Moving text

Mandya District Police

DAILY CRIME REPORT DATED : 19-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-04-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 29 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 19-04-2013 ರಂದು ಪಿರ್ಯಾದಿ ಗುರುಮೂರ್ತಿ ಬಿನ್. ಲೇ. ಹುಚ್ಚಪ್ಪ, 50ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ವಯಸ್ಸು ಸುಮಾರು 50-55 ವರ್ಷ, ಹೆಸರು, ವಿಳಾಸ ತಿಳಿಯಬೇಕಾಗಿದೆ ದಿನಾಂಕ: 18-04-2013 ರ ರಾತ್ರಿ ವೇಳೆಯಲ್ಲಿ ಹಲಗೂರು ನಾಗರಾಜಪ್ಪರವರ ಸರ್ವೆ. ನಂ. 176ರ ಜಮೀನಿನಲ್ಲಿರುವ ಒಂದು ಉಲಚಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಶವವು ಮರದಲ್ಲಿ ನೇತಾಡುತ್ತಿರುತ್ತೆ ಶವದ ತೊಡೆಯ ಬಳಿ ರಕ್ತ ಬರುತ್ತಿದ್ದು ಸಾವಿನ ಬಗ್ಗೆ ಅನುಮಾನವಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ:19-04-2013 ರಂದು ಪಿರ್ಯಾದಿ ಬಸವರಾಜು ಬಿನ್. ಚಿಕ್ಕಬಸವಯ್ಯ, 46 ವರ್ಷ, ಒಕ್ಕಲಿಗರು, ಉಪನ್ಯಾಸಕರು, ಸುಲ್ತಾನ್ ರಸ್ತೆ, ಚರ್ಚ ಎದುರು ಮಳವಳ್ಳಿ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಲ್ಲೇಶ ಬಿನ್. ಲೇಟ್. ಸುಬ್ಬಶೆಟ್ಟಿ, ಪಾಳ್ಯೆ ಗ್ರಾಮ, ಕೋಳ್ಳೇಗಾಲ ತಾಲ್ಲೂಕು, ಕೆಎ-05-ಎಸ್-7509ರ ಟಿ.ವಿ.ಎಸ್. ಸ್ಕೂಟಿ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಸರೋಜಮ್ಮರವರಿಗೆ ಡಿಕ್ಕಿ ಮಾಡಿಸಿದ ಪರಿಣಾಮ, ತಲೆಗೆ ಮತ್ತು ಕಿವಿಯ ಹತ್ತಿರ ಏಟಾಗಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗಮಧ್ಯೆ  ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment