Moving text

Mandya District Police

DAILY CRIME REPORT DATED : 30-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-03-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  1 ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ರಾಮಯ್ಯ ಬಿನ್. ಲೇಟ್. ಲಕ್ಕಣ್ಣ, 55ವರ್ಷ, ಕೊನೇಗೌಡನಪಾಳ್ಯ ಗಾಮ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಶ್ರೀ ನಿವಾಸ ಬಿನ್. ರಾಮಯ್ಯ, 25ವರ್ಷ, ಕೊನೇಗೌಡನಪಾಳ್ಯ ಗ್ರಾಮ, ತುಮಕೂರು ಜಿಲ್ಲೆ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯ ಮಗನಾದ ಮೃತ ಶ್ರೀನಿವಾಸನು ದೊಡ್ಡಗುಣಿ ಗ್ರಾಮದಲ್ಲಿ ತನ್ನ ಸೋದರರೊಂದಿಗೆ ಜಮೀನಿನಲ್ಲಿ ಮಣ್ಣನ್ನು ತೆಗೆಯುವಾಗ ಆಕಸ್ಮಿಕವಾಗಿ ಮಣ್ಣಿನಗುಡ್ಡೆ ಶ್ರೀನಿವಾಸ ಮೇಲೆ ಕುಸಿದು ಬಿದ್ದು, ಆತನನ್ನು ಉಪಚರಿಸಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತನಾಗಿರುತ್ತಾನೆಂದು, ಸದರಿ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನ ಇರುವುದಿಲ್ಲವೆಂದು ಹಾಗೂ ತಾವು ಬಂದು ಮೃತ ಶ್ರಿನಿವಾಸ ಶವದ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ನಂಜುಂಡ ಬಿನ್. ಎಲ್. ನಿಂಗಪ್ಪ, 42 ವರ್ಷ, ಹಾಲುಮತ, ಎಲೆಕ್ಟ್ರಿಕ್ ಗುತ್ತಿಗೆದಾರ, ತುರಹಲ್ಲಿ ಗ್ರಾಮ, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಅವರ ತಂದೆ ದಿನಾಂಕ: 29-03-2013 ರಂದು ಸಂಜೆ 06-30  ಗಂಟೆಯಲ್ಲಿ  ಶ್ರೀರಂಗಪಟ್ಟಣ ಟೌನ್ ಗಂಜಾಂ ನಲ್ಲಿರುವ  ನಾಗರಾಜಯ್ಯ ರವರು ನನ್ನ ತಮ್ಮ ಈಶ್ವರನಿಗೆ  ನಿಮ್ಮ ತಂದೆ ಎದೆ ನೋವಿನಿಂದ ಮೃತಪಟ್ಟಿರುತ್ತಾರೆ ಎಂದು ಪೋನ್ ಮಾಡಿ ತಿಳಿಸಿದ್ದು ನಾವು ತಕ್ಷಣ  ಗಂಜಾಂಗೆ ಬಂದು ನೋಡಿದೆವು ನಮ್ಮ  ತಂದೆಯವರು  ದಿನಾಂಕ: 29-03-2013 ರಂದು ಸಂಜೆ 04-30  ಗಂಟೆಯಲ್ಲಿ ಎದೆನೋವಿನಿಂದ ನಾಗರಾಜಯ್ಯ ರವರ ಜಮೀನಿನಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಅರ್. ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ಕೃಷ್ಣಮೂತರ್ಿ ಬಿನ್. ಲೇಟ್: ಬೆಟ್ಟಯ್ಯ, 32 ವರ್ಷ, ಪರಿಶಿಷ್ಟ ಜಾತಿ, ಕೆಂಚನಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗ 6 ವರ್ಷದ ಪ್ರೀತಮ್ ತೆಂಗಿನ ಮರದ ಕೆಳಗೆ ಆಟವಾಡುತ್ತಿದ್ದಾಗ ಅಕಸ್ಮಿಕವಾಗಿ ತೆಂಗಿನ ಮರದಿಂದ ತೆಂಗಿನ ಕಾಯಿ ತಲೆಯ ನೆತ್ತಿಯ ಮೇಲೆ ಬಿದ್ದು ಈ ಸಂಬಂದ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 30-03-2013ರಂದು ಪಿರ್ಯಾದಿ ಶಂಕರಮ್ಮ ಕೋಂ. ದೇವರಾಜು, ಉಮ್ಮಡಹಳ್ಳಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕಃ-29-03-2013ರಂದು ಈ ಕೇಸಿನ ಪಿರ್ಯಾದಿ ರವರ 18 ವರ್ಷದ ಅವರ ಅಣ್ಣನ ಮಗಳು ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 143-147-148-504-323-324-506 ರೆ/ವಿ 149 ಐಪಿಸಿ ಮತ್ತು 3 ಕ್ಲಾಸ್ [2], [5 ] [10] ಆಫ್ ಎಸ್.ಸಿ./ಎಸ್.ಟಿ ಪಿ.ಎ.ಆಕ್ಟ್ 1989.

ದಿನಾಂಕ: 30-03-2013ರಂದು ಪಿರ್ಯಾದಿ ಬಿ.ಬಸವಯ್ಯ ಬಿನ್. ಕೊಂಗಯ್ಯ, ಕಾರಕಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವಲಿಂಗೇಗೌಡ ಬಿನ್. ಮುದ್ದೇಗೌಡ, ಹಾಗೂ ಇತರೆ 18 ಜನರು ದಿನಾಂಕ;29-03-13 ರಂದು ರಾತ್ರಿ ಸುಮಾರು 9-30ಗಂಟೆ ಸಮಯದಲ್ಲಿ ಕಾರಕಹಳ್ಳಿ ಗ್ರಾಮದ ಶ್ರೀ.ಬಸವೇಶ್ವರ ದೇವಸ್ಥಾನದ ಮುತ್ತರಾಯಸ್ವಾಮಿ ಪರದಲ್ಲಿ ಉಳಿದ ಸಾಮಾನುಗಳನ್ನು ಹರಾಜಿನಲ್ಲಿ ಪಿರ್ಯಾದಿಯವರು ಬಾಗವಹಿಸಿದಾಗ ಈ ಕೇಸಿನ ಆರೋಪಿಗಳು ಪಿರ್ಯಾದಿಯವರಿಗೆ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈಯ್ದು, ಕಾರದಪುಡಿ, ಚಾಕುಗಳನ್ನು ಹಿಡಿದು ನೀವು ಹೊಲೆಯರು ದೇವಸ್ಥಾನದ ಒಳಗಡೆ ಯಾರು ನಿಮ್ಮನ್ನು ಕರೆಯಿಸಿದವರು ಎಂದು ಪಿರ್ಯಾದಿಯ ತಂದೆಗೆ ಹಾಗೂ ಇತರರಿಗೆ ಹೊಡೆದು ಬಟ್ಟೆ ಹರಿದು ಹಾಕಿ ಕೊಲೆ ಬೆದರಿಕೆ ಹಾಕಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 29-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-03-2013 ರಂದು ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ರಾಬರಿ ಪ್ರಕರಣ,  1 ಅಪಹರಣ ಪ್ರಕರಣ,  1 ಕಳ್ಳತನ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 279,304 [ಎ] ಐಪಿಸಿ ರೆ/ವಿ 187 ಐಎಂವಿ ಕಾಯ್ದೆ.

ದಿನಾಂಕ: 29-03-2013 ರಂದು ಪಿರ್ಯಾದಿ ಬಸವರಾಜು ಬಿನ್. ಮರಿಸಿದ್ದೇಗೌಡ, 31 ವರ್ಷ, ಒಕ್ಕಲಿಗರು, ವ್ಯವಸಾಯ, ಬಸವನಹಳ್ಳಿ ಗ್ರಾಮ, ಬನ್ನೂರು ಹೋಬಳಿ, ಟಿ. ನರಸಿಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿ: 28-03-2013 ರಂದು ರಾತ್ರಿ 8-40 ಗಂಟೆಯಲ್ಲಿ ಶ್ರೀರಂಗಪಟ್ಟಣ-ಬನ್ನೂರು ರಸ್ತೆ, ಮಂಡ್ಯ ಕೊಪ್ಪಲು ಬಳಿ ಆರೋಪಿ ಕೆ.ಎ-55-125 ರ ಟಿಪ್ಪರ್ ಚಾಲಕ ಚಾಲನೆ ಮಾಡಿಕೊಂಡು ಬಂದು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ನವೀನ ಮತ್ತು ಕುಮಾರನಿಗೆ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ಆರೋಪಿ ಟಿಪ್ಪರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಾಬರಿ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 392 ಐ.ಪಿ.ಸಿ.

ದಿನಾಂಕ: 29-03-2013 ರಂದು ಪಿರ್ಯಾದಿ ನಾಗಮಣಿ ಕೋಂ. ನಿಂಗರಾಜು, 33 ವರ್ಷ, ಗೃಹಿಣಿ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:-29-03-13 ರಂದು  ಬೆಳಿಗ್ಗೆ 11-30 ರ ಸಮಯದಲ್ಲಿ ಪಿರ್ಯಾದಿರವರು ತಮ್ಮ ಸಂಬಂಧಿಕರ ಸಾವಿಗೆ ಹೋಗಲು ಕಿರಗಂದೂರು ಗೇಟ್ ನಲ್ಲಿ ಇಳಿದು ಕಿರಗಂದೂರು ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಯಾರೋ ಇಬ್ಬರು ಅಪರಿಚಿತ ಹುಡುಗರು ಒಂದು ಬೈಕ್ ನ್ನು, ನಿಲ್ಲಿಸಿಕೊಂಡು ನಿಂತಿದ್ದವರು ನಾನು ಬರುವುದನ್ನು ನೋಡಿ ನಾನು ಸಾವಿಗೆ ಬರ್ತಿದೀನಿ ಎಂದು ಒಬ್ಬ ಮಾತನಾಡಿಕೊಂಡು ಬಂದವನೆ ನನ್ನ ಕುತ್ತಿಗೆಗೆ ಕೈ ಹಾಕಿ ನನ್ನ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಬೈಕ್ ನಲ್ಲಿ ಮಂಡ್ಯದ ಕಡೆಗೆ ಹೊರಟು ಹೋದರು. ನನ್ನ ಬಳಿ ಕಿತ್ತುಕೊಂಡು ಹೋದ ಒಂದು ರೋಲ್ಡ್ ಗೋಲ್ಡ್ ನ ಮಾಂಗಲ್ಯ ಸರ, ಹಾಗೂ ಅದರಲ್ಲಿದ್ದಚಿನ್ನದ 2 ತಾಳಿಗಳು, 1 ಕಾಸು, 2 ಗುಂಡುಗಳು, ಒಟ್ಟು 7 ಗ್ರಾಂ ತೂಕದವುಗಳು. ಒಟ್ಟು ಬೆಲೆ ಸುಮಾರು 15,000/ ರೂಗಳಾಗಿದ್ದು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 366[ಎ] ಐ.ಪಿ.ಸಿ.

ದಿನಾಂಕ: 29-03-2013 ರಂದು ಪಿರ್ಯಾದಿ ಸರ್ದಾರ್ ಬಿನ್. ಶಬ್ಬೀರ್ ಅಹಮದ್, ಮಹಾಂಕಾಳೇಶ್ವರಿ ಬಡಾವಣೆ, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ:24-03-2013 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ, ಮಹಾಂಕಾಳೇಶ್ವರಿ ಬಡಾವಣೆಯಲ್ಲಿ ಅವರ 15 ವರ್ಷದ ಹುಡುಗಿಯನ್ನು ಅಪಹರಿಸಿರುತ್ತಾರೆಂದು ಶಂಕೆಯು ನಮಗೆ ಇದೆ. ಆದ್ದರಿಂದ ತಾವುಗಳು ದಯಮಾಡಿ ಮೇಲ್ಕಂಡ ಹಾಜಿರಾ ಎಂಬುವವಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-03-2013 ರಂದು ಪಿರ್ಯಾದಿ ಸಿರಾಜ್ ಉನ್ನೀಸಾ, ಮುಖ್ಯಶಿಕ್ಷಕಿ, ಸಕರ್ಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 28-03-2013 ರಂದು ರಾತ್ರಿ ವೇಳೆ ಶಾಲೆಯ ಕೆಲಸ ಕಾರ್ಯಗಳನ್ನು ಮುಗಿಸಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಯಾವುದೋ ಆಯುಧದಿಂದ ಮೀಟಿ ಒಳಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ಭಾರತ್ ಕಂಪನಿಯ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 3000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-03-2013 ರಂದು ಪಿರ್ಯಾದಿ ಎನ್.ವಿ.ವೇಣು ಗೋಪಾಲ್ ಬಿನ್. ಎನ್.ವಿ.ಸಂತೋಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 29-03-2013 ರ ಸಂಜೆ 06-00 ಗಂಟೆಯಲ್ಲಿ ಮೈಸೂರು - ಬೆಳ್ಳೂರು ಮುಖ್ಯ ರಸ್ತೆಯಲ್ಲಿರುವ ಫಿರ್ಯಾದಿಯವರ ಬಾಬ್ತು ದಿನಸಿ ಅಂಗಡಿ ಬಳಿ ಸುಮಾರು, 50 ವರ್ಷ ವಯಸ್ಸಿನ ಅಪರಿಚಿತ ಗಂಡಸು, ಹೆಸರು ವಿಳಾಸ ಗೊತ್ತಿರುವುದಿಲ್ಲ ಇವರು ಯಾವುದೋ ಖಾಯಿಲೆಯಿಂದ ನರಳಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 498[ಎ]-506 ಐ.ಪಿ.ಸಿ.

ದಿನಾಂಕ: 29-03-2013 ರಂದು ಪಿರ್ಯಾದಿ ಪೂರ್ಣಿಮ ಕೋಂ. ಸುರೇಶ್, ನಂದಾಟಾಕೀಸ್ ಹಿಂಭಾಗ, ಇಂದಿರಾ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಅವರ ಗಂಡ ಆರೋಪಿ-1 ಸುರೇಶ ಬಿನ್. ರಾಜು ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಆರೋಪಿ-2 ಗೌರಮ್ಮ ಬಿನ್. ರಾಜು ರವರು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 28-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-03-2013 ರಂದು ಒಟ್ಟು 66 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಸಾಮಾನ್ಯ ಹಾಗು 1 ವಾಹನ ಕಳವು ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,   1 ವಂಚನೆ ಪ್ರಕರಣ,  1 ಅತ್ಯಾಚಾರ ಪ್ರಕರಣ ಹಾಗು 60 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ಸಾಮಾನ್ಯ ಹಾಗು ವಾಹನ ಕಳವು ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 380 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ನಸೀಮ್ ಉನ್ನೀಸ, ಪ್ರಾಂಶುಪಾಲರು, ಸರ್ಕಾಠರಿ ಪದವಿ ಪೂರ್ವ ಕಾಲೇಜು, ಬಿಂಡಿಗನವಿಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಯಾವುದೋ ಒಂದು ಆಯುಧದಿಂದ ಕಿಟಕಿಯ ಬಾಗಿಲನ್ನು ಗುದ್ದಿ ಕಿಟಕಿಗಳ ಲಾಕ್ನ್ನು ತೆಗೆದು ತಂತಿಗಳ ಸಹಾಯದಿಂದ ಅಲ್ಲಿದ್ದ 4 ಮೌಸ್ ಗಳು, 1 ಪ್ರೋಜೆಕ್ಟರ್ ರಿಮೋಟ್, 3 ವಿಂಡೋ ಕ್ಲಾತ್ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು 1390/- ರೂ.ಗಳಷ್ಟಿರುತ್ತದೆ. ಕಂಪ್ಯೂಟರ್ ಉಪಕರಣಗಳನ್ನು ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.


2. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 54/13 ಕಲಂ. 379 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಹೆ.ಕೆ.ರವಿ ಬಿನ್. ಬಾಪೂರಿ ಕೆಂಚೇಗೌಡ, ಒಕ್ಕಲಿಗರು, ವ್ಯವಸಾಯ, ಹೆಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಪಿಯರ್ಾದಿಯವರು ತಮ್ಮ ಮನೆಯವರೆಗಿನ ಕಂಪೌಂಡ್ ನಲ್ಲಿ ಕಟ್ಟಿಹಾಕಿದ್ದ ಇಲಾತಿಯ ಹಸುವನ್ನು ಮತ್ತು ಅಲ್ಲದೆ ವೀರೇಗೌಡ ರವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 379 ಐ.ಪಿ.ಸಿ. 

ದಿನಾಂಕ: 28-03-2013 ರಂದು ಪಿರ್ಯಾದಿ ವೆಂಕಟೇಶ ಬಿನ್ ವೆಂಕಟಯ್ಯ, ಹುಲಿಗೆರೆಪುರ ಗ್ರಾಮ, ಕಸಬಾ  ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿಯರ್ಾದಿಯವರು ಹನುಮಂತ ನಗರದ ಶ್ರೀ.ಆತ್ಮ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಬಾಬ್ತು ಬೈಕ ನಂ:ಕೆ.ಎ 03-ಇಜಿ -3017 ಹಿರೋ ಹೊಂಡಾ ಮೋಟರ್ ಸೈಕಲ್  ದೇವಸ್ಥಾನಕ್ಕೆ ಪೂಜೆಗೆ ಹೋಗಿ ರಾತ್ರಿ ವಾಪಸ್ 01-30 ಗಂಟೆಗೆ ಬಂದು ನೋಡಲಾಗಿ ಬೈಕ್ ಇರಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 279-337-304(ಎ] ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಪ್ರಕಾಶ್ ಡಿ. ಬಿನ್. ದೇವೇಗೌಡ, ದಮ್ಮನಿಂಗಲ ಗ್ರಾಮ, ಕೆ.ಆರ್. ಪೇಟೆ  ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸೋಮಶೇಖರ್ ಬಿನ್. ಲೇಟ್. ದೇವೇಗೌಡ, ಶ್ಯಾರಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 20-03-2013 ರಂದು ತನ್ನ ಮೋಟಾರ್ ಬೈಕ್ ನಂ: ಕೆಎ-11 ಕ್ಯೂ-679 ರಲ್ಲಿ ಬರುತ್ತಿರುವಾಗ ಚಿಕ್ಕಹೊಸಹಳ್ಳಿ ಗ್ರಾಮದ ಸಾವಿತ್ರಮ್ಮ ಎಂಬುವರಿಗೆ ಡಿಕ್ಕಿ ಹೊಡೆಸಿ ಎಸ್.ಡಿ,ಸೋಮಶೇಖರ್ ರವರು ರಸ್ತೆಯಲ್ಲಿ ಬಿದ್ದು ತಲೆಯಲ್ಲಿ ತೀವ್ರವಾದ ಪೆಟ್ಟು ಬಿದ್ದು  ಗಾಯಾಳುವನ್ನು ಸಕರ್ಾರಿ ಆಸ್ಪತ್ರೆ ಕೆ.ಆರ್.ಪೇಟೆಗೆ ಸೇರಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 419-420-468-417 ಹಾಗು 34 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಜಯರಾಮು ಬಿನ್. ಕೆಂಚೇಗೌಡ, ಹುನಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ರಾಮಲಿಂಗಯ್ಯ ಹುನಗನಹಳ್ಳಿ ಗ್ರಾಮ ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸರ್ವೆ. ನಂ.16/1 ಬಿ ಯಲ್ಲಿ 0.28ರ ಗುಂಟೆ ಜಮೀನನ್ನು ರಾಮಲಿಂಗಯ್ಯ ಹಾಗೂ ಇತರೆಯವರು ಪೋರ್ಜರಿ ಮಾಡಿ ಭೋಗ್ಯದ ಖುಲಾಸೆ ಪತ್ರವನ್ನು ಸೃಷ್ಟಿ ಮಾಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅತ್ಯಾಚಾರ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 376-420-506 ಐ.ಪಿ.ಸಿ.

ದಿನಾಂಕ: 28-03-2013 ರಂದು ಪಿರ್ಯಾದಿ ಶಮರ್ಿಳಾ ದೇವಿ ಬಿನ್. ಹನುಮೇಗೌಡ, ರಾಗಿಮುದ್ದನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ 1]ಆದರ್ಶ @ ಅಂಕೇಗೌಡ, 2]ಜಯಮ್ಮ. 3]ಶೃತಿ ಬಿನ್. ಜಯಮ್ಮ, ಎಲ್ಲರೂ ರಾಗಿಮುದ್ದನಹಳ್ಳಿ ಗ್ರಾಮ ರವರುಗಳು ಬಲವಂತದಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರಮಾಡಿ ಕೊಲೆ ಮಾಡುವುದಾಗಿ ಹೆದರಿಸಿ ಚಿನ್ನದ ಓಲೆ ವಡವೆ ಕಿತ್ತುಕೊಂಡು ವಾಪಸ್ ಬಿಟ್ಟು ಹೋಗಿರುತ್ತಾರೆ ನನಗೆ ಮೋಸ ಮಾಡಿದವನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

                                              ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                ಮಂಡ್ಯ ಜಿಲ್ಲೆ, ದಿನಾಂಕಃ 27-03-2013.
ಪತ್ರಿಕಾ ಪ್ರಕಟಣೆ
ಅರಕೆರೆ ಪೊಲೀಸ್ ಠಾಣಾ ಮೊ.ನಂ.33/2013 ಕಲಂ 302 ಐಪಿಸಿ ಪ್ರಕರಣದ ಪತ್ತೆ ಬಗ್ಗೆ. 
* * * * * *
           ಶ್ರೀ ಎನ್.ಎಸ್ ನವೀನ [ಬಿನ್ ಶಿವಶಂಕರ್, 27 ವರ್ಷ, ಶಿವಾರ್ಚಕರು ಜನಾಂಗ, ಅರ್ಚಕ ವೃತ್ತಿ, ನಂ. 621, ಸುಬ್ಬಪ್ಪ ಗೋಡೌನ್ ಹಿಂಭಾಗ, 13ನೇ ಕ್ರಾಸ್,] ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ಮಂಡ್ಯ ಸಿಟಿ. ಸ್ವಂತ ಊರುಃ ನೇರಲೆಕೆರೆಗ್ರಾಮ. ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ಎಂಬುವರು ದಿಃ12/02/2013 ರಂದು ಅರಕೆರೆ ಪೊಲೀಸ್ ಠಾಣೆಯಲ್ಲಿ ಒಂದು ಪಿರ್ಯಾದನ್ನು ನೀಡಿ ಅದರಲ್ಲಿ ತಾನು ಮತ್ತು ತನ್ನ ತಮ್ಮ ಮಂಡ್ಯದಲ್ಲಿ [ಜೈಲ್ ಬಳಿ ಇರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ] ಅರ್ಚಕರಾಗಿ ಕೆಲಸ ಮಾಡಿಕೊಂಡು ಮಂಡ್ಯದಲ್ಲೇ ಇರುತ್ತೇವೆ. ತಮ್ಮ ಸ್ವಂತ ಊರು ಶ್ರೀರಂಗಪಟ್ಟಣ ತಾಲ್ಲೂಕು ನೇರಲೆಕೆರೆ ಗ್ರಾಮವಾಗಿರುತ್ತದೆ. ತನ್ನ ತಂದೆ ಶಿವಶಂಕರ ರವರು ದಿಃ 07/02/2013 ರಂದು ಮಂಡ್ಯದಿಂದ ಮನೆ ನೋಡಿಕೊಂಡು ಬರುತ್ತೇನೆಂದು ನೇರಲೆಕೆರೆಗೆ ಹೋಗಿದ್ದರು ಅವರು ಹೋದ 3-4 ದಿವಸದಲ್ಲೇ ಹಿಂದಕ್ಕೆ ಮಂಡ್ಯಕ್ಕೆ ಬಂದು ಬಿಡುತ್ತಿದ್ದರು. ಈ ಸಾರಿ 5 ದಿವಸವಾದರೂ ವಾಪಸ್ ನಮ್ಮ ಮನೆಗೆ ಬಾರದ ಕಾರಣ ತಂದೆಯ ಮೊಬೈಲ್ಗೆ ಕರೆ ಮಾಡಿದಾಗ ಯಾವುದೇ ಉತ್ತರ ಬರದೇ ಸ್ವಿಚ್ ಆಫ್ ಆಗಿತ್ತು. ಅವರು ಯಾವ ದಿನದಲ್ಲೂ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿರಲಿಲ್ಲ. ಅಲ್ಲಿನ ಪಕ್ಕದ ಮನೆಯವರನ್ನು ಇರುವಿಕೆಯ ಬಗ್ಗೆ ಕೇಳಿದಾಗ, ಅವರು ನಾವು ನಿಮ್ಮ ತಂದೆಯವರನ್ನು 5 ದಿವಸದಿಂದ ನೋಡಲಿಲ್ಲ. ನಿಮ್ಮ ಮನೆಯ ಕಾಂಪೌಂಡಿನ ಗೇಟ್ ತೆಗೆದಿದ್ದು, ನಿಮ್ಮ ತಂದೆಯವರು ಮೆಟ್ಟಿಕೊಳ್ಳುವ ಶೂ ಬಾಗಿಲಿನ ಮುಂದೆ ಇದೆ, ಬಾಗಿಲಿಗೆ ಬೀಗ ಹಾಕಿದೆ ಎಂದು ತಿಳಿಸಿದ್ದ ಮೇರೆ ಸಹೋದರ ಪೃಥ್ವಿರಾಜನ ಜೊತೆ ದಿಃ11/02/2013 ರಂದು ರಾತ್ರಿ ನೇರಲೆಕೆರೆ ಗ್ರಾಮಕ್ಕೆ ಬಂದು ನೋಡಿದಾಗ ಮನೆಯ ಗೇಟ್ ತೆಗೆದಿದ್ದು, ಶೂಗಳು ಅಲ್ಲೇ ಇದ್ದು, ಮನೆಯ ಬಾಗಿಲಿಗೆ ಬೀಗ ಹಾಕಿದ್ದು, ಮನೆಯ ಒಳಗಡೆ ಲೈಟ್ ಉರಿಯುತ್ತಿದ್ದು, ಬಾಗಿಲಿನ ಸಮೀಪಕ್ಕೆ ಹೋಗಿ ನೋಡಿದಾಗ ಒಳಗಡೆ ದುವರ್ಾಸನೆ ಬಂದ ಮೇರೆಗೆ 2-3 ಬಾರಿ ಕರೆದಾಗ ಯಾವುದೇ ಉತ್ತರ ಬಾರದ ಕಾರಣ ಮನೆಯ ಮೇಲಕ್ಕೆ ಹತ್ತಿ, ಹೆಂಚನ್ನು ತೆಗೆಸಿ, ಬ್ಯಾಟರಿ ಹಾಕಿ ನೋಡಿದಾಗ ನಮ್ಮ ತಂದೆಯು ನಮ್ಮ ಮನೆಯ ಹಾಲಿನಲ್ಲಿರುವ ದಿವಾನ್ ಕಾಟಿನ ಮೇಲೆ ಅಂಗಾತವಾಗಿ ಸತ್ತು ಮಲಗಿದ್ದು, ಮೈಮೇಲೆಲ್ಲಾ ಚರ್ಮವು ಸುಲಿದುಕೊಂಡಿರುವಂತೆ ಕೊಳೆತು ದುವರ್ಾಸನೆ ಬರುತ್ತಿದ್ದು, ಎರಡೂ ಕಣ್ಣು ಮುಚ್ಚಿದ್ದು, ನಾಲಿಗೆಯು ಬಾಯಿಯಿಂದ ಹೊರಬಂದಿದ್ದು, ಮನೆಯ ಬೀಗವನ್ನು ಹೊಡೆದು, ಮನೆಯೊಳಗೆ ಹೋಗಿ ನೋಡಿದಾಗ ಯಾರೋ ದುರಾತ್ಮರು ಯಾವುದೋ ದುರುದ್ದೇಶದಿಂದ ನನ್ನ ತಂದೆಯ ಕತ್ತನ್ನು ಹಿಸುಕಿಯೋ ಅಥವಾ ಯಾವುದೋ ಆಯುಧದಿಂದ ಅವರಿಗೆ ಹೊಡೆದು ಸಾಯಿಸಿರುವಂತೆ ಕಂಡು ಬರುತ್ತದೆ. ಈ ಬಗ್ಗೆ ಸಂಬಂದಿಕರಿಗೆ ತಿಳಿಸಿ ದಿನಾಂಕಃ 12-02-2013 ರಂದು ಬೆಳಿಗ್ಗೆ ತಡವಾಗಿ ಕಂಪ್ಲೆಂಟ್ನ್ನು ಕೊಟ್ಟಿದ್ದ ಮೇರೆ ಅರಕೆರೆ ಪೊಲೀಸ್ ಸಬ್-ಇನ್ಸ್ಪೆಕ್ಟರ್ ರವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

      ಗ್ರಾಮದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿಯಂತೆ ಮೃತ ಶಿವಶಂಕರನ ಹೆಂಡ್ತಿ ಈಗ್ಗೆ 5 ವರ್ಷದಲ್ಲಿ ಮೃತಪಟ್ಟಿರುತ್ತಾರೆಂದು ಇತ್ತೀಚೆಗೆ ಹೆಚ್ಚಾಗಿ ನೇರಲೆಕೆರೆ ಗ್ರಾಮದಲ್ಲೇ ಇರುತಿದ್ದನೆಂದು ತಿಳಿದು ಬಂದಿರುತ್ತದೆ. ಮೃತನ ಮನೆಯ ಎದುರುಗಡೆ ವಾಸಿ ನಾಗರಾಜು ಎಂಬುವರ ಮಗ ನಿಂಗರಾಜು @ ಕೆಂದ 36 ವರ್ಷ ಎಂಬುವನನ್ನು ವಿಚಾರಣೆ ಸಲುವಾಗಿ ಪ್ರಕರಣದ ತನಿಖಾಕಾರಿ ಸಿಪಿಐ ಶ್ರೀರಂಗಪಟ್ಟಣ ರವರು ಕರೆದುಕೊಂಡು ಬಂದು ತೀವ್ರವಾಗಿ ವಿಚಾರಣೆ ಒಳಪಡಿಸಲಾಗಿ ಮೃತ ಶಿವಶಂಕರನು ನಿಂಗರಾಜುವಿನ ಹೆಂಡ್ತಿಯೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿರುತ್ತಾನೆಂಬ ಅನುಮಾನದ ಕಾರಣದಿಂದ ಸಂಶಯ ಬಂದು ಈತನನ್ನು ಏನಾದರೂ ಮಾಡಿ ಮುಗಿಸಿದರೆ ತಾನು ತನ್ನ ಹೆಂಡ್ತಿಯೊಂದಿಗೆ ಚೆನ್ನಾಗಿ ಸಂಸಾರ ನಡೆಬಹುದೆಂದು ಯೋಚಿಸಿ ದಿಃ07/02/2013 ರಂದು ರಾತ್ರಿ 10-00 ಗಂಟೆಯಲ್ಲಿ ಮನೆಯಲ್ಲಿ ಟಿ.ವಿ ನೋಡುತ್ತಾ ಮನೆಯ ಬಾಗಿಲು ಹಾಕಿಕೊಳ್ಳದೆ ಹಾಗೇ ಮಲಗಿದ್ದ ಶಿವಶಂಕರನ ಮನೆಗೆ ನಿಂಗರಾಜ ಹೋಗಿ ಶಿವಶಂಕರನ ಮುಖದ ಮೇಲೆ ದೊಣ್ಣೆಯಿಂದ ಹೊಡೆದು ಆತನ ಕತ್ತನ್ನು ಕೈಗಳಿಂದ ಹಿಸುಕಿ ಕೊಲೆ ಮಾಡಿರುತ್ತಾನೆಂದು ವಿಚಾರಣಾ ತನಿಖಾ ಕಾಲದಲ್ಲಿ ತಿಳಿದು ಬಂದಿರುತ್ತದೆ. 

      ಸದರಿ ನಿಂಗರಾಜುವನ್ನು ದಿಃ26/03/2013 ರಂದು ದಸ್ತಗಿರಿ ಮಾಡಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ಅತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. 

ಈ ಪ್ರಕರಣವನ್ನು ಪತ್ತೆ ಹಚ್ಚಿದ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ ಕೆ.ಅರ್. ಪ್ರಸಾದ್ ರವರು ಮತ್ತು ಅವರ ಅದಿಕಾರಿ ಮತ್ತು ಸಿಬ್ಬಂದಿಯವರಾದ ಆರಕ್ಷಕ ಉಪ ನಿರೀಕ್ಷಕರಾದ ಎನ್.ಎಂ. ಪೂಣಚ್ಚ ಹಾಗೂ ಸಿಬ್ಬಂದಿರವರನ್ನು ಮಾನ್ಯ ಅರಕ್ಷಕ ಅಧೀಕ್ಷಕರಾದ ಶ್ರೀ ¨ಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ. 

DAILY CRIME REPORT DATED : 27-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-03-2013 ರಂದು ಒಟ್ಟು 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ  1 ವಂಚನೆ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಕೊಲೆ ಪ್ರಕರಣ, 2 ಮರಳು ಕಳವು ಹಾಗು ಸರ ಕಳವು ಪ್ರಕರಣಗಳು ಹಾಗು 43 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ವಂಚನೆ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 82/13 ಕಲಂ. 467-468-420 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಗೋಪಾಲಪ್ಪ, ಮಾಜಿಸ್ಟ್ರೇಟ್, ಜೆ.ಎಂ.ಎಪ್.ಸಿ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹೊನ್ನಮ್ಮರವರು ತಮ್ಮ 6 ನೇ ಮಗ ಚಂದ್ರ ಮತ್ತು 7 ನೇ ಮಗನಾದ ರವಿರವರುಗಳಿಗೆ ತನ್ನ ಮರಣಾ ನಂತರ ತನ್ನ ಆಸ್ತಿಯನ್ನು ಇಬ್ಬರೂ ಮಕ್ಕಳಿಗೂ ಸಮನಾಗಿ ಹಂಚಿಕೆಯಾಗುವಂತೆ ಮರಣಶಾಸನ ಪತ್ರ ಬರೆದು                 ದಿಃ17-06-1998  ರಂದು ಕೆ.ಆರ್.ಪೇಟೆ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ರಿಜಿಸ್ಟಾರ್ ಮಾಡಿಸಿದ್ದು ಹಾಜರುಪಡಿಸಿರುವ ಮರಣಾಶಾಸನದ ದಾಖಲಾತಿಗಳನ್ನು ನಕಲಿ ಎಂದು ಪರಿಗಣಿಸಿ ಆರೋಪಿ ಎ.ರವಿ ಬಿನ್. ಅಂದಾನಿಶೆಟ್ಟಿ, ಅರಳಗುಪ್ಪೆ ಗ್ರಾಮ, ಪಾಂಡವಪುರ ತಾ|| ರವರ ಮೇಲೆ ಪ್ರಕರಣ ದಾಖಲಿಸುವಂತೆ ಪತ್ರ ರವಾನೆ ಮಾಡಿದ್ದರ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 304 (ಬಿ) 302, ಕೂಡ 34 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಇಂದ್ರಮ್ಮ ಕೋಂ. ಪರಮೇಶ, ಮದ್ದೂರು ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಅಳಿಯ ಕುಬೇರ @ ಶಿವಕುಮಾರ ರವರು ಮಗಳಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆನೀಡಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ದಿ;27-03-2013 ರಂದು 10-00 ಗಂಟೆಯಲ್ಲಿ ಪಿರ್ಯಾದಿಯ ಮಗಳನ್ನು  ಹೊಡೆದು ನೇಣುಹಾಕಿ ಮೃತ ದೇಹವು ನೇತಾಡುತ್ತಿತ್ತು  ನನ್ನ ಅಳಿಯ ಕುಬೇರ @ ಶಿವಕುಮಾರ ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿರುತ್ತಾನೆ ಹಾಗು ಇತರೆ ಆರೋಪಿಗಳಾದ 2)ಸರೋಜಮ್ಮ 3)  ನಿಂಗಯ್ಯ  4) ಜ್ಯೋತಿ 5) ಶ್ರೀನಿವಾಸ್ ಚೀಣ್ಯ ಹಾಗು   6) ವೀಣಾ ಮತ್ತು ಅವಳ ಗಂಡ, ಮುತ್ತೇಗೆರೆ ಗ್ರಾಮ ರವರುಗಳು ಇದಕ್ಕೆ ಕಾರಣರಾಗಿರುತ್ತಾರೆ ಆದ್ದರಿಂದ ತಾವು ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ಮತ್ತು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 498(ಎ) 323-324-504-506 ಐ..ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ದೇವಮ್ಮ ಕೋಂ. ಪ್ರಕಾಶ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ಆರೋಪಿ ಪ್ರಕಾಶ, 50 ವರ್ಷ, ಗಾಣಿಗರು, ನಾಗಮಂಗಲ;  ಟೌನ್ ರವರು ಪಿರ್ಯಾದಿಯವರು ಅವರ ಮಗಳ ಮನೆಗೆ ಹೋಗುವ ವಿಚಾರದಲ್ಲಿ ಜಗಳ ತೆಗೆದು ಕೈಯಿಂದ ಎದೆ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಹಲ್ಲೆಮಾಡಿ ಊರಿನಲ್ಲಿ ಇರುವ ಮನೆಯನ್ನು ಮಾರಿ ಹಣ ತೆಗೆದುಕೊಂಡು ಬಾ ಎಂದು ಇಲ್ಲವಾದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾನೆ. 


