಟ್ಟಸ್ವಾಮಿ ರವರು ದಿನಾಂಕ : 20-06-2013 ರಂದು  ಬೆಳಿಗ್ಗೆ 09.00 ಗಂಟೆಯ ಸಮಯದಲ್ಲಿ ಮಳವಳ್ಳಿ - ಕನಕಪುರ ರಸ್ತೆಯ ಕ್ಯಾತೇಗೌಡನ ದೊಡ್ಡಿ ಹತ್ತಿರ  ಅವರ ಮೋಟಾರ್ಸೈಕಲ್ನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದಾಗ ಒಂದು ನಾಯಿಯು ಮೋಟಾರ್ ಸೈಕಲ್ಗೆ ಅಡ್ಡಲಾಗಿ ನುಗ್ಗಿದಾಗ  ನಾಯಿಯನ್ನು ನಿಯಂತ್ತಿಸಲು ಹೋಗಿ ಮೋಟಾರ್ ಸೈಕಲ್  ನಿಯಂತ್ರಣಕ್ಕೆ ಸಿಗದೆ ರಸ್ತೆಯ ಬಲಬಾಗಕ್ಕೆ ಬಿದ್ದು  ಪುಟ್ಟಸ್ವಾಮಿಗೆ ಎಡಬಾಗದ ತಲೆ ಎಡತೋಳು  ಎಡಕಿವಿ ಮೂಗು ಮತ್ತು ಬಾಯಿಯಿಂದ  ರಕ್ತ  ಬಂದು ಚಿಕಿತ್ಸೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ  ಕಾವೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು.ಚಿಕಿತ್ಸೆ ಫಲಕಾರಿಯಾಗದೆ  ಈ ದಿವಸ  ಬೆಳಗಿನ ಜಾವ 3.30 ಗಂಟೆಯ  ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಯು.ಡಿ.ಆರ್. ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ಕೆ.ಕೆ. ಪಲ್ಲವಿ ಕೋಂ. ಕೃಷ್ಣ, ಯಲಾದಹಳ್ಳಿ ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 20-06-2013 ರಂದು ಸಂಜೆ 07-00 ಗಂಟೆಯಲ್ಲಿ, ಯಾಲಾದಹಳ್ಳಿ ಗ್ರಾಮದ, ಕಿಕ್ಕೇರಿ ಹೋಬಳಿ, ಕೆ.ಆರ್. ಪೇಟೆ ತಾಲ್ಲೂಕಿನ ಸರ್ವೆ ನಂ. 111ರ ಜಮೀನಿನಲ್ಲಿ, ಕೃಷ್ಣ ಬಿನ್. ತಮ್ಮೇಗೌಡ, 26 ವರ್ಷ, ಯಲಾದಹಳ್ಳಿ ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು. ರವರು ಜಮೀನಿನಲ್ಲಿ ಹುಲ್ಲು ಕುಯ್ಯುವಾಗ ಹುಲ್ಲಿನ ಒಳಗಡೆ ಇದ್ದ ನಾಗರಹಾವು ಮೃತ ಕೃಷ್ಣರವರ ಎಡಕಾಲಿನ ಹೆಬ್ಬೆರಳಿಗೆ ಕಚ್ಚಿ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ ತಾವು ಬಂದು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆನೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ದೇವರಾಜು ಬಿನ್. ದೊಡ್ಡಮಾಗೇಗೌಡ, ವಡ್ಡರಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೊಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 20-06-2013 ರಂದು ಕಿಕ್ಕರಿ ಅಮಾನಿಕರೆಯಲ್ಲಿ, ಕಿಕ್ಕೇರಿ ಟೌನ್,ಕೆ.ಆರ್ ಪೇಟೆ ತಾಲ್ಲೋಕಿನ ದೊಡ್ಡಮೊಗೇಗೌಡ, ವಡ್ಡರಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೋಕು ರವರಿಗೆ ಆಗಾಗ್ಗೆ ಬುದ್ದಿ ಭ್ರಮಣೆಯಂತೆ ಆಡುತ್ತಿದ್ದು ದಿನಾಂಕ:20-06-2013 ರಂದು ಯಾವುದೋ ವಾಹನದಲ್ಲಿ ಕಿಕ್ಕೇರಿಗೆ ಬಂದು ಕಿಕ್ಕೇರಿಯ ಅಮಾನಿಕೆರೆಯಲ್ಲಿ ನೀರು ತೆಗೆದುಕೊಳ್ಳಲೋ ಅಥವಾ ನೀರು ಕುಡಿಯಲೋ ಹೋಗಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ. 

3. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-06-2013 ರಂದು ಪಿರ್ಯಾದಿ ನಾರಾಯಣ ಬಿನ್. ಲೇಟ್. ಚಿಕ್ಕದೇವೇಗೌಡ, 45 ವರ್ಷ, ಒಕ್ಕಲಿಗರು, ಮಂಡ್ಯಕೊಪ್ಪಲು ಗ್ರಾಮ,  ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 21-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಪಿರ್ಯಾದಿಯವರ ಬಾಬ್ತು ಸವರ್ೆ. ನಂ.773/ಪೈಕಿ2 ಮತ್ತು 772/ಪಿರ ಜಮೀನಿನಲಿ,್ಲ ಮಂಡ್ಯಕೊಪ್ಪಲು ಗ್ರಾಮ, ಅರಕೆರೆ ಹೋಬಳಿಯ ಅವರ ಜಮೀನಿನಲ್ಲಿ ರಾಗಿ ತೆನೆಯನ್ನು ಕುಯ್ಯುತ್ತಿದ್ದಾಗ ಮಳೆಗಾಳಿಯಿಂದ ಕಟ್ಟಾಗಿ ತನ್ನ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ತ್ ಸಂಪರ್ಕದ ವೈರು ಆಕಸ್ಮಿಕವಾಗಿ ಕರೀಗೌಡ @ ಶಂಕರೇಗೌಡನ ಬಲಗೈ ಮೊಣಕೈಗೆ ತಗುಲಿ ಶರೀರದಲ್ಲಿ ವಿದ್ಯುತ್ ಹರಿದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 259/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 21-06-2013 ರಂದು ಪಿರ್ಯಾದಿ ಹನುಮಂತೇಗೌಡ ಬಿನ್. ಲೇಟ್. ಕಾಡೇಗೌಡ, ಕೆಂಪೇಗೌಡನಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಾರಾ ಬಿನ್. ಹನುಮಂತೇಗೌಡ, 19 ವರ್ಷ, ಕೆಂಪೇಗೌಡನಕೊಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಡ್ಯದ ಹೊಸಹಳ್ಳಿ ಸರ್ಕಲ್ಗೆ ಬಂದಾಗ ತಾರಾಳು ಚಿಕ್ಕತಾಯಮ್ಮಳಿಗೆ ನೀನು ಎಂ.ವಿ.ಜಿ. ಬೇಕರಿ ಹತ್ತಿರ ಇರು, ತಾನು ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೊಸಹಳ್ಳಿ ಸರ್ಕಲ್ನಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದು ಇದುವರೆಗೂ ವಾಪಸ್ ಬಾರದೆ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 260/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 21-06-2013 ರಂದು ಪಿರ್ಯಾದಿ ಭಾಗ್ಯ ಕೋಂ. ನಾಗರಾಜು, 1ನೇ ಮಹಡಿ, ಜಯಪ್ರಕಾಶ್ ರೈಸ್ಮಿಲ್, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-06-13 ರಂದು ಫಿರ್ಯಾದಿಯವರ ಮನೆಯಿಂದ, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ, ನಾಗರಾಜು, 32 ವರ್ಷ, ವಾಸ 1ನೇ ಮಹಡಿ, ಜಯಪ್ರಕಾಶ್ ರೈಸ್ಮಿಲ್, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು, ಅವರ ಬಾಬ್ತು ಕೆಎ-11-ಎಸ್.-3112 ನಂಬರಿನ ಹೀರೊಹೊಂಡ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 218/13 ಕಲಂ. 457-380 ಐ.ಪಿ.ಸಿ.

ದಿನಾಂಕ: 21-06-2013 ರಂದು ಪಿರ್ಯಾದಿ ಮಹದೇವೇಗೌಡ ಬಿನ್. ನರಸೇಗೌಡ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ರಾತ್ರಿ ವೇಳೆ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅವರ ಬಾಬ್ತು ಮೋಟಾರ್    ಹಾರ್ಮಿಚರ್  ಇರುವ ಭಾಗ ಇತರೆ ವಸ್ತುಗಳು ಅವುಗಳ ಒಟ್ಟು ಅಂದಾಜು ಸುಮಾರು 20-ರಿಂದ 25 ಸಾವಿರ ಬೆಲೆ ಬಾಳುತ್ತವೆ. ನಾನು ಎಲ್ಲಾ ಕಡೆ ಹುಡುಕಿ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಕಳವು ಆಗಿರುವ ವಿದ್ಯುತ್ ಮೋಟಾರ್ನ ತಾಮ್ರದ ಭಾಗದ ಹಾರ್ಮಿಚರ್ ಪತ್ತೆಮಾಡಿ, ಸಂಬಂಧಪಟ್ಟವರ ಮೇಲೆ ಸೂಕ್ತಕ್ರಮ ಕ್ಯೆಗೊಳ್ಳಲು ಕೋರಿ ನೀಡಿರುವ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸ್ಪೋಟಕ ವಸ್ತುಗಳ ಅಧಿನಿಯಮ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 219/13 ಕಲಂ. 285 ಐ.ಪಿ.ಸಿ. ಮತ್ತು 3  ಮತ್ತು 5 ಸ್ಪೋಟಕ ವಸ್ತುಗಳ ಅದಿನಿಯಮ 1908.

