Moving text

Mandya District Police

PRESS NOTE DTD : 17-10-2013






                                                           

    ಪತ್ರಿಕಾ ಪ್ರಕಟಣೆ

   ದಿನಾಂಕ:15-10-2013ರಂದು ಮಳವಳ್ಳಿ ಗ್ರಾಮಾಂತರ ವೃತ್ತದ ಸಿಪಿಐ ರವರಾದ ಹೆಚ್.ಕೆ ಶಿವಸ್ವಾಮಿ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 145 ಕೃಷ್ಣಶೆಟ್ಟಿ ಹೆಚ್.ಸಿ 292 ಚೌಡಶೆಟ್ಟಿ ಪಿ.ಸಿ 441 ಪ್ರಭುಸ್ವಾಮಿ ಪಿ.ಸಿ 67  ಎಂ ಲೋಕೇಶ ರವರುಗಳು ಉಪವಿಭಾಗದ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಮಳವಳ್ಳಿ ಗ್ರಾಮಾಂತರ ಠಾಣಾ ಸರಹದ್ದಿನ ಮಾರೇಹಳ್ಳಿ ಗ್ರಾಮದ ಮಾರ್ಕಂಡಯ್ಯ ರೈಸ್ ಮಿಲ್ ಬಳಿ ಮಳವಳ್ಳಿ - ಕೊಳ್ಳೇಗಾಲ ರಸ್ತೆಯ ರಸ್ತೆಯ ಎಡಬದಿಯಲ್ಲಿ ಒಬ್ಬ ಆಸಾಮಿ ಒಂದು ಕಾರನ್ನು ನಿಲ್ಲಿಸಿಕೊಂಡು ಅನುಮಾನಾಸ್ವದವಾಗಿ  ಕಾರಿನ ಮರೆಯಲ್ಲಿ ನಿಂತಿದ್ದು ಜೀಪ್ ಹತ್ತಿರಕ್ಕೆ ಹೋಗುತ್ತಿದ್ದಂತೆ ಆತ ಓಡಿ ಹೋಗಲು ಪ್ರಯತ್ನಿಸಿದವನನ್ನು ಸಿಪಿಐ ಮತ್ತು ಸಿಬ್ಬಂದಿಯವರು ಹಿಂಬಾಲಿಸಿ ಸುತ್ತುವರಿದು ಹಿಡಿದು ಆತನ ಹೆಸರು ವಿಳಾಸವನ್ನು ವಿಚಾರ ಮಾಡಲಾಗಿ ಆತನ ಹೆಸರು ಸಿ.ಎನ್ ಲೋಕೇಶ  @ ಲೋಕಿ ಬಿನ್ ನರಸಿಂಹಯ್ಯ 32 ವರ್ಷ ನಾಯಕ್ ಜನಾಂಗ  ಭ್ರಮರಾಂಭ ಬಡಾವಣೆ 4 ನೇಕ್ರಾಸ್ ಮನೆ ನಂ 369 ಚಾಮರಾಜನಗರ   ಟೌನ್ ಎಂದು ತಿಳಿಸಿದ್ದು ಆತನ  ವಶದಲ್ಲಿದ್ದ  ಕಾರಿನ ಬಗ್ಗೆ  ವಿಚಾರ ಮಾಡಲಾಗಿ ಆತ  ಕಾರನ್ನು  ಬೆಂಗಳೂರಿನಲ್ಲಿ ಈಗ್ಗೆ ಕೆಲವು ದಿನಗಳ ಹಿಂದೆ ಕಳವು ಮಾಡಿರುವುದಾಗಿ ತಿಳಿಸಿದ್ದು  ಸದರಿ ಆಸಾಮಿಯನ್ನು ಹಾಗೂ ಆತನ ವಶದಲ್ಲಿದ್ದ ಕಾರ್ ನಂ ಕೆ.ಎ-09 ಎನ್. 1226 ಜೆನ್ ಕಾರನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ.237/13 ಕಲಂ 41(ಡಿ) ರೆವಿ 102 ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ನಂತರ ಮೇಲ್ಕಂಡ ಆರೋಪಿಯನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ವಿಚಾರ ಮಾಡಲಾಗಿದ್ದು ಆತನ ಸ್ವ ಇಚ್ಚಾ ಹೇಳಿಕೆಯ ಮೇರೆಗೆ ತಾನು ಕಳವು ಮಾಡಿದ್ದ ಮತ್ತೊಂದು ಸ್ವಿಪ್ಟ್ ಕಾರ್ ನಂಃ.ಕೆಎ-01 ಎಂ.ಎಫ್-8515, ಪಲ್ಸರ್ ಮೋಟಾರ್ ಬೈಕ್ ನಂ.ಕೆಎ-09 ಇಟಿ-7657, ಯಮಹ ಮೋಟಾರ್ ಬೈಕ್ ನಂ. ಕೆಎ-17 ಆರ್-2008 ರ ವಾಹನಗಳನ್ನು ಸಹ ಅಮಾನತ್ತು ಪಡಿಸಿಕೊಂಡಿದ್ದು, ಎಲ್ಲಾ ಮಾಲುಗಳ ಅಂದಾಜು ಮೌಲ್ಯ ಏಳು ಲಕ್ಷ ರೂಗಳಾಗಿರುತ್ತೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.

      ಮೇಲ್ಕಂಡ ಆರೋಪಿಯನ್ನು ದಸ್ತಗಿರಿ ಮಾಡಿ ಮಾಲುಗಳನ್ನು ವಶಪಡಿಸಿಕೊಂಡು ಮಳವಳ್ಳಿ ಗ್ರಾಮಾಂತರ ವೃತ್ತದ ಮೇಲ್ಕಂಡ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ


No comments:

Post a Comment