ಮರಳು ಕಳವು ಹಾಗು ಸರ ಕಳವು ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 119/13 ಕಲಂ. 379-511 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಡಾ/ ಮಮತ, ತಹಶೀಲ್ದಾರ್, ಮಂಡ್ಯ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚಿದಾನಂದ, ನರಸಿಂಹಮೂರ್ತಿ,  ವೆಂಕಟೇಶಶೇಖರ್, ಪುಟ್ಟನಂಜ, ಜೆಸಿಬಿ ಡ್ರೈವರ್, ಎಲ್ಲರೂ ಹಟ್ಟಣ ಗ್ರಾಮದವರುಗಳು ಅಕ್ರಮವಾಗಿ ಮರಳು ತೆಗೆದು, ಟ್ರಾಕ್ಟರ್ ಗಳಿಗೆ ಮರಳು ತುಂಬಿಸುತ್ತಿದ್ದು, ಪಿರ್ಯಾದುದಾರರು ಮೇಲ್ಕಂಡ ಟ್ರಾಕ್ಟರ್ ಗಳನ್ನು ಹಾಗೂ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಹಾಗೂ ಇದಕ್ಕೆ ಸಹಕರಿಸಲು ಬಂದಿದ್ದ  ದ್ವಿಚಕ್ರ ವಾಹನಗಳ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ಟ್ರಾಕ್ಟರ್ ಗಳು ಮತ್ತು ಆರೋಪಿಗಳನ್ನು ಮುಂದಿನ ಕ್ರಮ ಜರುಗಿಸಲು ವಶಕ್ಕೆ ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 175/13 ಕಲಂ. 379 ಐ.ಪಿ.ಸಿ.

ದಿನಾಂಕ: 27-03-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಮರಿತಿಮ್ಮೇಗೌಡ, ಮಧ್ಯದ ಬೀದಿ, ಪಾಲಹಳ್ಳಿ ಗ್ರಾಮ ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು  ಕೆ.ಬೆಟ್ಟಹಳ್ಳಿ ದೇವಸ್ಥಾನಕ್ಕೆ ಹೋಗಿದ್ದು, ದೇವರನ್ನು ಹೊರಡಿಸುವ ಸಮಯದಲ್ಲಿ ತುಂಬಾ ನೂಕು ನುಗ್ಗಲಿದ್ದು, ನಾನು ದೇವಸ್ಥಾನದ ಮುಂಭಾಗ ನಿಂತಿದ್ದಾಗ ಯಾರೋ ಕಳ್ಳರು ನನಗೆ ಅರಿವಿಲ್ಲದಂತೆ ನನ್ನ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಚೈನನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಅಂದಾಜು ಬೆಲೆ ಸುಮಾರು 80,000/- ರೂ ಗಳಾಗಿರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 26-03-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-03-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಮನೆ ಕಳ್ಳತನ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಕ್ರಮ ಗ್ರಾಸ್ ರಿಫೀಲಿಂಗ್ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ, 123/13 ಕಲಂ. 379 ಐ.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ಎಸ್.ಕೆ. ತಮ್ಮೇಗೌಡ ಬಿನ್ ಲೇ|| ಕರಿಯಪ್ಪ ಸಾದೊಳಲು ತಾ||. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಪಿರ್ಯಾದಿಯವರ ಮೋಟಾರ್ ಸೈಕಲ್ ನಂ. ಕೆಎ11 ಯು-3307 ಹೀರೋ ಹೊಂಡಾ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ದಿನಾಂಕಃ25-03-2013ರ ಸಂಜೆ 04-30 - 06-00ರ ಅವಧಿಯಲ್ಲಿ ಮದ್ದೂರು ಟೌನ್  ಸಕರ್ಾರಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಸಂಜೆ 04-30 ಗಂಟೆಯಿಂದ 06-00 ಗಂಟೆಯವರೆಗೆ ಅವಧಿಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 78/13 ಕಲಂ. 304 (ಬಿ)-302 ಕೂಡ 34 ಐ.ಪಿ.ಸಿ

ದಿನಾಂಕ: 26-03-2013 ರಂದು ಪಿರ್ಯಾದಿ ಲಕ್ಷ್ಮಣ ಬಿನ್ ಗಿರಿಯಯ್ಯ, 25 ವರ್ಷ, ಪರಿಶಿಷ್ಟ ಜನಾಂಗ ರವರುಗಳು ಆರೋಪಿಗಳಾದ 1. ಶಂಕರ, 2. ಪುಟ್ಟಲಕ್ಷ್ಮಮ್ಮ, ವಾಸ-ಬೋರೆಗೌಡರ ವಠಾರ, ಆಲಬೂಜನಹಳ್ಳಿ ಗ್ರಾಮ ರವರುಗಳು ಮೃತಳಿಗೆ ನಿಮ್ಮ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರೆ ಕೊಲೆ ಮಾಡುತ್ತೆವೆ ಎಂದು ಹಿಂಸೆ ಕಿರುಕುಳ ನೀಡುತ್ತಿದ್ದು ಹೆಚ್ಚಿನ ವರದಕ್ಷಿಣೆ ಹಣವನ್ನು ತರಲಿಲ್ಲವೆಂಬ ಕಾರಣಕ್ಕೆ  ದಿನಾಂಕ ಃ 25-03-2013 ರಂದು ಸಂಜೆ 05-45 ಗಂಟೆಗೂ ಮುನ್ನ ಆರೋಪಿಗಳು ತಮ್ಮ ವಾಸದ ಮನೆಯಲ್ಲಿ ಮೃತೆಯನ್ನು ಕೊಲೆ ಮಾಡಿ ವೇಲ್ನಿಂದ ನೇಣು ಬಿಗಿದು ಪ್ಯಾನಿಗೆ ನೇತು ಹಾಕಿರುವುದಾಗಿದೆ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನೆ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 454, 380 ಐ.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಲೇಟ್. ಕೆಂಪೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು   ಚಿನ್ನದ ಆಭರಣಗಳ ಒಟ್ಟು ತೂಕ 121 ಗ್ರಾಂ ಆಗಿರುತ್ತದೆ. ಕಳ್ಳತನವಾಗಿರುವ ಚಿನ್ನದ ಆಭರಣಗಳು ಮತ್ತು ನಗದು ಹಣ ಸೇರಿ ಒಟ್ಟು ಬೆಲೆ 3,90,000-00 ರೂ.ಗಳಾಗಿರುತ್ತದೆ. ಕಳ್ಳತನವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 26-03-2013 ರಂದು ಪಿರ್ಯಾದಿ ರಾಮೇಗೌಡ ಬಿನ್. ನಿಂಗೇಗೌಡ, ಅಂಚೆಮುದ್ದನಹಳ್ಳಿ ಗ್ರಾಮರವರು ನೀಡಿದ ದೂರು ಏನೆಂದರೆ ಸತ್ತೇಗೌಡಹಲಸಿನ ಮರದಲ್ಲಿ ಸೊಪ್ಪನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಕೆಳಕ್ಕೆ ಬಿದ್ದು ಎದೆ ಕೈಕಾಲುಗಳಿಗೆ ಜೋರಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 26-03-2013 ರಂದು ಪಿರ್ಯಾದಿ ಮಹಮ್ಮದ್ ಸುಹೇಲ್ ಬಿನ್. ಮೊಕ್ಬುಲ್ ಅಹಮದ್, ಸಾದತ್ ನಗರ, 2 ನೇ ಕ್ರಾಸ್, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಫಾತಿಮ ಅಯಿಷಾ, 25 ವರ್ಷ, ಹಾಗು ಮಗು ಮಹಮದ್ ಯೇನ್, 2 ವರ್ಷ ರವರುಗಳು ದಿನಾಂಕ: 06-03-2013  ರ ಸಂಜೆ 05-45 ಗಂಟೆಯಲ್ಲಿ   ನನಗೆ ತಿಳಿಸದೆಯೆ ಮನೆಗೆ ಬೀಗ ಹಾಕಿಕೊಂಡು ಎಲ್ಲೋ ಹೊರಟುಹೋಗಿರುತ್ತಾಳೆ. ಕಾಣೆಯಾಗಿರುವ ನನ್ನ ಹೆಂಡತಿಯನ್ನು ನಾನು ಎಲ್ಲ ಕಡೆಗಳಲ್ಲಿ ಹಾಗು ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹೋಗಿ ಹುಡುಕಾಡಲಾಗಿ ಆಕೆ ಪತ್ತೆಯಾಗಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 26-03-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ, ಮರಿದೇವಯ್ಯ, ರಾಮನಾಥ ಮೋಳೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 24-03-2013 ರಂದು ಬೆಳಿಗ್ಗೆ  06-00 ಗಂಟೆಯಲ್ಲಿ, ಮಂಡ್ಯ ಜಿಲ್ಲಾ ಆಸ್ಪತ್ರೆಯಿಂದ ಮರಿದೇವಯ್ಯ ಬಿನ್. ಲೇ|| ಮರಿಗೋಳಯ್ಯ, 50 ವರ್ಷ, ರವರು ತಮ್ಮ ಗಂಡನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು      ದಿನಾಂಕ: 23-03-2013 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಸೇರಿಸಿದ್ದರು ಕಾಪಿ ತರಲೆಂದು ಕ್ಯಾಂಟೀನ್ ಗೆ ಹೋಗಿದ್ದು ವಾಪಸ್ಸು ಬಂದು ನೋಡಲಾಗಿ ಅಲ್ಲಿ  ನನ್ನ ಪತಿಯವರು ಇರಲಿಲ್ಲಾ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಗ್ರಾಸ್ ರಿಫೀಲಿಂಗ್ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 385 ಐ.ಪಿ.ಸಿ.

      ದಿನಾಂಕ: 26-03-2013ರಂದು ಪಿರ್ಯಾದಿ ನಿರಂಜನ, ಪಿ.ಎಸ್.ಐ. ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 26-03-2013 ರಂದು ಮಂಡ್ಯ ಸಿಟಿ. ಲಕ್ಷ್ಮೀಜನಾರ್ಧನ ದೇವಸ್ಥಾನದ ಪಕ್ಕದಲ್ಲಿ ಆರೋಪಿಗಳಾದ 1)ದೇವರಾಜು 2) ಜಯಂತ್ ರವರುಗಳು ಯಾವುದೇ ಪರವಾನಿಗೆ ಇಲ್ಲದೆ ಖಾಲಿ 25 ಸಿಲಿಂಡರ್ ಗೆ ಅಕ್ರಮವಾಗಿ ಗ್ಯಾಸ್ ತುಂಬಿಸುತ್ತಿದ್ದರ ಮೇರೆಗೆ  ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

Press Note Date:26-03-2013


                                                ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                   ಮಂಡ್ಯ ಜಿಲ್ಲೆ, ದಿನಾಂಕಃ 26-03-2013.

ಪತ್ರಿಕಾ ಪ್ರಕಟಣೆ 


       ದಿನಾಂಕಃ 11.03.13. ರಂದು ಪಿರ್ಯಾದಿ ಪೆಮ್ಮಯ್ಯ, ಅರಣ್ಯ ವಲಯಾದಿಕಾರಿಗಳು, ಕೊಟಗಹಳ್ಳಿ ಶಾಖೆ, ಇವರು ಪಿರ್ಯಾದು ನೀಡಿದ್ದು ಅದರಲ್ಲಿ ಮೇಲುಕೋಟೆ ವನ್ಯಜೀವಿ ವಲಯದ ಗಸ್ತು ಸಂಖ್ಯೆ 5 ರ ನಾರಾಯಣ ದುರ್ಗ ಅರಣ್ಯ ಪ್ರದೇಶದಲ್ಲಿ ಎಂದಿನಂತೆ ಗಸ್ತಿನಂತೆ ಬೆಳಿಗ್ಗೆ 9-00 ಗಂಟೆಗೆ ಕೊಟಗಹಳ್ಳಿ ಕಡೆಯಿಂದ ಬಸವನಗುಡಿ ಮಾರ್ಗವಾಗಿ ಪಾದರತಿ ಕಡೆಗೆ ಗುಸ್ತು ಮಾಡಿಕೊಂಡುಬರುತ್ತಿರುವಾಗ ಕೆ.ಅರ್.ಪೇಟೆ-ಮೇಲುಕೋಟೆ ಮುಖ್ಯ ರಸ್ತೆಯಿಂದ ಸುಮಾರು 50 ಮೀಟರ್ ದೊರದಲ್ಲಿ ಒಂದು ಕಾರು ನಿಂತಿರುವುದುಕಂಡುಬಂದು ಕೂಡಲೇ ಸಿಬ್ಬಂದಿಗಳು ಮತ್ತು ಪಿರ್ಯಾದಿಯು ಹತ್ತಿರ ಹೋಗಿ ನೋಡಲಾಗಿ ಕಾರು ಸುಟ್ಟು ಹೋಗಿದ್ದು ಕಾರನ್ನು ಪರಿಶೀಲಿಸಲಾಗಿ ಒಳಗಡೆ ಹಿಂಬಾಗದ ಸೀಟಿನಲ್ಲಿ ಸುಟ್ಟು ಕರಕಲಾಗಿರುವ ಒಂದು ದೇಹವಿದ್ದು ಯಾವುದೋ ಕಾರಣಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆಯಿದ್ದು ಸಾಕ್ಷಾದಾರಗಳನ್ನು ನಾಶಪಡಿಸುವ ದೃಷ್ಠಿಯಿಂದ ಸುಟ್ಟು ಹಾಕಿರುತ್ತಾರೆಂದು ಇತ್ಯಾದಿ ನೀಡಿದ ದೊರಿನ ಮೇರೆಗೆ ಕೆ.ಅರ್.ಅರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಮೊಃಸಂಃ 73/2013 ಕಲಂಃ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತೆ. ಈ ಬಗ್ಗೆ ತನಿಖೆ ಕೈಗೊಂಡಿರುತ್ತದೆ. 