ದಿನಾಂಕ: 21-06-2013 ರಂದು ಪಿರ್ಯಾದಿ ಕೆ.ನರೇಂದ್ರ ಕುಮಾರ್. ಪಿ.ಎಸ್.ಐ. ಪಾಂಡವಪುರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:21-06-2013ರ ಸಂಜೆ 05-15 ರಿಂದ 06-15. ಗಂಟೆಯವರೆಗೆ, ಹೊನಗಾನಹಳ್ಳಿ ಎಲ್ಲೆಗೆ ಸೇರಿದ ರಾಮಣ್ಣ ಬಿನ್. ಮರಿಲಿಂಗಪ್ಪ ರವರಿಗೆ ಸೇರಿದ ಕಲ್ಲುಕೋರೆಯಲ್ಲಿ ಆರೋಪಿಗಳಾದ ]] ಮಾರಿಮುತ್ತು ಬಿನ್. ಲೇಟ್. ಕೊಳಂದೆ,  ಬೋವಿ ಜನಾಂಗ, ಕಲ್ಲುಕೆಲಸ, ಸ್ವಂತ ಊರು ತಾರಕಾ ಡ್ಯಾಂ, ಹೆಚ್.ಡಿ.ಕೋಟೆ ತಾ, ಮೈಸೂರು ಜಿಲ್ಲೆ, ಹಾಲಿ ವಾಸ ಹೊನಗಾನಹಳ್ಳಿ ಗ್ರಾಮ ಹಾಗು 2] ರಾಮಣ್ಣ ಬಿನ್. ಮರಿಲಿಂಗಪ್ಪ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ಗಳು ರೈತಾಪಿ ವರ್ಗದವರು ಕೆಲಸ ಮಾಡುವ ಹಾಗೂ ಓಡಾಡುವ ಸ್ಥಳದಲ್ಲಿ ಯಾವುದೇ ಸುರಕ್ಷತೆಯ ಮುಂಜಾಗ್ರತೆಯನ್ನು ಕೈಗೊಳ್ಳದೇ ಅನಧಿಕೃತವಾಗಿ ಕಲ್ಲು ಬಂಡೆಗಳನ್ನು ಸಿಡಿಸಲು ಸಿದ್ದತೆ ಮಾಡಿಕೊಂಡಿರುವುದರಿಂದ ಸ್ಥಳದಲ್ಲಿ ಮಹಜರ್ ಕ್ರಮವನ್ನು ಸಂಜೆ 5-15 ಗಂಟೆಯಿಂದ 6-15 ಗಂಟೆಯವರೆಗೆ ಜರುಗಿಸಿಕೊಂಡು ಮಾಲು ಮತ್ತು ಆರೋಪಿ ಮಾರಿಮುತ್ತುವನ್ನು ವಶಕ್ಕೆ ಪಡೆದುಕೊಂಡಿರುತ್ತೆ ಎಂದು ಹೇಳಿ ವರದಿ, ಅಮಾನತ್ತುಪಡಿಸಿದ ವಸ್ತುಗಳು ಹಾಗು ಆರೋಪಿ-1 ರವರನ್ನು ಹಾಜರ್ ಪಡಿಸಿದ ಮೇರೆಗೆ ದೂರು ಸ್ವೀಕರಿಸಿಕೊಂಡು ಮೇಲ್ಕಂಡ ಉಲ್ಲೇಖದ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. 

ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 276/13 ಕಲಂ. 188-379 ಐ.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ಡಿ. ತಿಮ್ಮಯ್ಯ, ಗ್ರಾಮಲೆಕ್ಕಿಗರು, ವೈದ್ಯನಾಥಪುರ ಗ್ರಾಮ, ಮದ್ದೂರು ತಾಲ್ಲೋಕು, ಕಂದಾಯ ಇಲಾಖೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-06-2013 ಮದ್ದೂರು ತಾ. ಶಿಂಷಾ ನದಿ ಪಾತ್ರದಲ್ಲಿ ವೈದ್ಯನಾಥಪುರ ಗ್ರಾಮದ .ಆರೋಪಿ 1)ನಂಬರ್ ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರೈಲರ್ಗಳು ಚಾಲಕ ಮತ್ತು ಮಾಲಿಕ. ಹಾಗು 2)ನಂಬರ್ ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರೈಲರ್ಗಳು ಚಾಲಕ ಮತ್ತು ಮಾಲೀಕ ರವರುಗಳು ಸರ್ಕಾರದ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿಯ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಟ್ರಾಕ್ಟರ್ಗಳಿಗೆ ತುಂಬಿಕೊಂಡು ಕಳ್ಳತದಿಂದ ಸಾಗಾಣಿಕೆ ಮಾಡುತಿದ್ದ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 307-498(ಎ)-324-506 ಐ.ಪಿ.ಸಿ.

     ದಿನಾಂಕ: 21-06-2013 ರಂದು ಪಿರ್ಯಾದಿ ಮಹಾಲಕ್ಷ್ಮಿ ಕೋಂ. ಕುಳ್ಳಿ @ ವೀರಭದ್ರ, ಗ್ಯಾಂಗ್ಪೈಲ್, ಕೆ.ಆರ್.ಸಾಗರ, ಶ್ರೀರಂಗಪಟ್ಟಣ ತಾಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿತ ಅವರ ಗಂಡ ಕುಳ್ಳಿ @ ವೀರಭದ್ರ ಬಿನ್. ಸತ್ಯಪ್ಪ, ಗ್ಯಾಂಗ್ಪೈಲ್, ಕೆ.ಆರ್.ಸಾಗರ ಗ್ರಾಮ, ಶ್ರೀರಂಗಪಟ್ಟಣ ತಾಲೋಕು ರವರು ನನಗೆ ದೈಹಿಕವಾಗಿ ಹಾಗೂ ಮಾನಸಿ- ಕವಾಗಿ ಕಿರುಕುಳ ಕೊಡುತ್ತಿದ್ದಾನೆ ನೆನ್ನೆ ರಾತ್ರಿ ನನಗೆ ಮದ್ಯಪಾನ ಕುಡಿಸಿ ನನಗೆ ಸೌದೆ ಸೀಳಿನಿಂದ ಹೊಡೆದು ಗಾಯ ಮಾಡಿದ್ದಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 20-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-06-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು, 2 ಕಳ್ಳತನ ಪ್ರಕರಣಗಳು, 1 ವಂಚನೆ ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 23 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 

     
ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 82/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

     ದಿನಾಂಕ: 20-06-2013 ರಂದು ಪಿರ್ಯಾದಿ ಸೈಯದ್ ಬಾಷ, ಚನ್ನೇಗೌಡ ಬಡಾವಣೆ, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ಸಂಜೆ 04-00 ಗಂಟೆಯಲ್ಲಿ ಶಿವಪುರದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿಯ ಅಣ್ಣರವರು ಪ್ಲಾಸ್ಟಿಕ್ ವ್ಯಾಪಾರ ಮಾಡಿಕೊಂಡು ಮನೆಗೆ ಶಿವಪುರದ ಬಳಿ ಬರುತ್ತಿದ್ದಾಗ ಕೆ.ಎ.03-ಎಂ.ಪಿ.-4399 ಕಾರ್  ಹಿಂದಿನಿಂದ ಬಂದು ಡಿಕ್ಕಿ ಮಾಡಿದ ಪರಿಣಾಮ ಅವರಿಗೆ ಪೆಟ್ಟಾಗಿರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಮನುಷ್ಯ ಕಾಣೆಯಾಗಿದ್ಧಾನೆ.

      ದಿನಾಂಕ: 20-06-2013 ರಂದು ಪಿರ್ಯಾದಿ ವಜೀದ್ ಖಾನಂ ಕೋಂ. ಅಥ್ಥರ್ ಖಾನ್, ಹನೀಫ್ ಮೊಹಲ್ಲಾ ಮಂಡ್ಯ ರಸ್ತೆ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 15-06-2013 ಬೆಳಗಿ ಜಾವ 06-00 ಗಂಟೆಯಲ್ಲಿ, ಆರೋಪಿ ಅಥ್ಥರ್ ಖಾನ್, 42 ವರ್ಷ, ಕಾರ್ ನಂಬರ್ ಕೆ.ಎ.-09-ಎನ್-3804, ಸಿಲ್ವರ್ ಬಣ್ಣದ ಅಸೆಂಟ್ ಕಾರ್ ಹನೀಫ್ ಮೂಹಲ್ಲಾ ನಾಗಮಂಗಲ ಟೌನ್ ರವರು ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಸ್ಸ್ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


3. ಮೇಲುಕೋಟೆ  ಪೊಲೀಸ್ ಠಾಣೆ ಮೊ.ನಂ. 106/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆೆ.    

     ದಿನಾಂಕ: 20-06-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಶಿವಕುಮಾರ, 30ವರ್ಷ, ಪಿ.ಹೊಸಹಳ್ಳಿಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ13-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಪಿ.ಹೊಸಹಳ್ಳಿ, ಶಿವಕುಮಾರ, 38ವರ್ಷ, ಪಿ.ಹೊಸಹಳ್ಳಿ ಗ್ರಾಮ ರವರು ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 
 

ಕಳ್ಳತನ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 380 ಐ.ಪಿ.ಸಿ.

ದಿನಾಂಕ: 20-06-2013 ರಂದು ಪಿರ್ಯಾದಿ ಕೆ. ಗೋವಿಂದ, ರಾಜುಬಡ್ತಿ ಮುಖ್ಯ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಹಿರಿಕಳಲೇ ಗ್ರಾಮ, ಕೆ.ಆರ್ ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರಾತ್ರಿ ವೇಳೆಯಲ್ಲಿ, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ, ಹಿರಿಕಳಲೇ ಗ್ರಾಮ, ಕಸಬಾ ಈ ದಿವಸ ಬೆಳಿಗ್ಗೆ 09-30 ಗಂಟೆಗೆ ಶಾಲೆಗೆ ಬಂದು ಕಂಪ್ಯೂಟರ್ ಕೊಠಡಿಯ ಬಾಗಿಲು ತೆಗೆದು ನೋಡಲಾಗಿ ರೂಂ.ನಲ್ಲಿದ್ದ ಕಂಪ್ಯೂಟರ್ನ 02 ಮಾನಿಟರ್, 01 ಕೀ ಬೋರ್ಡ್, 04 ಸ್ಪೀಕರ್, 01 ಮೌಸ್ ನ್ನು ಯಾರೋ ಕಳ್ಳತನ ಮಾಡಿರುತ್ತಾರೆ ರೂಂನ ಬಾಗಿಲು, ಕಿಟಕಿ, ಗ್ಲಾಸ್ ಗಳು ಹಾಗೇ ಇರುತ್ತವೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 217/13 ಕಲಂ. 457-380 ಐ.ಪಿ.ಸಿ.

ದಿನಾಂಕ: 20-06-2013 ರಂದು ಪಿರ್ಯಾದಿ ಸ್ವಾಮಿಗೌಡ, ಕೆಂಚನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ರಾತ್ರಿ ವೇಳೆ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ನಲ್ಲಿ ಪಿರ್ಯಾದಿಯವರ ಬಾಬ್ತು ಜಮೀನಿಗೆ ಹಾಕಿದ್ದ ಪಂಪ್ ಸೆಟ್ನ ತಾಮ್ರದ ವೈರಿರುವ ಆರ್ಮೇಚರ್ ಭಾಗವನ್ನು ಯಾರೋ ಕಳ್ಳರು ರಾತ್ರಿ ವೇಳೆ ಬಿಚ್ಚಿರುವುದು ಕಂಡು ಬಂತು ನಮ್ಮ ಪಕ್ಕದ ಜಮೀನಿನವರುಗಳಾದ ಮೂಗೇಗೌಡರವರ ಮಗ ಮಾದೇಗೌಡ, ಚಿಕ್ಕಕರೀಗೌಡರವರ ಮಗ ಚನ್ನೇಗೌಡ, ಜವರೇಗೌಡರವರ ಮಗ ಚಿಕ್ಕಮೊಗೇಗೌಡ ಅವರುಗಳ ಜಮೀನಿನಲ್ಲಿ ಅಳವಡಿಸಿದ್ದ ಮೋಟಾರ್ ಗಳ ತಾಮ್ರದ ವೈರಿರುವ ಆರ್ಮೇಚರ್ ಭಾಗವನ್ನು ಕಳವು ಮಾಡಿರುತ್ತಾರೆ ಒಟ್ಟು ಬೆಲೆ ಸುಮಾರು 20 ರಿಂದ 25 ಸಾವಿರ ರೂಗಳಾಗಬಹುದು. ಕಳವು ಮಾಡಿರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 258/13 ಕಲಂ. 417-493-497-313-506 ಐ.ಪಿ.ಸಿ.

ದಿನಾಂಕ: 20-06-2013 ರಂದು ಪಿರ್ಯಾದಿ ಎನ್.ಎಸ್.ಲೀನಾ ಬ್ರಿಗೇಡಾ ಡಿಮೈಲ್, 35 ವರ್ಷ, ನಂ. 1748/1ಎ, 5ನೇ ಕ್ರಾಸ್, ಕ್ರಿಶ್ಚಿಯನ್ ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹೆಚ್.ಟಿ.ರಾಜೇಶ್ ಬಿನ್. ತಿಮ್ಮೇಗೌಡ, ಹನಿಯಂಬಾಡಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಡಿಸೆಂಬರ್-2007 ರಿಂದ ಮಾರ್ಚ್-2013/ 8ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ರವರು, ಫೆಬ್ರವರಿ-2007 ರಲ್ಲಿ ಮೊಬೈಲ್ ಮುಖಾಂತರ ಕರೆ ಮಾಡಿ, ಎಸ್ಎಂಎಸ್ ಕಳುಹಿಸಿ ಪರಿಚಯ ಮಾಡಿಕೊಂಡು ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆಂದು ನಂಬಿಸಿ ಡಿಸೆಂಬರ್-2007 ರಲ್ಲಿ ತನ್ನ ಇಷ್ಟಕ್ಕೆ ವಿರೋಧವಾಗಿ ದೈಹಿಕ ಸಂಪರ್ಕ ಬೆಳೆಸಿ ಗಭರ್ಿಣಿ ಮಾಡಿ ದಿನಾಂಕ: 26-01-2008 ರಂದು ಕೆಂಗೇರಿಯ ಸಹನಾ ಆಸ್ಪತ್ರೆಯಲ್ಲಿ ಬಲವಂತವಾಗಿ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೂ ತನಗೆ ಬೇಕಾದಾಗಲೆಲ್ಲಾ ಹಿಂಸಿಸಿ ಪದೇ ಪದೇ ದೈಹಿಕ ಸಂಭೋಗ ಮಾಡಿ 2009 ರಲ್ಲಿ ಮದುವೆಯಾಗುವುದಿಲ್ಲ ಎಂದು ಬಿಟ್ಟುಬಿಟ್ಟಿದ್ದು ನಂತರ ದಿನಾಂಕ: 24-05-2009ರಂದು ಫಿರ್ಯಾದಿಯು ದೀಪಕ್ ಎಂಬುವನೊಂದಿಗೆ ಮದುವೆ ಆಗಿದ್ದರೂ ಸಹ ಆರೋಪಿತನು ಫಿರ್ಯಾದಿಯನ್ನು ಹೆದರಿಸಿ ಮತ್ತೆ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಮನನೊಂದು ತನ್ನ ಗಂಡನಿಂದ ವಿಚ್ಛೇದನಾ ಪಡೆದುಕೊಂಡಿದ್ದು ತದನಂತರ ಅನೇಕ ಬಾರಿ ಆರೋಪಿಯು ಫಿರ್ಯಾದಿಯೊಂದಿಗೆ ಬಲವಂತವಾಗಿ ದೈಹಿಕ ಸಂಭೋಗ ಮಾಡಿದ್ದರಿಂದ ಗಭರ್ಿಣಿಯಾಗಿ ದಿನಾಂಕ: 10-07-2010 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮುಂದೆ ಮದುವೆಯಾಗುವುದಾಗಿ ಸುಳ್ಳು ಕಾರಣಗಳನ್ನು ಹೇಳುತ್ತಾ ಅಕ್ಟೋಬರ್-2012 ರಲ್ಲಿ ಮಂಡ್ಯ ಚಾಮುಂಡೇಶ್ವರಿನಗರದ 8ನೇ ಕ್ರಾಸ್ನಲ್ಲಿ ಬಾಡಿಗೆ ಮನೆ ಮಾಡಿ ಇರಿಸಿಕೊಂಡು 5 ತಿಂಗಳು ತನ್ನೊಂದಿಗೆ ಸಂಸಾರ ಮಾಡಿಕೊಂಡಿದ್ದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಮಗುವನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿ ಮಾರ್ಚ್.-2013 ರಿಂದ ತನ್ನೊಂದಿಗಿನ ಸಂಬಂಧವನ್ನು ನಿರಾಕರಿಸಿ ಬೇರೆ ಮದುವೆಯಾಗಲು ತಯಾರಿ ನಡೆಸಿರುತ್ತಾನೆ ಈ ಬಗ್ಗೆ ಆರೋಪಿತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 323-448-504-506 ಕೂಡ 149 ಐ.ಪಿ.ಸಿ. ಜೊತೆಗೆ 3ಕ್ಲಾಸ್ (1) ಸಬ್ ಕ್ಲಾಸ್ (10) ಎಸ್ಸಿ/ಎಸ್ಟಿ ಆಕ್ಟ್.

ದಿನಾಂಕ: 20-06-2013 ರಂದು ಪಿರ್ಯಾದಿ ಜೆ.ಪ್ರದೀಪ ಬಿನ್. ಜಡಿಯಯ್ಯ, ಜನತಾ ಕಾಲೋನಿ, ಹುಲಿವಾನ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯರವರು ನೀಡಿದ ದೂರಿನ ಸಾರಾಂಶವೇನೆಂದರೆ ಅರೋಪಿಗಳಾದ 1). ನಾಗೇಶ, 2). ಮುದ್ದುರಾಜ, 3). ಬೋರೇಗೌಡ, 4).ಮಹೇಶ (ಶೇಷ) 5) ಮಂಜ ಎಲ್ಲರೂ ಹುಲಿವಾನ ಗ್ರಾಮ ಇವರುಗಳು ನೀರು ಹಿಡಿಯುವ ವಿಚಾರದಲ್ಲಿ ವಾಟರ್ಮೆನ್ ನಾಗೇಶನು ತನಗೆ ನೀನು ಮಾದಿಗ ಜನಾಂಗದವನು ಎಂದು ಬೈದು ಕಪಾಳಕ್ಕೆ ಹೊಡೆದು ನಂತರ ದಿನಾಂಕಃ 19-06-2013ರಂದು ಸಂಜೆ 06-30 ಗಂಟೆಯಲ್ಲಿ ಮುದ್ದುರಾಜ, ಬೋರೇಗೌಡ, ಮಹೇಶ (ಶೇಷ), ಮಂಜ ಎಂಬುವರು ಮನೆಗೆ ನುಗ್ಗಿ ಎಳೆದಾಡಿ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಕೇಳಿದ್ದಕ್ಕೆ ಮಾದಿಗ ಬಡ್ಡಿ, ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ. ಮತ್ತೆ ಸೋಮವಾರ ನಿಮ್ಮ ಮಗನನ್ನು ಕೊಲ್ಲುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ನಮ್ಮ ಮನೆಯವರನ್ನು ಸುಟ್ಟುಹಾಕುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದು. ನನ್ನ ತಂದೆ ತಾಯಿ ಇಬ್ಬರನ್ನು ಕತ್ತರಿಸಿ ಜೈಲಿಗೆ ಹೋಗುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಎಂದು ಇತ್ಯಾದಿಯಾಗಿ  ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

DAILY CRIME REPORT DATED : 19-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-06-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಗೋ ಹತ್ಯೆ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ ಪ್ರಕರಣ,  1 ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ರಾಬರಿ ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  2 ಕರ್ನಾಟಕ ಭೂ ಕಂದಾಯ ಅಧಿನಿಯಮ/ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ,  1 ವಂಚನೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ. 

ಗೋ ಹತ್ಯೆ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 8-9-11 ಗೋ ಹತ್ಯ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ 1964.
           ದಿನಾಂಕ: 19-06-2013 ರಂದು ಪಿರ್ಯಾದಿ ಎಂ.ಮಹದೇವಸ್ವಾಮಿ, ಪಿ.ಎಸ್.ಐ. ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮನು ಬಿನ್ ಮೋಹನ್ ರಾಜ್, ಹೊಸಹಳ್ಳಿ ಗ್ರಾಮ, ಬಿ.ಜಿ ಪುರ ಹೋ||, ಮಳವಳ್ಳಿ ತಾ|| ರವರು ಐದು ಮದ್ಯ ವಯಸ್ಸಿನ ಹಸು ಮತ್ತು ಕರುಗಳನ್ನು ಅನಧಿಕೃತವಾಗಿ ಬೇರೆ ಕಡೆಗೆ ಕಸಾಯಿಖಾನೆಗೆ ಸಾಗಿಸಲು ಟಾಟಾ ಏಸ್ ಗೂಡ್ಸ್ ವಾಹನದ ಕಿರಿದಾದ ಜಾಗದಲ್ಲಿ ಹಿಂಸೆಯಿಂದ ನಿತ್ರಾಣವಾದ ಸ್ಥಿತಿಯಲ್ಲಿ ಸಾಗಿಸುತ್ತಿದ್ದರಿಂದ ಸ್ವತಃ ಕೇಸು ದಾಖಲಿಸಿರುತ್ತೆ. 

ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 135/13 ಕಲಂ. 3-42-44 ಕೆ.ಎಂ.ಎಂ.ಸಿ.ಆರ್ 1994 ನಿಯಮ ಕೂಡ 4(1ಎ)-21 (1 ರಿಂದ 5) ಎಂ.ಎಂ.ಆರ್.ಡಿ-1957 ನಿಯಮ ಮತ್ತು 379 ಐ.ಪಿ.ಸಿ.