       ದಿನಾಂಕಃ 24.03.13. ರಂದು ಕೆ.ಅರ್.ಪೇಟೆ ನಗರ ಠಾಣೆಯ ಅಪರಾದ ಪತ್ತೆ ದಳದ ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ ಸುಮಾರು 5-00 ಗಂಟೆ ಸಮಯದಲ್ಲಿ ಕೆ.ಅರ್.ಪೇಟೆ ಟೌನ್ ಠಾಣೆಯ ಎಂಓ ಅಸಾಮಿಯಾದ ಮಧುಕುಮಾರ ಬಿನ್ ಪುಟ್ಟಸ್ವಾಮಿ, ಬಿಲ್ಲರಾಮನಹಳ್ಳಿ ಗ್ರಾಮ ಈತನು ದುರ್ಗಾಭವನ್ ಸರ್ಕಲ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವನನ್ನು ಹಿಡಿದುಕೊಂಡು ಚೆಕ್ ಮಾಡಲಾಗಿ ಈತನ ಬಳಿ ಒಂದು ಕಬ್ಬಿಣದ ರಾಡು ಇದ್ದು ಈತನನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರ್ಪಡಿಸಿದ್ದು ಈತನನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಈತನು ಕಳ್ಳತನ ಮಾಡುವ ಉದ್ದೇಶದಿಂದ ರಾಡು ಇಟ್ಟುಕೊಂಡು ಓಡಾಡುತ್ತಿದ್ದುದಾಗಿ ಹಾಗೂ ಈ ಪ್ರಕರಣದ ಬಗ್ಗೆ ಸಹ ತಪ್ಪೋಪ್ಪಿಕೊಂಡಿರುತ್ತಾನೆ. 

      ಈತನು ಇದೇ ಕೆ.ಅರ್.ಪೇಟೆ ಟೌನ್ ಠಾಣೆಯ ಪ್ರ.ಸಂ 245/12 ಕಲಂಃ 379 ಐಪಿಸಿ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರೋಪಿಯಾಗಿ ಮಂಡ್ಯ ಜೈಲಿನಲ್ಲಿದ್ದಾಗ ಈತನಿಗೆ ಮೈಸೂರು ನಗರ ವಾಸಿ ಎಂಓ ಅಸಾಮಿಯಾದ ಕೆಂಡ @ ನಾಗರಾಜ @ ನಾಗ ಈತನು ಮಂಡ್ಯ ಜೈಲಿನಲ್ಲಿ ಪರಿಚಯವಾಗಿ ನಂತರ ಇಬ್ಬರೂ ಜಾಮೀನಿನ ಮೇಲೆ ಹೊರಬಂದು ದಿನಾಂಕಃ 09.03.13. ರಂದು ಬೆಂಗಳೂರು ಸಿಟಿ, ಸೋಲದೇವನಹಳ್ಳಿ ಪೊಲೀಸ್ ಠಾಣಾ ಮೊಃಸಂಃ 30/2013 ಕಲಂಃ 454, 457, 380 ಐಪಿಸಿ ಪ್ರಕರಣದಲ್ಲಿ ಸೋಲದೇವನಹಳ್ಳಿ ವ್ಯಾಪ್ತಿಗೆ ಸೇರಿದ ಚಿಕ್ಕಸಂದ್ರ ಬಡಾವಣೆಯ ವಾಸಿ ಶ್ರೀ ಕೆ.ಎಸ್. ರವಿಶಂಕರ್ ಎಂಬುವರ ಮನೆಯ ಬಾಗಿಲ ಬೀಗವನ್ನು ಮುರಿದು ಅವರ ಮನೆಯಲ್ಲಿದ್ದ ಚಿನ್ನಾಬರಣಗಳನ್ನು ಕಳವು ಮಾಡಿ ಹಾಗೂ ಅವರ ಮನೆಯ ಮುಂದೆ ನಿಲ್ಲಿಸಿದ್ದ ಒಂದು ಕೆಎ-02 ಎಂಬಿ-6492 ರ ಅಲ್ಟೋ ಕಾರನ್ನು ಕಳ್ಳತನ ಮಾಡಿಕೊಂಡು ಕೆ.ಅರ್.ಪೇಟೆಗೆ ಬಂದಿದ್ದು ನಂತರ ಕಳವು ಮಾಡಿರುವ ಚಿನ್ನಾಭರಣಗಳನ್ನು ತಾನೇ ಸಂಪೂರ್ಣವಾಗಿ ಅಭರಣ ಹೊಡೆದುಕೊಳ್ಳಬೇಕು ಎಂಬ ದುರುದ್ದೇಶದಿಂದ ಮತ್ತೊಬ್ಬ ಎಂಓ ಅಸಾಮಿಯಾದ ಕೆಂಡ @ ನಾಗರಾಜ @ ನಾಗ ಈತನಿಗೆ ಅತಿಯಾದ ಮದ್ಯಪಾನ ಮಾಡಿಸಿ ಮೇಲುಕೋಟೆ ರಸ್ತೆಯಲ್ಲಿರುವ ನಾರಾಯಣ ದುರ್ಗ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನಿಗೆ ತನ್ನ ಬಳಿ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಬಾಗಕ್ಕೆ ಬಲವಾಗಿ ಹೊಡೆದು ಅದೇ ಕಾರಿನ ಹಿಂಬಾಗದ ಸೀಟಿನಲ್ಲಿ ಕೂರಿಸಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿಸಿರುತ್ತಾರೆ. ನಂತರ ಕಳವು ಮಾಡಿದ ಚಿನ್ನಾಭರಣಗಳನ್ನು ತನ್ನ ಹೆಂಡತಿ ವರಲಕ್ಷ್ಮಿಗೆ ಹಾಗೂ ತನ್ನ ದೊಡ್ಡ ಅತ್ತೆ ಶಿವಲಿಂಗಮ್ಮ ಎಂಬುವರಿಗೆ ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. 

     ಈ ಪ್ರಕರಣದ ಚಿನ್ನಾಭರಣಗಳನ್ನು ಆರೋಪಿಯ ಹೆಂಡತಿ ವರಲಕ್ಷ್ಮಿ ಇವರಿಂದ ಒಂದು ಮುತ್ತಿನ ಸರ 25 ಗ್ರಾಂ, 600 ಮಿಲಿ, ಒಂದು ಜೊತೆ ಮುತ್ತಿನ ಓಲೆ 4 ಗ್ರಾಂ 800 ಮಿಲಿ, 2 ಎಳೆ ಚಿನ್ನದ ಮಾಂಗಲ್ಯ ಸರ 45 ಗ್ರಾಂ 500 ಮಿಲಿ ಹಾಗೂ ಆರೋಪಿಯ ದೊಡ್ಡ ಅತ್ತೆ ಶಿವಲಿಂಗಮ್ಮ ಈಕೆ ಕೆ.ಅರ್.ಪೇಟೆ ಮುತ್ತೂಟ್ ಪಿನ್ ಕಾರ್ಫ್ ನಲ್ಲಿ ಗಿರವಿ ಇಟ್ಟಿದ್ದ ಒಂದು ಜೊತೆ ಬಳೆ 48 ಗ್ರಾಂ 600 ಮಿಲಿ, ಒಂದು ಜೊತೆ ಸಾದಾ ಬಳೆ 18 ಗ್ರಾಂ 650 ಮಿಲಿ ಹಾಗೂ ಮನೆಯಲ್ಲಿಟ್ಟಿದ್ದ ಒಂದು ಜೊತೆ ಬಳೆ 23 ಗ್ರಾಂ 500 ಮಿಲಿ, ಒಂದು ನೆಕ್ಲೇಸ್ 14 ಗ್ರಾಂ 500 ಮಿಲಿ, ಒಂದು ಜೊತೆ ಸಾದಾ ಓಲೆ 10 ಗ್ರಾಂ 400 ಮಿಲಿ, ಒಂದು ಲೇಡಿಸ್ ಉಂಗುರ 2 ಗ್ರಾಂ 600 ಮಿಲಿ, ಒಂದು ಹವಳದ ಉಂಗುರ 6 ಗ್ರಾಂ 500 ಮಿಲಿ ಒಟ್ಟು 171 ಗ್ರಾಂ 100 ಮಿಲಿ ಇರುವ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ. ಅತ್ಯಂತ ಕ್ಲಿಷ್ಠವಾಗಿದ್ದ ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ಪ್ರಕರಣವನ್ನು ಬೇದಿಸಿರುತ್ತಾರೆ. 

   ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಭೂಷಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎ.ಎನ್. ರಾಜಣ್ಣ ಹಾಗೂ ಶ್ರೀರಂಗಪಟ್ಟಣ ಉಪ ವಿಬಾಗದ ಉಪ ಪೊಲೀಸ್ ಅಧೀಕ್ಷಕರಾದ ಕಲಾ ಕೃಷ್ಣಸ್ವಾಮಿ ಇವರುಗಳ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎಸ್.ಎನ್. ಸಂದೇಶಕುಮಾರ್ ರವರು ಮತ್ತು ಅವರ ಅದಿಕಾರಿ ಮತ್ತು ಸಿಬ್ಬಂದಿಯವರಾದ ಆರಕ್ಷಕ ಉಪ ನಿರೀಕ್ಷಕರಾದ ರಂಗಸ್ವಾಮಿ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ನಾಗರಾಜು, ಮಹಿಳಾ ಸಿಬ್ಬಂದಿಯಾದ ಸುಜಾತಾ ಇವರುಗಳ ಕಾರ್ಯವನ್ನು ಮಾನ್ಯ ಅರಕ್ಷಕ ಅಧೀಕ್ಷಕರಾದ ಶ್ರೀ ಭೂಷಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ರವರು ಪ್ರಶಂಶಿಸಿ 10000 ರೂಗಳ ಬಹುಮಾನವನ್ನು ಘೋಷಿರುತ್ತಾರೆ

DAILY CRIME REPORT DATED : 25-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-03-2013 ರಂದು ಒಟ್ಟು 54 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಕ್ರಮ ಮರಳು ಕಳ್ಳತನ ಹಾಗು ಸಾಗಾಣಿಕೆ ಪ್ರಕರಣ ಹಾಗು 51 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 143-147-148-341-324-307-384 ಕೂಡ 149 ಐ.ಪಿ.ಸಿ.

ದಿನಾಂಕ 25-03-2013 ರಂದು ಪಿರ್ಯಾದಿ ಮಲ್ಲೇಶ ಬಿನ್. ಪುಟ್ಟೇಗೌಡ, ಮಾರ್ಗೋನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜೇಗೌಡ ಎಂಬುವವರು ತಮ್ಮ ಬಾಬ್ತು ಕೆಎ-54-ಇ-3764 ರ ಬೈಕಿನಲ್ಲಿ ಬರುವಾಗ ಆರೋಪಿತರುಗಳಾದ 1] ಶಿವಣ್ಣ 2] ರವಿ  3] ಗಿರೀಶ 4] ನಾಗೇಶ, 5] ಕರಿಕಾಳೇಗೌಡ 6]ಸಣ್ಣೇಗೌಡ  ಎಲ್ಲರೂ ಮಾರ್ಗೋನಹಳ್ಳಿ   ಗ್ರಾಮ ರವರುಗಳು ತೆಂಗಿನ ಮರಕ್ಕೆ ತಂತಿಯನ್ನು ಕಟ್ಟಿ ಕೆಳಕ್ಕೆ ಕೆಡವಿ ಗಾಯಾಳುವಿಗೆ ತಲೆಗೆ ಮಂಡಿಗೆ ಮೈಕೈಮೇಲೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸುತ್ತಿರುವಾಗ ಪಿರ್ಯಾದಿ ಮಲ್ಲೇಶ ಹಾಗೂ ಇತರೆ ಇಬ್ಬರೂ ಬಂದು ಜಗಳ ಬಿಡಿಸಿದ್ದು ಆರೋಪಿರತರುತಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲು ಮಾಡಿದೆ. 



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 498[ಎ]-323-506 ಕೂಡ 149 ಐಪಿಸಿ ಕೂಡ 3 & 4 ಡಿ.ಪಿ. ಅಕ್ಟ್.