ದಿನಾಂಕ: 19-06-2013 ರಂದು ಪಿರ್ಯಾದಿ ಶ್ರೀ ಹೆಚ್.ಆರ್.ಮಲ್ಲಿಕಾರ್ಜುನಸ್ವಾಮಿ, ರಾಜಸ್ವ ನಿರೀಕ್ಷಕರು, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013ರ ಬೆಳಗಿನ ಜಾವ 05-00 ಗಂಟೆಯಲ್ಲಿ ಆರೋಪಿ ಕೆ.ಎ-42-8074ರ ಲಾರಿ ಚಾಲಕ ದಿನಾಂಕಃ 19-06-2013ರಂದು ಬೆಳಿಗ್ಗೆ 05-00ಗಂಟೆ ಸಮಯದಲ್ಲಿ ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಪಿ.ನೇರಳೇಕೆರೆ ಗ್ರಾಮದ ಹತ್ತಿರ ತಪಾಸಣೆ ಮಾಡುತ್ತಿದ್ದಾಗ, ಆರೋಪಿತ ಲಾರಿ ಚಾಲಕ ಲಾರಿಯಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದೆ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಇತ್ಯಾದಿ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 89/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 19-06-2013 ರಂದು ಪಿರ್ಯಾದಿ ಜಯಸ್ವಾಮಿಗೌಡ ಬಿನ್ ಸಿದ್ದೇಗೌಡ, ಗಂಟಗೌಡನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಸಿದ್ದೇಗೌಡ, ವಯಸ್ಸು 85 ವರ್ಷ, ಗಂಟಗೌಡನಹಳ್ಳಿ ಗ್ರಾಮದ ತನ್ನ ಮನೆಯಿಂದ ಕೆರಗೋಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೋದವರು ವಾಪಸ್ಸ್ ಬರಲಿಲ್ಲವೆಂದು ಸಿದ್ದೇಗೌಡ್ರ ಬಿನ್. ಸ್ವಾಮಿಗೌಡ ಎಂಬುವವರು ದಿನಾಂಕ:19-06-2013 ರಂದು ಮಧ್ಯಾಹ್ನ 12-00 ಘಂಟೆಗೆ ಕೆರಗೋಡು ಠಾಣೆಗೆ ಹಾಜರಾಗಿ ಚಹರೆ ವಿವರಗಳೊಂದಿಗೆ ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 385/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 19-06-2013 ರಂದು ಪಿರ್ಯಾದಿ ಜಿ. ಎನ್ ರಮೇಶ ಬಿನ್ ಜೆ ಡಿ ನಾರಾಯಣ, ಗುಂಬಸ್ ರಸ್ತೆ, ಗಂಜಾಂ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಜಾಹ್ನವಿ ಜೆ. (ಮಾನವಿ) ಬಿನ್. ಜಯರಾಮು,  23-ವರ್ಷ,  ವಕ್ಕಲಿಗರು ಗೋಸೇಗೌಡರ ಬೀದಿ, ಕೋಲ ಮುಖ, ಗೋದಿ ಬಣ್ಣ,  ಸಾಧಾರಣ ಶರೀರ, ಚೂಡಿಧಾರ ಧರಿಸಿರುತ್ತಾಳೆ ಇವರು ದಿನಾಂಕ;-13-06-2013 ರ ಮದ್ಯಾಹ್ನ ಸುಮಾರು 4 ಗಂಟೆಯ ಸಮಯದಲ್ಲಿ ಶ್ರೀರಂಗಪಟ್ಟಣದ ತಮ್ಮ ಮನೆಯಿಂದ ವಿವಾಹದ ಆಹ್ವಾನ ಪತ್ರಿಕೆಯನ್ನು ಸ್ನೇಹಿತರಿಗೆ ನೀಡುವುದಾಗಿ ಹೋಗಿ ಕಾಣೆಯಾಗಿದ್ದು ಎಲ್ಲಾ ಕಡೆ ವಿಚಾರಮಾಡಲಾಗಿ ಎಲ್ಲೂ ಪತ್ತೆ ಆಗದ ಕಾರಣ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ರಾಬರಿ ಪ್ರಕರಣಗಳು :

1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 392  ಐ.ಪಿ.ಸಿ.

          ದಿನಾಂಕ: 19-06-2013 ರಂದು ಪಿರ್ಯಾದಿ ಜ್ಯೋತಿ ಬಿನ್ ಚೌಡಯ್ಯ, ಮೆಣಸಿಕ್ಯಾತನಹಳ್ಳಿ ಗ್ರಾಮ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು ಸುಮಾರು 02-00ಗಂಟೆಯಲ್ಲಿ ಹೆಗ್ಗೂರು ರಸ್ತೆಯ ಪಕ್ಕದಲ್ಲಿದ್ದ ಮೆಡಿಕಲ್ನಿಂದ ಸ್ವಲ್ಪ ಮುಂದೆ ಹೆಗ್ಗೂರು ರಸ್ತೆಯ ಪಕ್ಕದಲ್ಲಿದ್ದ ಬೇಲಿಯಲ್ಲಿ ಬೆಳೆದಿದ್ದ ರೋಜಾ ಗಿಡದ ಎಲೆಗಳನ್ನು ಕಿತ್ತುಕೊಳ್ಳುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯು ಕಿರುಗಾವಲು ಕಡೆಯಿಂದ ಮೋಟಾರ್ ಬೈಕ್ನಲ್ಲಿ ಬಂದು ನನ್ನ ಕತ್ತಿಗೆ ಕೈಹಾಕಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೆಗ್ಗೂರು ಕಡೆಗೆ ಹೊರಟುಹೋದನು ಆಗ ಆತ ಹೋಗುತ್ತಿದ್ದ ಬೈಕ್ನ್ನು ಗಮನಿಸಿದಾಗ ಅದು ಹಿರೋಹೋಂಡಾ ಸ್ಲ್ಪೆಂಡರ್ ಬೈಕ್ ನಂ. ಕೆ.ಎ.-42-ಇ-6482 ಆಗಿದ್ದು ಆತ ನೀಲಿಬಣ್ಣದ ಜೀನ್ಸ್ ಪ್ಯಾಂಟ್, ಹಳದಿ ಬಣ್ಣದ ಟೀ ಷರ್ಟ್ ಹಾಗೂ ತಲೆಯಲ್ಲಿ ಕ್ಯಾಪ್ ಹಾಕಿದ್ದನು ಮತ್ತು ಆತನ ಮುಂಗೈ ಮೇಲೆ ಹಸಿರು ಹಚ್ಚೆ ಹಾಕಿತ್ತು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವು ಸುಮಾರು 05ಗ್ರಾಂ ತೂಕದ್ದಾಗಿದ್ದು ಕಳವು ಮಾಡಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ ನನ್ನ ಸರವನ್ನು ಕೊಡಿಸಿಕೊಡಬೇಕಾಗಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ಮೇಲುಕೋಟೆ  ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 395 ಐ.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಸಿದ್ದೇಗೌಡ ಬಿನ್. ಶಿವಣ್ಣ, 30 ವರ್ಷ, ಒಕ್ಕಲಿಗರು, ವ್ಯವಸಾಯ ಮತ್ತು ಮೋಟಾರ್ ರಿಪೇರಿ ಕೆಲಸ, ಮಾದೇಗೌಡನಕೊಪ್ಪಲು ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ತನಗೆ ಪರಿಚಯವಿದ್ದ ಬಳಘಟ್ಟ ಗ್ರಾಮದ ಸಾಕಮ್ಮರವರನ್ನು ತನ್ನ ಮೋಟಾರ್ ಸೈಕಲ್ ನಂ.ಕೆ.ಎ-11 ಕೆ-4526 ರಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಸಾಕಮ್ಮಳ ಕಡೆಯ ನಾಲ್ಕು ಜನರು ಅಡ್ಡಹಾಕಿ ಪಿರ್ಯಾದಿಯನ್ನು ಅವರ ಬೈಕ್ನಲ್ಲಿ ಕೂರಿಸಿಕೊಂಡು ಸದರಿ ಸ್ಥಳದ ಬಳಿ ಆರೋಪಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ಪಿರ್ಯಾದಿಗೆ ಮಚ್ಚಿನ ಅಂಡಿನಿಂದ ಎಡಗೈ ಮತ್ತು ಬೆನ್ನಿಗೆ ಹೊಡೆದು ಮತ್ತು ಕೈಗಳಿಂದ ಹೊಡೆದು ಪಿರ್ಯಾದಿಯ ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ನಂ.ಕೆ.ಎ-11 ಕೆ-4526ನ್ನು, ಒಂದು ಲವಾ ಮೊಬೈಲ್ ಸೆಟ್, ಒಂದು 2ಹೆಚ್.ಪಿ ಸಿಂಗಲ್ ಮೋಟಾರ್ ಮತ್ತು ನಗದು ಹಣ ರೂ. 5000/-ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಮೌಲ್ಯ 33,000/- ರೂ.ಗಳಾಗಿರುತ್ತೆಂದು ಸಾಕಮ್ಮ ಮತ್ತು ಇತರೇ 4 ಜನ ಗಂಡಸರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಯು.ಡಿ.ಆರ್. ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಪದ್ಮನಾಭ ಬಿನ್. ಲೇಟ್. ಜಯಕುಮಾರಯ್ಯ, ಜೈನರ ಬೀದಿ, ಬೆಳ್ಳೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು 02-30 ಪಿ.ಎಂ. ಗಂಟೆಯಲ್ಲಿ ಜೈನರ ಬೀದಿ, ಬೆಳ್ಳೂರು ರವರು ನೀಡಿದ ದೂರಿನ ವಿವರವೇನೆಂದರೆ, ವಿನಯಕುಮಾರ್, ಬೆಳ್ಳೂರು ಟೌನ್  ಎಂಬುವವರು ಪಿರ್ಯಾದಿಯ ಮಗ ನೇಣುಹಾಕಿಕೊಂಡು ನೇತಾಡುತ್ತಿದುದ್ದನ್ನು ಕಂಡು ಕೂಗಿಕೊಂಡು ಅಕ್ಕ-ಪಕ್ಕದ ಜನರು ಸೇರಿಕೊಂಡರು, ಅಲ್ಲಿಗೆ ಬಂದು ನೋಡಲಾಗಿ ನನ್ನ ಮಗ ಸತ್ತುಹೋಗಿದ್ದ ತನ್ನ ಹೆಂಡತಿ ತೀರಿಹೋಗಿದ್ದರಿಂದ ಹಾಗೂ ಈತನಿಗೆ ಗಂಟಲು ಆಪರೇಷನ್ ಆಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಪ್ಲಾಸ್ಟಿಕ್ ಹಗ್ಗದಿಂದ ಮನೆಯ ಹಿತ್ತಲಿನ ಹೊಂಗೆಮರದ ದಡಿಗೆ ನೇತುಹಾಕಿಕೊಂಡು ಸತ್ತುಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಯು.ಡಿ.ಅರ್. ನಂ. 17/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಮಾದೇಗೌಡ ಬಿನ್. ಕೃಷ್ಣೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜಮ್ಮ @ಮಂಜುಳ ಕೋಂ. ಮಾದೇಗೌಡ, 28ವರ್ಷ, ರಂಗೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ ಹೆಂಡತಿ ಹೊಟ್ಟೆನೊವು ತಾಳಲಾರದೆ ಯಾವುದೊ ಮಾತ್ರೆ ಸೇವಿಸಿ, ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಸೇರಿಸಿದ್ದರು ಗುಣವಾಗದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ರಾಜೇಗೌಡ ಬಿನ್. ಲೇಟ್. ಜವರೇಗೌಡ, ರಂಗೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದಿನಾಂಕ: 18-06-2013 ರ ಸಂಜೆ 0600 ಗಂಟೆಯಲ್ಲಿ ಅವರ ಮಗ ನಾಗೇಶ್ ಬಿನ್ ಲೇಟ್ ರಾಜೇಗೌಡ, 32 ವರ್ಷ, ರಂಗೇಗೌಡನಕೊಪ್ಪಲು ಗ್ರಾಮ ರವರು ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರುತ್ತಾರೆ, ಈ ಬಗ್ಗೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಕರ್ನಾಟಕ ಭೂ ಕಂದಾಯ ಅಧಿನಿಯಮ/ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು :

1.ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 180/13 ಕಲಂ. ಕರ್ನಾಟಕ ಭೂ ಕಂದಾಯ ಅಧಿನಿಯಮ, ಕಲಂ 70-73,    
   1964 ಹಾಗೂ 379 ಐ.ಪಿ.ಸಿ. 

ದಿನಾಂಕ: 19-06-2013ರಂದು ಪಿರ್ಯಾದಿ ಜಿ.ವೆಂಕಟರಾಮಯ್ಯ, ತಹಸೀಲ್ದಾರ್, ನಾಗಮಂಗಲ ತಾಲ್ಲೂಕು, ನಾಗಮಂಗಲ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19/06/2013  ದೊಡ್ಡೇನಹಳ್ಳಿ ಗ್ರಾಮದ ಸವರ್ೇ ನಂ. 26/ಪಿ1ರ ಜಮೀನಿನಲ್ಲಿ ಆರೋಪಿ ಕೆಂಪೇಗೌಡ ಬಿನ್. ಕಗ್ಗೇಗೌಡ, ಅಂಕನಹಳ್ಳಿ ದಾಖಲೆ, ಹೊಸೂರು ಗ್ರಾಮ, ಬೆಳ್ಳೂರು ಹೋಬಳಿ ರವರು ಸದರಿ ಜಮೀನಿನಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸುಮಾರು 30 ಲೋಡ್ಗಳಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2.ಬೆಳ್ಖೂರು ಪೊಲೀಸ್ ಠಾಣೆ ಮೊ.ನಂ. 181/13 ಕಲಂ. ಕರ್ನಾಟಕ ಭೂ ಕಂದಾಯ ಅಧಿನಿಯಮ, ಕಲಂ 70-73, 1964   ಹಾಗೂ 379 ಐ.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಜಿ.ವೆಂಕಟರಾಮಯ್ಯ, ತಹಸೀಲ್ದಾರ್, ನಾಗಮಂಗಲ ತಾಲ್ಲೂಕು, ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ದೊಡ್ಡ ಜಟಕ ಗ್ರಾಮದ ಸರ್ವೆ ನಂ. 169ರಲ್ಲಿ ರಾಮಸ್ವಾಮಿ ಬಿನ್. ಮುಗಯ್ಯ ಮತ್ತು ಸವರ್ೆ ನಂ.-39/1ಎ ರಲ್ಲಿ ಸಾವಿತ್ರಮ್ಮ ಕೋಂ. ಶಿವಯ್ಯರವರ ಜಮೀನಿನಲ್ಲಿ, ಬೆಳ್ಳೂರು ನಲ್ಲಿ ಆರೋಪಿಗಳು ಯಾವುದೇ ಪರವಾನಗಿ ಪಡೆಯದೆ ಸುಮಾರು 25+5 ಲೋಡ್ಗಳಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 498[ಎ]-323-506-ಕೂಡ 149 ಐಪಿಸಿ 3 & 4 ಡಿ.ಪಿ.ಅಕ್ಟ್.

ದಿನಾಂಕ: 19-06-2013ರಂದು ಪಿರ್ಯಾದಿ ಆಶಾ ಕೊಂ. ಶಿವಲಿಂಗ, ಸಣ್ಣಮಲ್ಲೇಗೌಡರ ಬೀದಿ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ಹಿಂದಿನ ದಿನಗಳಲ್ಲಿ ಮಳವಳ್ಳಿ ಟೌನ್, ದಿ:19-06-13 ರ ಹಿಂದಿನ ದಿನಗಳಲ್ಲಿ, ಮಳವಳ್ಳಿ ಟೌನ್, ಸಣ್ಣಮಲ್ಲೇಗೌಡರ ಬೀದಿಯ, ಅವರ ಮನೆಯಲ್ಲಿ ಆರೋಪಿ ಅವರ ಗಂಡ 1] ಶಿವಲಿಂಗ ಹಾಗು 2] ಶಿವಣ್ಣ [ಮಾವ] 3] ಶ್ರೀಮತಿ. ಗೌರಮ್ಮ [ಅತ್ತೆ] 4] ಶ್ರೀಮತಿ. ಇಂದಿರಾ [ ಪತಿಯ ಅಕ್ಕ] 5] ಕೆಂಚೇಗೌಡ [ಪತಿಯ ಭಾವ] 6] ಶ್ರೀನಿವಾಸ, ಮಳವಳ್ಳಿ ಟೌನ್ ರವರುಗಳು ಎಲ್ಲರೂ ಸೇರಿ ಲಗ್ನ ಕಾಲದಲ್ಲಿ ಕೊಟ್ಟಿರುವ ವರದಕ್ಷಿಣಿ ಸಾಲದು ಎಂದೂ ನಿಮ್ಮ ತಂದೆಯ ಹತ್ತಿರ 1,00,000/- ರೂ.ಗಳನ್ನು ಪಡೆದುಕೊಂಡು ಬಾ ಎಂದೂ ಮನೆಯಲ್ಲಿ ಕಿರುಕುಳ ನೀಡಲು ಪ್ರಾರಂಭಿಸಿದ್ದರಿಂದ ಸದರಿಯವರಿಗೆ 1,00,000/-ರೂ. ಇಲ್ಲ ಎಂದು 40,000/- ರೂ. ಗಳನ್ನು ಕೊಟ್ಟಿರುತ್ತಾರೆ. ಅದರೂ ಸಹ ಹಣ ತೆಗೆದುಕೊಂಡು ಬರುವಂತೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆಂದು ಇನ್ನೂ ಇತ್ಯಾದಿಯಾಗಿ ನೀಡಿದ ದೂರಾಗಿರುತ್ತದೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. 

ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 253/13 ಕಲಂ. 420 ಐ.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಎಸ್.ವಷರ್ಿತ್ ಸಚ್ಚಿದೇವ್ ಬಿನ್. ಶಿವಲಿಂಗೇಗೌಡ, 30 ವರ್ಷ, ವಾಸ ನಂ. 4009/ಸಿ, 1ನೇ ಕ್ರಾಸ್, ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರಮ್ಯಶ್ರೀ ಬಿನ್. ವೀರಭದ್ರ, ಶ್ರೀಲಕ್ಷ್ಮಿವೆಂಕಟೇಶ್ವರ ಪ್ಲೋರ್ಮಿಲ್ [ಪುರಿಬಟ್ಟಿ], 3ನೇ ಕ್ರಾಸ್, ಸಿಹಿನೀರುಕೊಳ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 12-09-2011 ರಿಂದ 18-01-2012 ರ ವೇಳೆಯಲ್ಲಿ ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ಫಿರ್ಯಾದಿಗೆ ಮೋಸ ಮಾಡುವ ದುರುದ್ದೇಶದಿಂದ ಬೇರೆ ಯಾರಿಗೋ ಸೇರಿದ ಚೆಕ್ ಅನ್ನು ತಮ್ಮ ಚೆಕ್ ಎಂದು ಫಿರ್ಯಾದಿಗೆ ನಂಬಿಸಿ ಕೊಟ್ಟು ಇದುವರೆಗೂ ಸಾಲದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಘನ ನ್ಯಾಯಾಲಯದ ಮುಖಾಂತರ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಕಳ್ಳತನ ಪ್ರಕರಣ : 

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 254/13 ಕಲಂ. 380 ಐ.ಪಿ.ಸಿ.