ದಿನಾಂಕ 25-03-2013 ರಂದು ಪಿರ್ಯಾದಿ ನಾಸೀರಾಬಾನು, ನಾಲಬಂದವಾಡಿ, ರೈಲ್ವೆ ಸ್ಟೇಷನ್ ರಸ್ತೆ, 3ನೇ ಕ್ರಾಸ್, ಮಳವಳ್ಳಿಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಆಸೀಫ್ ಹಾಗು ಶಾಹೀನಾ, ಕಲೀಂ ಪಾಷ, ರಿಜ್ವಾನ್, ಅಬ್ದುಲ್ ಅಜೀಜ್, ಎಲ್ಲರೂ ಪೇಟೆ ಮುಸ್ಲಿಂ ಬ್ಲಾಕ್, ಮಳವಳ್ಳಿ ಟೌನ್ ರವರುಗಳು ಪಿರ್ಯಾದಿಯವರಿಗೆ ನಿಮ್ಮ ತಾಯಿ ಮನೆಯಿಂದ ಹೆಚ್ಚಿನ ವರದಕ್ಷಿಣಿ ಹಣ ತರುವಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟು, ದೊಣ್ಣೆಯಿಂದ ಹೊಡೆದು, ಸೀಮೆ ಎಣ್ಣೆಹಾಕಿ ಸುಡಲು ಬಂದಿದ್ದರು, ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.



ಅಕ್ರಮ ಮರಳು ಕಳ್ಳತನ ಹಾಗು ಸಾಗಾಣಿಕೆ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 379 ಐಪಿಸಿ ಕೂಡ 3 & 4 ಎಂ.ಎಂ.ಅರ್.ಡಿ. ಆಕ್ಟ್.

ದಿನಾಂಕ 25-03-2013 ರಂದು ಪಿರ್ಯಾದಿ ಮಮತ ತಹಸಿಲ್ದಾರ್ ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ರಮೇಶ ಬಿನ್ ಹೊನ್ನಗಿರಿಗೌಡ  ಹನಗನಹಳ್ಳಿ, 2) ನಂಜುಡ ಬಿನ್ ಕೃಷ್ಣಶೆಟ್ಟಿ, ಬಸರಾಳು, 3)ಬಾಬು ಬಿನ್. ಚನ್ನೇಗೌಡ, ಬಸರಾಳು, ಮಂಡ್ಯ ತಾ. ರವರು ದಿನಾಂಕಃ 25/26-03-13 ರಂದು ಬೆಳಿಗ್ಗೆ 01:00 ಗಂಟೆಯಲ್ಲಿ ಸಮಯದಲ್ಲಿ ಪಿರ್ಯಾದಿ ಹಾಗು ಅವರ ಸಿಬ್ಬಂದಿಗಳು ಗಸ್ತಿನಲ್ಲಿ ಇರುವಾಗ ನರಗಲು ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಜೆಸಿಬಿಯಿಂದ ಕದ್ದು ಮರಳನ್ನು ಟ್ರಾಕ್ಟರ್ಗೆ ತುಂಬುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿ ಹಾಗು ಸಿಬ್ಬಂದಿಯವರು ನರಗಲು ಸರ್ಕಾರಿ ಹಳ್ಳಕ್ಕೆ ಹೋಗಿ ನೋಡಲಾಗಿ ಕೆಎ-18-ಟಿ-3352 /3353 ರ ಟ್ರಾಕ್ಟರ್ ನ ಹತ್ತಿರ ಜೆಸಿಬಿ ನಂಬರ್ ಕೆಎ-02-ಎಂಎಸ್-8982 ವಾಹನಗಳನ್ನು ನಿಲ್ಲಿಸಿಕೊಂಡು ಅಕ್ರಮವಾಗಿ ಕದ್ದು ಮರಳನ್ನು ತುಂಬುತ್ತಿದ್ದು ನಮ್ಮನ್ನು ನೋಡಿ ಅಸಾಮಿಗಳು ಓಡಲು ಪ್ರಯತ್ನಿಸಿದ್ದು ತಕ್ಷಣ ನಾನು ಹಾಗು ಸಿಬ್ಬಂದಿಯವರು ಸದರಿಯವರನ್ನು ಹಿಡಿದು ಮುಂದಿನ ಕ್ರಮ್ಕಕಾಗಿ ಬಸರಾಳು ಪೊಲೀಸ್ ಠಾಣೆಗೆ ವರದಿ ನೀಡಿದ್ದು. ಪ್ರಕರಣ ದಾಖಲಿಸಿರುತ್ತೆ.

DAILY CRIME REPORT DATED : 24-03-2013




ದಿನಾಂಕ: 24-03-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ,  1 ವಂಚನೆ/ನಂಬಿಕೆ ದ್ರೋಹ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 504-498(ಎ)-324-506 ಐ.ಪಿ.ಸಿ.

ದಿನಾಂಕ: 24-03-2013 ರಂದು ಪಿರ್ಯಾದಿ ಸುಮಲತಾ, ಕೃಷ್ಣಾಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಕೆ.ಎನ್.ರವಿ ಬಿನ್ ನಂಜಪ್ಪ, ಕೃಷ್ಣಾಪುರ ಗ್ರಾಮ ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದ್ದು, ದಿನಾಂಕ: 23-03-2013 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಪಿರ್ಯಾದಿಯವರಿಗೆ ಆರೋಪಿತನು ನನ್ನ ಜೇಬಿನಲ್ಲಿ ಏಕೆ ಹಣವನ್ನು ತೆಗೆದುಕೊಂಡಿದ್ದಿಯಾ ಎಂದು ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಕಲ್ಲಿನಿಂದ ತಲೆಗೆ ರಕ್ತಗಾಯವಾಗುವಂತೆ ಹೊಡೆದು ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾನೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 24-03-2013 ರಂದು ಪಿರ್ಯಾದಿ ಸಿ. ನರಸೇಗೌಡ, ಕೆ.ಇ.ಬಿ ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 22 -03-2013 ರಂದು ಅವರ ಮಗಳು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆ ಆಗಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ ನವ್ಯಶ್ರೀಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ನಂಬಿಕೆ ದ್ರೋಹ  ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 406 ಐ.ಪಿ.ಸಿ.

ದಿನಾಂಕ: 24-03-2013 ರಂದು ಪಿರ್ಯಾದಿ ವಿ.ಕಿರಣ್ ಕುಮಾರ್, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 15-03-2013 ರಂದು ಆರೋಪಿ ವಿಶ್ವ, ಪಾಂಡವಪುರ  ಟೌನ್` ನಿವಾಸಿ ಇವರು ಪಿರ್ಯಾದಿಯವರ ಹಿರೋಹೋಂಡ ಸ್ಪ್ಲಂಡರ್ ಬೈಕ್. ನಂ. ಕೆ.ಎ-11-ಕೆ-5146 ಬೈಕನ್ನು ತೆಗೆದುಕೊಂಡು ಹೊಗಿದ್ದು ತಂದುಕೊಡದೆ ನಂಬಿಕೆ ದ್ರೋಹಮಾಡಿದ್ದು ಕೊಲೆ ಬೆದರಿಕೆ ಹಾಕಿದ್ದರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 23-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,     1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 119/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 23-03-2013 ರಂದು ಪಿರ್ಯಾದಿ ಕರಿಯಪ್ಪ @ ಬಿಕ್ಲಯ್ಯ ಬಿನ್. ಲೇಟ್. ಕರಿಯಪ್ಪ, ಆಲೆಮರದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಕರಿಯಪ್ಪ, ಬಿನ್. ಕರಿಯಪ್ಪ @  ಬಿಕ್ಲಯ್ಯ, 23ವರ್ಷ ರವರು ದಿನಾಂಕ: 20-03-2013  ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಮಾಲಗಾರನೆಹಳ್ಳಿಯಿಂದ ನೀರು ಕುಡಿದು ಬರುವುದಾಗಿ ಮಾಲಗಾರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ವಾಪಸ್ ಬಾರದೇ ಗ್ರಾಮಕ್ಕೂ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾನೆ ಈತನು ಬುದ್ದಿಮಾಂದ್ಯನಾಗಿರುತ್ತಾನೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

     ದಿನಾಂಕ: 23-03-2013 ರಂದು ಪಿರ್ಯಾದಿ ಆಯಿಷಾ ಕೋಂ. ಮಮತಾಜ್ ಖಾನ್, ಎಂ.ಎನ್.ಪಿ.ಎಂ ಸರ್ಕಲ್, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಮತಾಜ್ಖಾನ್ ಬಿನ್. ತಾಯರ್ ಖಾನ್, 27 ವರ್ಷ ರವರು ದಿನಾಂಕ:  07-01-2009 ರಂದು ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

 ದಿನಾಂಕ: 23-03-2013 ರಂದು ಪಿರ್ಯಾದಿ ವೈ.ಎಸ್.ರಾಘವೇಂದ್ರ ಬಿನ್. ಲೇಟ್. ಸ್ವಾಮಿ, ಎಲೆಚಾಕನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಅಜ್ಜಿ ನಿಂಗಮ್ಮ ರವರು ಬೆಂಗಳೂರು-ಮೈಸೂರು ರಸ್ತೆಯನ್ನು ದಾಟುತ್ತಿದ್ದಾಗ ಯಾವುದೋ ವಾಹನ ವನ್ನು ಅದರ ಚಾಲಕ ಮೈಸೂರು ಕಡೆಯಿಂದ ಬೆಂಗಳೂರು ಕಡೆಗಾದಂತೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೇಲ್ಕಂಡ ನಿಂಗಮ್ಮ ರವರಿಗೆ ಡಿಕ್ಕಿ ಮಾಡಿಸಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು, ನಿಂಗಮ್ಮಳಿಗೆ ತಲೆ, ಮೈ ಕೈಗೆ ಪೆಟ್ಟಾಗಿದ್ದು ರಕ್ತ ಬರುತ್ತಿದ್ದು, 108 ಆಂಬುಲೆನ್ಸ್ನಲ್ಲಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 09-10 ಗಂಟೆಯ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 279.337.304(ಎ) ಐಪಿಸಿ ಕೂಡ 184 ಐ.ಎಂ.ವಿ. ಕಾಯ್ದೆ.

ದಿನಾಂಕ: 23-03-2013 ರಂದು ಪಿರ್ಯಾದಿ ಪ್ರಕಾಶ ಬಿನ್. ರಂಗಪ್ಪ, ರಾಮನಕೊಪ್ಪಲು ಗ್ರಾಮ, ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆಎ/ 13/ಇಎ/3936 ರ ಹೀರೋ ಸ್ಪ್ಲೆಂಡರ್ ಪ್ಲಸ್ ಸವಾರ ಬೈಕನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ಓಡಿಸಿಕೊಂಡು ಬಂದು ರಾಮೇಗೌಡರವರು ಹೋಗುತ್ತಿದ್ದ ಕೆಎ-13-ಯು-7195 ಫ್ಯಾಶನ್ ಪ್ಲಸ್ ಬೈಕಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಎರಡೂ ಬೈಕಿನಲ್ಲಿದ್ದವರಿಗೆ ಪೆಟ್ಟಾಗಿ, ಅಲ್ಲೇ ರಾಮೇಗೌಡರ ಹಿಂಭಾಗ ಆಟೋವನ್ನು ಓಡಿಸಿಕೊಂಡು ಹೋಗುತ್ತಿದ್ದು ನಾನು ಕೃತ್ಯವನ್ನು ನೋಡಿ 108 ವಾಹನದಲ್ಲಿ ಶ್ರವಣಬೆಳಗೊಳ ಆಸ್ಪತ್ರೆಗೆ ಸೇರಿಸಿದ್ದು, ಶ್ರವಣಬೆಳಗೊಳ ಆಸ್ಪತ್ರೆಯ ವೈಧ್ಯಾಧಿಕಾರಿಗಳು ರಾಮೇಗೌಡರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಆರೋಪಿ ಮೋಟಾರ್ ಸೈಕಲ್ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-03-2013 ರಂದು ಪಿರ್ಯಾದಿ ಎಂ.ಕೆ.ಪುಟ್ಟಸ್ವಾಮಿ ಬಿನ್. ಕರಿಯಪ್ಪ, 43ವರ್ಷ ರವರು ನೀಡಿದ ದೂರು ಏನೆಂದರೆ ನಿಂಗರಾಜು ಬಿನ್. ರಾಮಲಿಂಗಯ್ಯ, 26ವರ್ಷ ರವರಿಗೆ ಔಷದಿ ಮಾತ್ರೆಗಳನ್ನು ತೆಗೆದುಕೊಂಡರು ಸಹ ಹೊಟ್ಟನೋವು ಗುಣಮುಖವಾಗದೇ ಇದ್ದುದರಿಂದ ರೇಷ್ಮೆ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಕುಡಿದಿದ್ದು ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದೆವು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ-23-03-2013 ರಂದು ಬೆಳಗಿನ ಜಾವ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ ನಂ 17/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-03-2013 ರಂದು ಪಿರ್ಯಾದಿ ಶಂಕರ ಬಿನ್. ಮಣಿ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಕಾವೇರಮ್ಮ ಚೌಲ್ಟರಿ ಬಳಿ ಸುಮಾರು 70 ವರ್ಷ, ಹೆಸರು ವಿಳಾಸ ಗೊತ್ತಿಲ್ಲದ, ಅಪರಿಚಿತ ಗಂಡಸು ಸತ್ತು ಹೋಗಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 504-498(ಎ)-506 ಕೂಡ 34 ಐ.ಪಿ.ಸಿ.

ದಿನಾಂಕ:23-03-2013 ರಂದು ಪಿರ್ಯಾದಿ ವನಜಾಕ್ಷಮ್ಮ ಕೋಂ. ಮಂಜೇಗೌಡ, ಗೌಡೇನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಮಂಜೇಗೌಡ 2) ಗಿಡ್ಡಮ್ಮ 3) ವಸಂತಿ 4) ಸುರೇಶ ಎಲ್ಲರೂ ಗೌಡೇನಹಳ್ಳಿ ಗ್ರಾಮದವರು ಪಿಯರ್ಾದಿಯವರನ್ನು ಬಾಯಿಗೆ ಬಂದಂತೆ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು ಕೊಲೆ ಬೆದರಿಕೆಯನ್ನು ಹಾಕಿ ಅವಮಾನಗೊಳಿಸಿ ನೀನು ನಮ್ಮ ಮನೆಗೆ ಬರಬೇಡ, ಇನ್ನೊಂದು ಸಲ ಬಂದರೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 22-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:21-03-2013 ರಂದು ಪಿರ್ಯಾದಿ ನಾಗರತ್ನ ಕೋಂ. ಗೋವಿಂದ, 22 ವರ್ಷ, ಕುಂಬಾರಶೆಟ್ಟರು, ತರೀಪುರಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಗೋವಿಂದರವರ ಮನೆಯಲ್ಲಿ ದವಸ ಧಾನ್ಯ ಗಳನ್ನು ಕೆಡದಂತೆ ಇಡಲು ತಂದಿಟ್ಟಿದ್ದ ಮಾತ್ರೆಗಳನ್ನು ನುಂಗಿದ್ದರಿಂದ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆ ಬಗ್ಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗೋವಿಂದ ದಿನಾಂಕಃ 21-03-2013ರಂದು ರಾತ್ರಿ 08-15 ಗಂಟೆಗೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 04/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಪ್ರಸನ್ನ ಬಿನ್. ತಿಮ್ಮಯ್ಯ, 26 ವರ್ಷ, ಮಡಿವಾಳಸೆಟ್ಟಿ ಜನಾಂಗ, ನಿಲುವಾಗಿಲು ಗ್ರಾಮ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಘವೇಂದ್ರ ಬಿನ್ ವೆಂಕಟೇಶ, 16 ವರ್ಷ ರವರು 21-03-2013ರಂದು ನಿಲುವಾಗಿಲು ಗ್ರಾಮದಲ್ಲಿ ತೆಂಗಿನ ಮರದಲ್ಲಿ ಎಳನೀರು ಕೀಳಲು ಹೋಗಿದ್ದಾಗ ಒಂದು ತೆಂಗಿನ ಗರಿ ವಿದ್ಯುತ್ ಲೈನ್ ಗೆ, ತಗಲಿದ್ದನ್ನು ಕಟ್ ಮಾಡಿ ಸರಿಸುತ್ತಿದ್ದಾಗ ಅಕಸ್ಮಿಕವಾಗಿ ವಿದ್ಯುತ್ ಶಾಕ್ ಅಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹುಡುಗ ಕಾಣಿಯಾಗಿದ್ದಾನೆ.

ದಿನಾಂಕ: 21-03-2013 ರಂದು ಪಿರ್ಯಾದಿ ಕೆ.ಎಲ್. ಚಂದ್ರಪ್ಪ ಬಿನ್. ಲಿಂಗಯ, ಕ್ಯಾತಘಟ್ಟ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎನ್. ಟಿ.ನಂದೀಶ್, ವಯಸ್ಸು 17 ವರ್ಷ, ರವರು 19-03-13 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಕ್ಯಾತಘಟ್ಟ ಗ್ರಾಮ, ಸಿ.ಎ.ಕೆರೆ ಹೋಬಳಿ ಇಲ್ಲಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 21-03-2013 ರಂದು ಪಿರ್ಯಾದಿ ಬಿ.ಎಂ.ಕುಮಾರ್ ಸ್ವಾಮಿ ಬಿನ್. ಮಾದಯ್ಯ ಬಿ. ಬೊಮ್ಮನದೊಡ್ಡಿ ಗ್ರಾಮ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಂಗಿಯು ಬೊಮ್ಮನದೊಡ್ಡಿ ಗ್ರಾಮರವರು ನಮ್ಮ ಮನೆಯಿಂದ ಕಾಣಿಯಾಗಿರುತ್ತಾಳೆ. ದುಂಡನಹಳ್ಳಿ ಗ್ರಾಮದ ಚಿಕ್ಕಲಿಂಗಯ್ಯನವರ ಮಗ ಮಹೇಂದ್ರ ಕರೆದುಕೊಂಡು ಹೋಗಿರುತ್ತಾರೆಂದು ತಿಳಿದುಬಂದಿರುತ್ತೆ. ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 457-380 ಐ.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತೆ, ಹೊಸೂರು ಕಾಲೋನಿ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನಾಡಿ ಬಾಗಿಲು ಮುರಿದು ಒಂದು ಗ್ಯಾಸ್ ಸಿಲಿಂಡರ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಬೆಲೆ ರೂ.1500/- ರೂ ಬೆಲೆ ಆಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DCR Dated : 21-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-03-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  1 ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಕೊಲೆ ಪ್ರಕರಣ,  2 ಕಳ್ಳತನ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ವಾಹನ ಕಳವು ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 43/13 ಕಲಂ. 379 ಐ.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಸೈಯದ್ ಫರಾಜ್ ಬಿನ್ ಸೈಯದ್ ಮಾಸಿನ್, , ಹೆಚ್.ಸಿದ್ದಯ್ಯ ರೋಡ್, ಬೆಂಗಳೂರು-27 ರವರು ನೀಡಿದ ದೂರಿನ ಸಾರಾಂಶವೇನೆಂದರೆ   ದಿನಾಂಕ: 20-03-2013 ರಂದು ಮುತ್ತತ್ತಿ ಗ್ರಾಮದಲ್ಲಿ ಯಾರೋ ಕಳ್ಳರು ಮೋಟಾರ್ ಸೈಕಲ್ ಅನ್ನು ನಿಲ್ಲಿಸಿ ಸ್ನಾನ ಮಾಡಲು ಹೋಗಿದ್ದು ಮತ್ತೆ ವಾಪಸ್ಸು ಸಂಜೆ 4-30 ಗಂಟೆಯಲ್ಲಿ ಬಂದು ನೋಡಲಾಗಿ ಯಾರೋ ಕಳ್ಳರು ಮೋಟಾರ್ ಸೈಕಲ್ ಮತ್ತು ಅಲ್ಲಿ ಇಟ್ಟಿದ್ದ ಬ್ಯಾಗ್, ಬ್ಯಾಗ್ನಲ್ಲಿದ್ದ ಎರಡು ಮೊಬೈಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 40,000/- ರೂಗಳು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 354 ಐಪಿಸಿ & ದಿ ಪ್ರೊಟೆಕ್ಷನ್ ಆಫ್ ದಿ ಚಿಲ್ಡ್ರನ್ಸ್ ಫ್ರಮ್ ಸೆಕ್ಸುಯಲ್ ಅಫೆನ್ಸಸ್ ಆಕ್ಟ್-2012 ರೆ/ವಿ 34 ಐ.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ವೆಂಕಟೇಶ್ , ಮಕ್ಕಳ ಕಲ್ಯಾಣ ಸಮಿತಿಯ ನ್ಯಾಯಾಲಯದ ಅಧ್ಯಕ್ಷರು, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1] ಡಾ|| ಮಂಜುನಾಥ್  ಮತ್ತು  2] ರಾಮಚಂದ್ರ ರಾವ್, ಶಂಕರನಗರ, ಮಂಡ್ಯ ಸಿಟಿರವರುಗಳು ಬಾಲಕಿಯನ್ನು ದತ್ತು ಪಡೆದಿದ್ದು, ಮಗು ಪೋಷಕರ ಜೊತೆ ಇರಲು ಇಚ್ಛಿಸದಿರುವ ಬಗ್ಗೆ ಮಗುವನ್ನು ವಿಚಾರಿಸಲಾಗಿ ದತ್ತು ಪಡೆದ ಡಾ|| ಮಂಜುನಾಥ್ ಮತ್ತು ಇವರ ತಂದೆ ರಾಮಚಂದ್ರರಾವ್ ರವರು ತಾನು ಒಬ್ಬಳೆ ಇರುವ ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡಿರುತ್ತಾರೆಂದು ತಿಳಿಸಿರುತ್ತಾಳೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 21-03-2013 ರಂದು ಪಿರ್ಯಾದಿ ಬಾಗ್ಯ ಕೋಂ. ಶ್ರೀಕಂಠ, ವಾಸ ನಂ. 1527, 4 ನೇ ಕ್ರಾಸ್,  ಜಯಲಕ್ಷ್ಮೀ ಸಾಮಿಲ್ ಎದುರು ರಸ್ತೆ, ಗುತ್ತಲು ಕಾಲೋನಿ, ಮಂಡ್ಯ ರವರು ನೀಡಿದ ದೂರು ಏನೆಂದರೆ ಅವರ ಮಗ ಕಿರಣ್  ಬಿನ್. ಶ್ರೀಕಂಠ, ಗುತ್ತಲು ಕಾಲೋನಿ ರವರು ದಿನಾಂಕ: 21-03-2013 ಶಾಲೆಗೆ ಹೋಗಿರುತ್ತಾನೆ. ಸಂಜೆ 04-30 ಗಂಟೆಗೆ  ವಾಪಸ್ಸು ಮನೆಗೆ ಬರಬೇಕಾಗಿತ್ತು ಆದರೆ ಇಲ್ಲಿಯತನಕ ಶಾಲೆಯಿಂದ ನನ್ನ ಮಗ ಮನೆಗೆ ಬಂದಿರುವುದಿಲ್ಲಾ ನಾನು ಎಲ್ಲಾ ಕಡೆ ನನ್ನ ಸಂಬಂಧಿಕರು ಹಾಗು ಶಾಲೆಗೆ ಹೋಗಿ ವಿಚಾರ ಮಾಡಲಾಗಿ ನನ್ನ ಮಗ ಎಲ್ಲೂ ಸಿಕ್ಕಿರುವುದಿಲ್ಲಾ ಅವನನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 302-201 ಐ.ಪಿ.ಸಿ. 

ದಿನಾಂಕ: 21-03-2013 ರಂದು ಪಿರ್ಯಾದಿ ಎನ್.ಎಸ್. ನಾಗೇಂದ್ರ ಬಿನ್. ದೊಡ್ಡ ಸಂಜಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಮ್ಮ ಚಿಕ್ಕಹನುಮಯ್ಯ ಬಿನ್. ದೊಡ್ಡ ಸಂಜೀವಪ್ಪ, 40 ವರ್ಷ,  ಕೂಲಿ ಕೆಲಸ, ನೆಲಮನೆ ಗ್ರಾಮ ರವರು  ದಿನಾಂಕ 08-02-2013  ರಂದು ರಾತ್ರಿ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರುವುದಿಲ್ಲಾ  ಗ್ರಾಮದಲ್ಲಿ ರಂಗಸ್ವಾಮಿ ರವರೊಡನೆ ಜಗಳ ಆಗಿದ್ದು ದಿನಾಂಕ: 09-02-2013 ರಂದು ರೈಲ್ವೆ ಹಳಿ ಬಳಿ ಶವ ದೊರೆತಿದ್ದು ರಂಗಸ್ವಾಮಿ ಅಥವಾ ಯಾರೋ ಆಸಾಮಿಗಳು ಕೊಲೆ ಮಾಡಿ ತಂದು ಹಾಕಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕಳ್ಳತನ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 145/13 ಕಲಂ. 457-380 ಐ.ಪಿ.ಸಿ

ದಿನಾಂಕ: 21-03-2013 ರಂದು ಪಿರ್ಯಾದಿ ಕುಮಾರ.ಪಿ ಮುಖ್ಯೋಫಾಧ್ಯಾಯರು, ಸರ್ಕಾರಿ ಕಿರಿಯ .ಪ್ರಾಥಮಿಕ ಪಾಠಶಾಲೆ, ದೊಡ್ಡೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಎಂದಿನಂತೆ ದಿನಾಂಕ: 20-03-2013 ರಂದು ಶಾಲೆಯ ಕೊಠಡಿಯ ಬೀಗ ಹಾಕಿಕೊಂಡು ಕುಳಿತ್ತಿದ್ದು, ಈ ದಿನ ಬೆಳಿಗ್ಗೆ ಬಂದು ನೋಡಲಾಗಿ ಕೊಠಡಿಯ ಬೀಗ ಮುರಿದು  ಒಳಗೆ ಇದ್ದ ಎರಡು ಇಂಡಿಯನ್ ಹೆಚ್.ಪಿ. ಖಾಲಿ ಗ್ಯಾಸ್ ಸಿಲಿಂಡರ್ ಅನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು  ಅವುಗಳ ಬೆಲೆ ಸುಮಾರು 3000/- ರೂ ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 457-380 ಐ.ಪಿ.ಸಿ.