ದಿನಾಂಕ: 19-06-2013ರಂದು ಪಿರ್ಯಾದಿ ಎಸ್.ಸುಮಿತ್ರ ಕೋಂ.. ಡಿ.ಎನ್.ನಂಜುಂಡಯ್ಯ, 36 ವರ್ಷ, 8ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-06-13 ರಂದು , 8ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿಯಲ್ಲಿರುವ ಫಿರ್ಯಾದಿಯವರ ವಾಸದ ಮನೆಯಲ್ಲಿ ದಿನಾಂಕ:15-.06-.2013 ರಂದು ಬೆಳಿಗ್ಗೆ 8.00 ರಿಂದ 9.30 ಗಂಟೆ ಸಮಯದಲ್ಲಿ ನಾನು ಸ್ನಾನ ಮಾಡಲು ನನ್ನ ಬಾಬ್ತು ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿ ಹಂಡೆಯ ಮೇಲೆ ಇಟ್ಟು ಸ್ನಾನ ಮುಗಿಸಿ ಬಂದು ತಿಂಡಿ ತಿಂದು ತಟ್ಟೆಯನ್ನು ಹೊರಗಡೆ ಇಡುವ ಸಮಯದಲ್ಲಿ ಒಬ್ಬ ಶನಿಮಹಾತ್ಮ ದೇವರ ಫೋಟೋವನ್ನು ಹಿಡಿದುಕೊಂಡು ಬಿಕ್ಷುಕನು ಬಂದನು. ಆಗ ನಾನು ನಮ್ಮ ಮನೆಯ ಹಿಂಬಾಗದಲ್ಲಿ ಇದ್ದ ನಮ್ಮ ಸೋದರ ಮಾವನ ಮಗಳ ಹತ್ತಿರ ಹೋಗಿ ಆಕೆಯಿಂದ 2/- ರೂಪಾಯಿ ಬಿಕ್ಷೆ ಕೊಡಿಸಿದೆ. ಆಗ ಸದರಿ ಸರವು ಅಲ್ಲೇ ಇತ್ತು. ನಂತರ 5 ನಿಮಿಷ ಬಿಟ್ಟು ನನ್ನ ಚಿನ್ನದ ಸರವನ್ನು ಹಾಕಿಕೊಳ್ಳಲು ಹೋದಾಗ ನನ್ನ ಚಿನ್ನದ ಸರ ಇರಲಿಲ್ಲ. ನನಗೆ ಆ ಬಿಕ್ಷುಕನ ಮೇಲೆ ಅನುಮಾನ ಇರುತ್ತೆ. ಆತನು ಎಣ್ಣೆಗೆಂಪು ಬಣ್ಣದಿಂದ ಕೂಡಿದ್ದು ದುಂಡು ಮುಖದವನಾಗಿದ್ದು ಸುಮಾರು 45 ರಿಂದ 50 ವರ್ಷ ವಯಸ್ಸಾಗಿರುತ್ತೆ. ಸದರಿ ಚಿನ್ನದ ಸರವು 63 ಗ್ರಾಂ ತೂಕದ ಒಂದು ಎರಡೆಳೆ ಚಿನ್ನದ ಮಾಂಗಲ್ಯ ಸರ ಮತ್ತು ಚಿನ್ನದ ತಾಳಿ 2] ಎರಡು ಚಿನ್ನದ ಗುಂಡುಗಳು ಮತ್ತು ಒಂದು ಕಾಸು ಹಾಗೂ ಒಂದು ಚಿನ್ನದ ಕೊಂಡಿಗಳಾಗಿದ್ದು  ಒಟ್ಟು ತೂಕ 76 ಗ್ರಾಂ.ಇದ್ದು  ಮೌಲ್ಯ 1,75,000/-ರೂಪಾಯಿಗಳಾಗುತ್ತೆ ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 18-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅನಾಥ ಮಗುವಿನ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಪ್ರಕರಣ,  1 ಅಪಹರಣ ಪ್ರಕರಣ,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ ಹಾಗು 6 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ. 

ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 3, 42, 44, ಕೆ.ಎಂ.ಎಂ.ಸಿ.ಆರ್. 1994, ಹಾಗೂ 41(1ಎ) 21(1-5) ಎಂ.ಎಂ.ಆರ್.ಡಿ 1957 ಆಕ್ಟ್ ಕೂಡ 379 ಐ.ಪಿ.ಸಿ.

ದಿನಾಂಕ: 18-06-2013 ರಂದು ಪಿರ್ಯಾದಿ ಮಹದೇವ, ಗ್ರಾಮಲೆಕ್ಕಿಗರು, ಹೊನ್ನಾವರ ವೃತ್ತ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1.ಕೆಎ. 11 / 7535 ರ ಟ್ರ್ಯಾಕ್ಟರ್ ಚಾಲಕ, ರಂಗಸ್ವಾಮಿ ಸಿದ್ದಯ್ಯ, ಹೆಚ್.ಕ್ಯಾತನಹಳ್ಳಿ ಗ್ರಾಮ ಹಾಗು 2. ಕೆ.ಎ 33 ಟಿ 587 ರ ಟ್ರ್ಯಾಕ್ಟರ್ ಚಾಲಕ ಸಂದೀಪ ಬಿನ್. ಮಂಜುಬೋವಿ, ಅದ್ದೀಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 18-06-13 ರಂದು ಹೊನ್ನಾವರ ಗ್ರಾಮದ ಕಂಚಿನಕಲ್ಲು ಜಮೀನಿನ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದರೆಂದು ಫಿರ್ಯಾದಿಯವರಿಗೆ ಬಂದ ಖಚಿತ ಮಾಹಿತಿ ಮತ್ತು ರಾಜಸ್ವ ನಿರೀಕ್ಷಕರವರ ಆದೇಶದ ಮೇರೆಗೆ ಮಧ್ಯಾಹ್ನ 12-30 ಗಂಟೆಗೆ ಸ್ಥಳಕ್ಕೆ ಬೇಟಿ ನೀಡಿದಾಗ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ, ಮತ್ತು ಕಳ್ಳತನದಿಂದ ಮರಳು ತುಂಬುತ್ತಿದ್ದ ಆರೋಪಿಗಳು ಮತ್ತು ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 18-06-2013 ರಂದು ಪಿರ್ಯಾದಿ ಮೇರಿ ಕೋಂ. ಲೇಟ್. ಮುರುಗ, 28 ವರ್ಷ, ತಮಿಳು ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಮುರುಗ ಬಿನ್. ಪಂಜಮೂತರ್ಿ, 36 ವರ್ಷ, ತಮಿಳು ಕಾಲೋನಿ, ಮಂಡ್ಯ ರವರು ಹಾಗು ಜೊತೆಯಲ್ಲಿದ್ದ ಶ್ರೀನಿವಾಸ ಇಬ್ಬರೂ ಎಸ್,ಎಫ್,ಸರ್ಕಲ್ ನ ಪದ್ಮ ಸಾಗರ ಹೋಟೆಲ್ ನ ಪಕ್ಕ ಆದಂತೆ ಬಂದು ಇಳಿದಾಗ ತಕ್ಷಣ ಮೃತ ಕುಸಿದು ಬಿದ್ದು ಮೃತಪಟ್ಟಿದ್ದಾಗಿ ಹಾಗೂ ಮೃತ ಸಕ್ಕರೆ ಕಾಯಿಲೆಯಿಂದ ಜೊತೆಗೆ ಕುಡಿಯುವ ಅಭ್ಯಾಸವಿದ್ದು ಇದರಿಂದ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಕಂಡುಬಂದಿದ್ದು ತಾವುಗಳು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬೇಕಾಗಿ ಅಂತ ಕೊಟ್ಟ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಎ.ಎಸ್ ಕುಮಾರ್ ಸ್ವಾಮಿ ಬಿನ್. ಶಿವಣ್ಣ, ಅಂತರವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕು.ರಾಣಿ ಬಿನ್. ಮಹದೇವಪ್ಪ, 15 ವರ್ಷ ರವರು ಹೊಟ್ಟೆನೋವು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೂಂಡು ಮನೆಯ ಹಿಂಭಾಗದ ಕೊಟ್ಟಿಗೆಯ ಗುಡಿಸಲಿನ ಸರಕ್ಕೆ ಬಟ್ಟೆ ಹಗ್ಗದಿಂದ ಕುತ್ತಿಗೆ ಬಿಗಿದುಕೊಂಡು, ಒದ್ದಾಡುತ್ತಿರುವುದನ್ನು ಪಿರ್ಯಾದಿಯವರು ಕಂಡು ತಕ್ಷಣವೆ 108 ರ ವಾಹನದಲ್ಲಿ ಇವರ ಸಂಬಂಧಿಕರು ಸೇರಿ ಮಳವಳ್ಳಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈ ದಿವಸ ದಿನಾಂಕ:18-6-2013 ರಂದು  ಮದ್ಯಾಹ್ನ 12-30 ಗಂಟೆಯಲ್ಲಿ ಮೃತ ಹೊಂದಿರುತ್ತಾರೆ ಹಾಗೂ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 132/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 18-06-2013ರಂದು ಪಿರ್ಯಾದಿ ಶಿವಮ್ಮ ಕೊಂ. ಲೇಟ್. ಚಿಕ್ಕಮರಿಯಯ್ಯ, ಕೊನ್ನಾಪುರ ರವರು ನೀಡಿದ ದೂರು ಏನೆಂದರೆ ಹಿಂದಿನ 45 ದಿನಗಳಲ್ಲಿ ಕೊನ್ನಾಪುರ ಗ್ರಾಮದಲ್ಲಿ ಪುಷ್ಪ ಕೋಂ. ಬೋರಯ್ಯ, 35ವರ್ಷ ರವರಿಗೆ ಬುದ್ದಿಭ್ರಮಣೆಯಿಂದ ತಲೆಕೆಟ್ಟುದ್ದರಿಂದ ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಏನು ಪ್ರಯೋಜನವಾಗಿಲ್ಲ ಆದ್ದರಿಂದ ಕೊನ್ನಾಪುರದಲ್ಲಿ ಪಿರ್ಯಾದಿಯವರ ವಶದಲ್ಲಿದ್ದು ಪಿರ್ಯಾದಿಯವರು ಮನೆಯಲ್ಲಿ ಇಲ್ಲದಿರುವಾಗ ಮನೆಯಿಂದ ಹೊರಟು ಹೋಗಿದ್ದಾಳೆ. ನಾವು ತುಂಬಾ ಕಡೆ ಹುಡುಕಾಡಿದರು ಪ್ರಯೋಜನವಾಗಿಲ್ಲ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 134/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

      ದಿನಾಂಕ: 18-06-2013ರಂದು ಪಿರ್ಯಾದಿ ಸುರೇಶ ಬಿನ್. ಬಿ.ಜವರೇಗೌಡ, 35ವರ್ಷ, ವಕ್ಕಲಿಗರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ದೊಡ್ಡಪ್ಪನ ಮಗಳು ರಾಧಾ ಬಿನ್. ಲೇಟ್. ಕೆಂಚೇಗೌಡ, ದೊಡ್ಡ ಗಂಗವಾಡಿ ಗ್ರಾಮದ ರವರು ದಿನಾಂಕ:12-06-2013 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅನಾಥ ಮಗುವಿನ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 133/13 ಕಲಂ. 317 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಸಣ್ಣಮ್ಮ ಕೊಂ. ಲೇಟ್. ಬೊಮ್ಮರಾಯಿಗೌಡ, 40ವರ್ಷ, ವಕ್ಕಲಿಗರು, ಮನೆಕೆಲಸ, ಗೆಜ್ಜೆಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 18-06-13ರಂದು ಬೆಳಿಗ್ಗೆ 10-00ಗಂಟೆ ಸಮಯದಲ್ಲಿ ಮಂಚಪಟ್ಟಣದ ಕಾಲುವೆಯ ಏರಿಯ ಮೇಲೆ ಪಿರ್ಯಾದಿಯವರ ಹೋಗುತ್ತಿದ್ದಾಗ ಯಾರೋ ದುರಾತ್ಮರು ಒಂದು ಹೆಣ್ಣು ಮಗುವನ್ನು ಕಾಲುವೆಯಲ್ಲಿ ಇಟ್ಟು ಹೊರಟು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 212/13 ಕಲಂ. 494-506-498(ಎ)-504-149 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ರೇಣುಕ ಕೋಂ. ರವಿ, ದೇಶವಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಪಿರ್ಯಾದಿಯವರ ಗಂಡ 1] ರವಿ ಹಾಗು 2]ಸುರೇಶ, 3]ಅರುಣ, (ಛತ್ರನಹಳ್ಳಿ ಗ್ರಾಮ) 4]ಚಿಕ್ಕತಾಯಿ, 5]ಪುಟ್ಟಚನ್ನ ಹಾಗು 6]ಲಕ್ಷ್ಮಿ, ಎಲ್ಲರೂ ದೇಶವಳ್ಳಿ ಗ್ರಾಮ ರವರುಗಳು ದಿನಾಂಕ: 24-05-2013 ರಂದು 12-00 ಗಂಟೆಯಲ್ಲಿ ಮೇಲ್ಕಂಡವರುಗಳು ನನಗೆ ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡಿ ಕಿರುಕುಳ ನೀಡಿ ನನ್ನ ಗಂಡನಿಗೆ ಬೇರೆ ಹುಡುಗಿಯ ಜೊತೆ ಮದುವೆಯಾಗಿರುತ್ತಾರೆ ಅದ್ದರಿಂದ ನನ್ನ ಗಂಡ ರವಿ, ಹಾಗು ಇತರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 186/13 ಕಲಂ. 143-365 ಕೂಡ 149 ಐ.ಪಿ.ಸಿ.

ದಿನಾಂಕ: 18-06-2013ರಂದು ಪಿರ್ಯಾದಿ ಜಗದೀಶ ಬಿನ್. ಲೇಟ್. ರಾಮಕೃಷ್ಣ, ಮುರುಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಕೆಎ-05-ಎಂ.ಎಂ-5160, ಇನ್ನೋವಾ ಸಿಲ್ವರ್ ಕಾರ್ನಲ್ಲಿ ಬಂದ ಯಾರೋ 5 ರಿಂದ 6 ಜನ ಅಪರಿಚಿತ ಜನರ ತಂಡವೊಂದು ಬಂದು ನಮ್ಮ ಅಣ್ಣ ಸಂಪತ್ಕೃಷ್ಣ ರವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಆಗ ಸ್ಥಳದಲ್ಲಿ ನಾನು ಅಂದರೆ ಜಗದೀಶ ಮತ್ತು ನಮ್ಮ ಸಹಾಯಕ ರಾಜು ಅವರನ್ನು ತಡೆಯಲು ಮುಂದೆ ಹೋದೆವು. ಅಷ್ಟರಲ್ಲಿ ಅವರು ತಮ್ಮ ಕಾರಿನಲ್ಲಿ ಸಂಪತ್ಕೃಷ್ಣ ಅವರನ್ನು ಕೂರಿಸಿಕೊಂಡು ಹೋಗಿರುತ್ತಾರೆ. ಕಾರಿನ ನಂ.ಕೆಎ-05-ಎಮ್ಎಮ್-5160 ಇನ್ನೋವಾ ಸಿಲ್ವರ್ ಕಲರ್ ಕಾರು ಆಗಿದ್ದು ಅಪಹರಣವಾಗಿರುವ ನಮ್ಮ ಅಣ್ಣನನ್ನು ಹುಡುಕಿಸಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 379-188 ಐ.ಪಿ.ಸಿ.

ದಿನಾಂಕ: 18-06-2013 ರಂದು ಪಿರ್ಯಾದಿ ಎಸ್ ರಾಜು, ಗ್ರಾಮ ಲೆಕ್ಕಿಗರು,  ಮಳವಳ್ಳಿ ತಾ|| ಕಛೇರಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 18-06-2013 ರಂದು   ಮದ್ಯಾಹ್ನ 01.30 ಗಂಟೆಯಲ್ಲಿ ಕ್ಯಾತೇಗೌಡನದೊಡ್ಡಿ ಹತ್ತಿರ  ಆರೋಪಿ ಟ್ರಾಕ್ಟರ್ ಸಂಖ್ಯೆ ಎಪಿ-26-ಡಬ್ಲ್ಯು-4608 ರ ಟ್ರಾಕ್ಟರ್/ಮಾಲೀಕರು ಅಕ್ರಮವಾಗಿ ಕಳ್ಳತನ ಮಾಡಿ ಮರಳನ್ನು ಸಾಗಿಸುತ್ತಿದ್ದ ಬಗ್ಗೆ ಪಿರ್ಯಾದು ನೀಡಿದ ಮೇರೆಗೆ ಕೇಸು ನೊಂದಾಯಿಸಲಾಗಿದೆ.

DAILY CRIME REPORT DATE : 17-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ  5. ಮನುಷ್ಯ ಕಾಣೆಯಾದ ಪ್ರಕರಣಗಳು,  2 ವಂಚನೆ ಪ್ರಕರಣಗಳು,  1 ದರೋಡೆ ಪ್ರಕರಣ, 1  ಕಳವು ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್/ ಸಿ.ಆರ್.ಪಿ.ಸಿ  ಪ್ರಕರಣಗಳು ವರದಿಯಾಗಿರುತ್ತವೆ. 

 ಮನುಷ್ಯ ಕಾಣೆಯಾದ ಪ್ರಕರಣಗಳು:

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 131/13 ಮನುಷ್ಯ ಕಾಣೆಯಾಗಿದ್ದಾನೆ.

  ದಿನಾಂಕ: 17-06-2013 ರಂದು ಪಿರ್ಯಾದಿ ರಾಜು 25ವರ್ಷ, ಸೋಲಿಗರ ಕೊಪ್ಪಲು ಗ್ರಾಮ, ರವರು ನೀಡಿದ ದೂರಿನ ಸಾರಾಂಶವೆನೆಂದರೆ ನನ್ನ ತಮ್ಮ ರವಿರವರು ದಿನಾಂಕ 13/06/2013 ರಂದು ಬೆಳಗಿನ ಜಾವ 05-00 ಸಮಯದಲ್ಲಿ ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 17-06-2013 ರಂದು ಪಿಯರ್ಾದಿ ಜಯಮ್ಮ ಕೊಂ ವೆಂಕಟೇಶ, ಬೊಮ್ಮನಾಯಕನ ಹಳ್ಳಿ ಗ್ರಾಮ, ನಾಗಮಂಗಲರವರು ನೀಡಿದ ದೂರು ಏನೆಂದರೆ ನನ್ನ ಮಗ ಬಿ.ವಿ.ನಟರಾಜರವರು ದಿನಾಂಕ 04-10-2011 ರಂದು ಮನೆಯಿಂದ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಪತ್ತೆಮಾಡಿಕೊಡಿ ಎಂದು ನೀಡಿದ ಪಿಯರ್ಾದುವಿನ ಮೇರೆಗೆ ಪ್ರಕರಣವನ್ನು ನೊಂದಾಯಿಸಿರುತ್ತೆ.

3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ. 382/12 ಕಲಂ ಹುಡುಗಿ ಕಾಣೆಯಾಗಿದ್ದಾಳೆ.

     ದಿನಾಂಕ: 17-06-2013 ರಂದು ಪಿರ್ಯಾದಿ ಕೆ.ಎನ್. ಸುಂದರ್ ರಾಜು ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕುರವರು ನೀಡಿದ ಪಿರ್ಯಾದು ಏನೆಂದರೆ, ಎಸ್.ಎಸ್. ವಿವೇಕಾನಂದ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಕರು ರವರನ್ನು ನಮ್ಮ ಮಗಳು ಎಲ್ಲಿ ಎಂದು ಕೇಳಿದ್ದಕ್ಕೆ ನಿಮ್ಮ ಮಗಳು ಮಾವನ ಮನೆಗೆ ಹೋಗುವುದಾಗಿ ಹೇಳಿ ಹೊದಳು ಎಂದು ತಿಳಿಸಿರುತ್ತಾರೆ. ವಿವೇಕನಂದ ರವರ ಮೇಲೆ ಅನುಮಾನ ವಿದ್ದು ಕಾಣೆಯಾಗಿರುವ  ನಮ್ಮ ಮಗಳನ್ನು ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

4. ಮದ್ದೂರು  ಪೊಲೀಸ್ ಠಾಣೆ ಮೊ.ಸಂ.273/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

    ದಿನಾಂಕ: 17-06-2013 ರಂದು ಪಿರ್ಯಾದಿ ಶಿವು ಬಿನ್ ಲೇಟ್ ಗಂಗಯ್ಯ, ಕೆ. ಹೊನ್ನಲಗೆರೆ ಗ್ರಾಮ, ಮದ್ದೂರುರವರು ನೀಡಿದ ದೂರು ಏನೆಂದರೆ ದಿನಾಂಕ: 13-06-2013 ರಂದು ನನ್ನ ಹೆಂಡತಿ ಸುಮ ಮನೆಯಲ್ಲಿ ಬಟ್ಟೆ ಹೊಲಿಸಿಕೊಂಡು ಬರಲು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು ಪತ್ತೆಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

5. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ಸಂ. ಹುಡುಗಿ ಕಾಣೆಯಾಗಿದ್ದಾಳೆ.
 
  ದಿನಾಂಕ: 17-06-2013 ರಂದು ಪಿರ್ಯಾದಿ  ಶ್ರೀ.ಪ್ರಭುದೇವ ಬಿನ್ ಗುತ್ತಲೇಗೌಡ, ಅಣ್ಣೂರು ಗ್ರಾಮ, ಮದ್ದೂರು ತಾ.ರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರಂದು ನನ್ನ ಮಗಳು ಶೃತಿ ಮನೆಯಿಂದ ಕಾಣಿಯಾಗಿರುತ್ತಾಳೆ. ಅದೇ ಗ್ರಾಮದ ಸಿದ್ದಪ್ಪಾಜಿ (ಪವಿ) ಎಂಬುವನು ಸಹ ಗ್ರಾಮದಲ್ಲಿ ಕಾಣುತ್ತಿಲ್ಲ. ಹಣ, ಒಡವೆ ಮತ್ತು ಬಟ್ಟೆಗಳನ್ನು ತೆಗೆದುಕೊಂದು ಹೋಗಿರುತ್ತಾರೆ ಇವರನ್ನು ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಿರುತ್ತೆ.

 ವಂಚನೆ ಪ್ರಕರಣಗಳು:  

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ. 252/13 ಕಲಂ 420 ಐ.ಪಿ.ಸಿ
 
  ದಿನಾಂಕ:17-06-2013 ರಂದು  ಪಿರ್ಯಾದಿ  ಜಿ. ಪ್ರಸಾದ್ 28 ವರ್ಷ,  ನಂ. 18, ಸಾಗ್ಯ ಗ್ರಾಮ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆರವರು ಆರೋಪಿತ ಈಶನಾಯ್ಕ, 38 ವರ್ಷ, ಜೂನಿಯರ್ ಇಂಜಿನಿಯರ್, ಎಂ.ಜಿ.ರೋಡ್, ತರೀಕೆರೆ, ಚಿಕ್ಕಮಗಳೂರುರವರಿಗೆ ಶೇಕಡ 2 ರಷ್ಟು ಬಡ್ಡಿಯಂತೆ 50,000-00 ರೂ. ಸಾಲ ಪಡೆದುಕೊಂಡಿದ್ದು ಸದರಿ ಸಾಲದ ಹಣವನ್ನು 3 ತಿಂಗಳಲ್ಲಿ ವಾಪಸ್ ಮಾಡುವುದಾಗಿ ತಿಳಿಸಿದ್ದು 3 ತಿಂಗಳು ಕಳೆದ ನಂತರ ಫಿರ್ಯಾದಿಯವರು ಸದರಿ ಹಣವನ್ನು ವಾಪಸ್ ಮಾಡುವಂತೆ ಕೇಳಿದಾಗ ಆರೋಪಿಯು 50,000-00 ರೂ.ಗಳ ಎಸ್ಬಿಎಂ ಚೆಕ್ ನಂ. 629479 ಅನ್ನು ನೀಡಿರುತ್ತಾನೆ. ನಂತರ ತನಗೆ ತೊಂದರೆ ಇರುವುದರಿಂದ ಇನ್ನು ಒಂದು ವರ್ಷ ಕಾಲಾವಕಾಶ ಬೇಕೆಂದು ಕೋರಿಕೊಂಡಿದ್ದು ಅದರಂತೆ ಸದರಿ ಚೆಕ್ ಅನ್ನು ಬ್ಯಾಂಕಿಗೆ ಹಣ ಡ್ರಾ ಮಾಡಲು ಕೊಟ್ಟಾಗ ಸದರಿ ಚೆಕ್ನಲ್ಲಿ ಹಣವಿರುವುದಿಲ್ಲವೆಂದು ಬ್ಯಾಂಕಿನವರು ತಿಳಿಸಿದ್ದು ಈ ಬಗ್ಗೆ ಫಿರ್ಯಾದಿಯವರು ಆರೋಪಿಗೆ ಲೀಗಲ್ ನೋಟಿಸ್ ನೀಡಿದ್ದರೂ ಸಹ ಇದುವರೆಗೂ ಸದರಿ ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುತ್ತಾನೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ನೊಂದಾಯಿಸಿಕೊಂಡಿರುತ್ತೆ.

 2. ಬೆಳ್ಳೂರು ಪೊಲೀಸ್ ಠಾಣೆ ಮೊ.ಸಂ. 177/2013 ಕಲಂ. 408,420 ಐ.ಪಿಸಿ.

ದಿನಾಂಕ: 17-06-2013 ರಂದು ಪಿರ್ಯಾದಿ  ಶ್ರೀ ಪುನೀತ್ ವರ್ಮ ಉತ್ತರಹಳ್ಳಿ ಮುಖ್ಯರಸ್ತೆ,ಚಿಕ್ಕಲುಸಂದ್ರ, ಬೆಂಗಳೂರುರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ಹಿಂದಿನ ದಿನಗಳಲ್ಲಿ ಮತ್ತು ಬಿ.ಜಿ.ಎಸ್.ಗೆ ಸೇರಿದ ಸಸ್ಯಕಾಶಿಯಲ್ಲಿನ ಕರ್ನಾಟಕ  ಇಂಡಸ್ಟ್ರಿಯಲ್ ನ   ಪ್ಯಾಕ್ಟರಿಯ ಟೇಬಲ್ ಮೇಲೆ ಸ್ಟಿಚ್ ಮಾಡಿ ಇಟ್ಟಿದ 50 ತುಂಬು ತೋಳಿನ ರೆಡಿಮೇಡ್ ಶರ್ಟ್ ಮತ್ತು ಗ್ಲೌಸ್ ಮಾಡುವ 20 ಕೆ.ಜಿ ಬಟ್ಟೆಗಳು  ಮೇಲ್ಕಂಡವರು ನನಗೆ ಮೋಸಮಾಡುವ ಉದ್ದೇಶದಿಂದ ಮೇಲ್ಕಂಡ ಬಟ್ಟೆಗಳನ್ನು ಎಲ್ಲಿಯೋ ತೆಗೆದುಕೊಂಡು ಹೋಗಿ ನನಗೆ ವಂಚಿಸಿರುತ್ತಾರೆ., ಇವುಗಳ ಅಂದಾಜು ಬೆಲೆ ಸುಮಾರು 60,000/- ರೂಗಳಾಗಿರುತ್ತವೆ. ಸದರಿ ಫ್ಯಾಕ್ಟರಿಯ ಬೀಗದ ಕೀ ಸೆಕ್ಯೂರಿಟಿ ಪಾಂಡುರಂಗ ರವರ ಬಳಿ ಇದ್ದು. ನಮ್ಮ ಪ್ಯಾಕ್ಟರಿಯ ಬಾಗಿಲನ್ನು ಕೀ ಯಿಂದ ತೆಗೆದು ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ  ಮ್ಯಾನೇಜರ್ ಮುರುಗೇಶ್, ಸಹಾಯಕ ಮ್ಯಾನೇಜರ್ ಕರ್ಣ ಮತ್ತು ಸೆಕ್ಯೂರಿಟಿ ಗಾಡರ್್ ಪಾಂಡುರಂಗ ಈ 3 ಜನರು ಈ ಕೃತ್ಯ ಕ್ಕೆ ಬಾಗಿಯಾಗಿರುತ್ತಾರೆ ಎಂದು ನನಗೆ ಅನುಮಾನವಿರುತ್ತೆ. ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಿರುತ್ತೆ.

ದರೋಡೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ಸಂ. 185/13 ಕಲಂ. 392 ಐ.ಪಿ.ಸಿ

     ದಿನಾಂಕ: 17-06-2013 ರಂದು ಪಿರ್ಯಾದಿ  ಅಶ್ವಿನಿ ಕೋಂ ರಾಮಕೃಷ್ಣ ಗೋವಿಂದೇಗೌಡನಕೊಪ್ಪಲು ಗ್ರಾಮ ಕೆ.ಆರ್.ಪೇಟೆ ತಾ||ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ದಿನಾಂಕ: 15.06.2013 ಬೆಳಗ್ಗೆ 11-15 ಗಂಟೆ ಸಕರ್ಾರಿ ಆಸ್ಪತ್ರೆ ಹಿಂಭಾಗ ಕೆ.ಆರ್.ಪೇಟೆ ಟೌನ್ನಲ್ಲಿ ಆರೋಪಿತರುಗಳಾದ ಸುನೀಲ್ ಕುಮಾರನು ಪಿರ್ಯಾದಿಗೆ  ನನ್ನ  ಜೊತೆ ಬಾ ಎಂದು, ನೀನು ಬರದಿದ್ದರೆ ನಿನ್ನ  ಕುಂಟುಂಬವನ್ನು ಕೊಚ್ಚಿ ಹಾಕುತ್ತೆನೆಂದು ಬೆದರಿಕೆ ಹಾಕಿ, ಕೃಷ್ಣಮೂತರ್ಿ, ಹರೀಶ ಮತ್ತು  ಸುನೀಲ್ಕುಮಾರವರುಗಳು  ಪಿರ್ಯಾದಿಯ ಮುಖಕ್ಕೆ ಆಸಿಡ್ ಹಾಕುತ್ತೇವೆಂದು ಬೆದರಿಸಿ ಕತ್ತಿನಲ್ಲಿದ್ದ 90,000-00 ರೂ ಬೆಲೆ ಬಾಳುವ 30 ಗ್ರಾಂ ಚಿನ್ನದ ಸರವನ್ನು ಕಿತ್ತು ಜೇಬಿಗೆ ಇಟ್ಟುಕೊಂಡು ಹರೀಶ ಮತ್ತು  ಕೃಷ್ಣಮೂರ್ತಿ ಇಬ್ಬರು ಹಿಂದೆ ಕೊಟ್ಟಿರುವ  ಕೇಸನ್ನು ವಾಪಸ್ಸು ತೆಗೆದುಕೊಂಡರೆ ಚೈನ್ ಕೊಡುತ್ತೆವೆ ಇಲ್ಲವಾದರೆ ನನ್ನ ಮಾನ ಕಳೆದು ತಲೆ ಎತ್ತದಂತೆ ಮಾಡುತ್ತೆವೆಂದು ಬೆದರಿಕೆ ಹಾಕಿ ಪಿರ್ಯಾದಿಯನ್ನು ಹಿಡಿದು ಎಳೆದಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
                 
 ಕಳ್ಳತನ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 136/2013 ಕಲಂ 454-380 ಐ.ಪಿ.ಸಿ  

     ದಿನಾಂಕ: 17-06-2013 ರಂದು ಪಿರ್ಯಾದಿ ನಾಗರಾಜು ಬಿನ್ ಪ||  ಈರಂಕೇಗೌಡ ಕಲ್ಲುವೀರನಹಳಿ ಗ್ರಾಮರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರ ಹಿಂದಿನ ದಿನಗಳಲ್ಲಿ ಯಾರೋ ಕಳ್ಳರು ಮನೆಯಲ್ಲಿ ಬೀರುವಿನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 1 ಪದಕ ಬಿಳಿಕಲ್ಲು(ಬಿಳಿ ಡಾಲರ್) 120 ಗ್ರಾಂ, ಬ್ರಾಸ್ಲೈಟ್ 25ಗ್ರಾಂ, 2ಗಂಡು 10ಗ್ರಾಂ, 1ಉಂಗುರು  2ಗ್ರಾಂ (ಮಗುವಿನದು) ಒಟ್ಟು 158 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿ ಕೊಂಡು  ಹೋಗಿದ್ದಾ ರೆಂದು ಇವುಗಳ ಒಟ್ಟು ಮೌಲ್ಯ  4.75.000ರೂ ಗಳಾಗುತ್ತದೆ. ಪತ್ತೆ ಮಾಡಿಕೊಡಿ ಎಂದು ನೀಡಿದ ಪಿರ್ಯಾದುವಿನ  ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.