ದಿನಾಂಕ: 21-03-2013 ರಂದು ಪಿರ್ಯಾದಿ ಕೆ.ವಸಂತ, ಮುಖ್ಯಶಿಕ್ಷಕರು, ಸರ್ಕಾರಿ ಕಿರಿಯ .ಪ್ರಾಥಮಿಕ ಪಾಠಶಾಲೆ, ಅಚ್ಚಪ್ಪನಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಎಂದಿನಂತೆ ದಿನಾಂಕ: 20-03-2013 ರಂದು ಶಾಲಾ ಕೋಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು ಈ  ದಿನ ಬೆಳಿಗ್ಗೆ ಬಂದು ನೋಡಲಾಗಿ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಒಳಗೆ ಇದ್ದ   ಒಂದು ಗ್ಯಾಸ್ ಸಿಲಿಂಡರ್ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಬೆಲೆ ಸುಮಾರು 1500/-  ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಕುಮಾರ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಮನೆಗೆ ಸರಿಯಗಿ ಬರದೆ ಇದುದ್ದರಿಂದ  ಪೊಲೀಸರಿಗೆ ದೂರು ನೀಡಿದ್ದು,  ಅವರು ಠಾಣೆಗ ಕರೆಯಿಸಿ ವಿಚಾರ ಮಾಡಿ ತಿಳುವಳಿಕೆ ನೀಡಿದ್ದು ಕುಮಾರನು ದಿನಾಂಕ: 20-03-2013 ರಂದು ಮನೆಯ ಬಳಿ ವಿಷ ಸೇವನೆ ಮಾಡಿ ಆಸ್ಪತ್ರೆಗೆ  ಚಿಕಿತ್ಸೆಗೆ ಸೇರಿಸಿದರೂ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 21-03-2013 ರಂದು ಪಿರ್ಯಾದಿ ರಾಘವನ್ ಬಿನ್. ಹೊನ್ನಪ್ಪ, ನಜರ್ಬಾದ್, ಮೈಸೂರು, ಶ್ರೀ ರಂಗಪಟ್ಟಣ ಪಶ್ಚಿಮವಾಹಿನಿಯಲ್ಲಿ ಕೆಲಸ ಇವರು ನೀಡಿದ ದೂರು ಏನೆಂದರೆ ಅಪರಿಚಿತ ಹೆಂಗಸು ಬರ್ಹಿದೆಸೆಗೆ ಹೋಗಿ ನೀರು ತೆಗೆದುಕೊಳ್ಳಲು ಕಾವೇರಿಯ ಹೊಳೆ ಕಡೆಗೆ ಬಂದಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮರದ ಬೊಡ್ಡೆ ಮತ್ತು ಕಲ್ಲುಗಳ ಮೇಲೆ ಬಿದ್ದು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 20-03-2013

  ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-03-2013 ರಂದು ಒಟ್ಟು 35 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ                 2 ವಾಹನ  ಕಳವು ಪ್ರಕರಣಗಳು,  1 ಕಳ್ಳತನ ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್.    ಪ್ರಕರಣಗಳು,  2 ವರದಕ್ಷಿಣೆ ಕಿರುಕುಳ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು


ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 379,  ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಎಂ.ಆರ್,ನಂದೀಶ ಬಿನ್. ಲೇಟ್ ಎಂ.ಕೆ,ರಾಮಕೃಷ್ಣ  ಮಂಡ್ಯ ರವರು ನೀಡಿದ ದೂರು  ಏನೆಂದರೆ  ದಿನಾಂಕ: 17-03-2013 ರ  ರಾತ್ರಿ  09-00 ಗಂಟೆಯಲ್ಲಿ, ಎಸ್. ಎಫ್. ಸರ್ಕಲ್  ಬಳಿ  ಇರುವ  ನಂದಿನಿ ಪಾರ್ಲರ್  ಹತ್ತಿರ  ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು  ಟಿವಿಎಸ್  ಮೊಪೆಡ್  ನಂಬರ್ ಕೆ,ಎ.-11-ಇ-ಎ-2317ನ್ನು ಕಳ್ಳತನ ಮಾಡಿರುತ್ತಾರೆ  ಕಳುವಾಗಿರುವ  ಮೊಪೆಡ್ ನ್ನು ಪತ್ತೆ ಮಾಡಿಕೊಡಬೇಕೆಂದು  ನೀಡಿದ  ದೂರಿನ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 379 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಎಲ್. ಭಾಸ್ಕರ್ ರೆಡ್ಡಿ ಬಿನ್. ಲೇಟ್. ಎಲ್. ಬಾಲಿರೆಡ್ಡಿ, ಹುಲ್ಕೆರೆ ಕೊಪ್ಪಲು ಗ್ರಾಮ ರವರು ನೀಡಿದ  ದೂರಿನ ವಿವರವೇನೆಂದರೆ  ಯಾರೋ  ಕಳ್ಳರು ಟಿಪ್ಪರ್ ಲಾರಿ ನಂಬರ್ ಕೆ.ಎ.09, ಇ. 6131 ನ್ನು ಕಳ್ಳತನ ಮಾಡಿರುತ್ತಾರೆ,  ಕಳ್ಳತನವಾಗಿರುವ ನನ್ನ ಟಿಪ್ಪರ್ ಲಾರಿಯನ್ನು ಮತ್ತು ಕಳ್ಳನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ


ಕಳ್ಳತನ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 457-380 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಕಾಂಚನಾ ಮಾಲ.ಕೆ.ಎಲ್, ಮುಖ್ಯೋಪಾಧ್ಯಾಯರು, ಸರ್ಕಾರಿ  ಪ್ರೌಢಶಾಲೆ, ದೊಡ್ಡಪಾಳ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಯಾರೋ  ಕಳ್ಳರು  ಶಾಲೆಯ ಕಂಪ್ಯೂಟರ್  ಕೊಠಡಿಯ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಕೊಠಡಿಯ ಒಳಭಾಗ ಇದ್ದ ಕಂಪ್ಯೂಟರ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ  ಅಂದಾಜು ಬೆಲೆಃ 1,76,000/- ರೂ.ಗಳು ಆಗುತ್ತವೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 58/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
   
    ದಿನಾಂಕ: 20-03-2013 ರಂದು ಪಿರ್ಯಾದಿ ಪಿರ್ಯಾದಿಯವರು ನೀಡಿದ ದೂರು ಏನೆಂದರೆ ದಿನಾಂಕಃ 13-03-2013 ಬೆಳ್ಳಿಗೆ 9-00ಗಂಟೆ ವಳಗೆರೆಪುರ ಗ್ರಾಮದ ಪಿರ್ಯಾದಿಯವರ  ಮನೆಯಿಂದ ಎಂ ಡಿ ಸೈಫುಲ್ಲಾ, 15 ವರ್ಷ, ವಳಗೆರೆಪುರ ರವರು ಶಾಲೆಗೆ ಹೋಗುತ್ತೇನೆಂದು ಬೆಳಿಗ್ಗೆ 09-00 ಗಂಟೆಗೆ ಮನೆ ಬಿಟ್ಟು ಹೋದವನು ಇದುವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

    ದಿನಾಂಕ: 20-03-2013 ರಂದು ಪಿರ್ಯಾದಿ ಮಂಜು ಬಿನ್ ಲೇಟ್ ಪುಟ್ಟಬಸವಚಾರಿ ಅವ್ವೇರಹಳ್ಳಿ ಗ್ರಾಮ ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ:19-03-2013 ರಂದು ನಾಗರತ್ನಮ್ಮ ಕೋಂ. ಮಂಜು ರವರು ಶ್ರೀರಂಗಪಟ್ಟಣಕ್ಕೆ ಗಾಮರ್ೆಂಟ್ಸ್ ಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯವರೆಗೂ ವಾಪಸ್ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಹುಡುಗಿ ಕಾಣೆಯಾಗಿದಾಳೆ.

     ದಿನಾಂಕ: 20-03-2013 ರಂದು ಪಿರ್ಯಾದಿ  ಭಾಗ್ಯ ಕೊಂ. ಲೇಟ್. ಬಸವರಾಜಯ್ಯ, ವಿ.ಸಿ. ಫಾರಂ, ದುದ್ದ  ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಗೀತಾಂಜಲಿ ರವರು  ದಿನಾಂಕ: 04-03-2013 ರಂದು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ: 20-03-2013  ರಂದು ಪಿರ್ಯಾದಿ ಎನ್,ಸುಬ್ಬಯ್ಯ ಬಿನ್. ಲೇಟ್. ನೀಲೆಗೌಡ,  60ವರ್ಷ. ಒಕ್ಕಲಿಗರು, ವ್ಯವಸಾಯ, ಕ್ಯಾತೇಗೌಡನದೊಡ್ಡಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರು ಏನೆಂದರೆ ಅಪರಿಚಿತ ಗಂಡಸು ಈತನಿಗೆ ಶಿಶ್ನದ ಮೇಲ್ಬಾಗ  ಹೊಟ್ಟೆಯ ಹತ್ತಿರ ಯಾವುದೋ ಆಸ್ಪತ್ರೆಯಲ್ಲಿ ಶಸ್ರ್ರ ಚಿಕಿತ್ಸೆ  ಮಾಡಿಸಿ ಮೂತ್ರದ ಪೈಪನ್ನು ಅಳವಡಿಸಿದ್ದು  ನೋವನ್ನು  ತಾಳಲಾರದೆ   ಕನಕಪುರ  ರಸ್ತೆಯ  ನಿಡಗಟ್ಟ ಬಸ್  ನಿಲ್ದಾಣದ  ಬಳಿ  ಅರೇವಾ ಎಂಬ ಕ್ರಿಮಿನಾಶಕವನ್ನು  ಸೇವನೆ ಮಾಡಿ ಸ್ಥಳದಲ್ಲಿ  ಸತ್ತು ಹೋಗಿರುವುದಾಗಿ  ಪಿರ್ಯಾದು  ನೀಡಿದ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ:  20-03-2013  ರಂದು ಪಿರ್ಯಾದಿ ಸಿದ್ದರಾಜು ಬಿನ್.  ಸಿದ್ದಯ್ಯ, ಹುಲ್ಲಂಬಳ್ಳಿ  ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ತಂದೆ ಸಿದ್ದಯ್ಯ, ಹುಲ್ಲಂಬಳ್ಳಿ ಗ್ರಾಮ, ಮಳವಳ್ಳಿ ತಾ|| ರವರು ದಿನಾಂಕ: 18-03-2013 ರಂದು ಜೀವನದಲ್ಲಿ ಜಿಗುಪ್ಸೆಗೊಂಡು ಕಾಳುಗಳಿಗೆ ಹಾಕುವ ಕ್ರಿಮಿನಾಶಕದ ಗುಳಿಗೆಗಳನ್ನು ಸೇವಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕಾವೇರಿ ನಸರ್ಿಂಗ್ ಹೋಂನಲ್ಲಿ ದಾಖಲಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
   

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 498(ಎ), 506, ಕೂಡ 34 ಐ.ಪಿ.ಸಿ.      

    ದಿನಾಂಕ: 20-03-2013 ರಂದು ಪಿರ್ಯಾದಿ ರೂಪ ಕೋಂ ನಾಗಲಿಂಗೇಗೌಡ, ಸಾಹಳ್ಳೀ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಅವರ ಗಂಡ ನಾಗ  ಲಿಂಗೇಗೌಡ ಹಾಗು ಜಯಮ್ಮ, ಸಾಹಳ್ಳೀ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಸಂಸಾರದ ವಿಚಾರದಲ್ಲಿ ಮದುವೆಯಾದಗಿನಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

 2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 498(ಎ), 323, 504 ಕೂಡ 34 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಸುಧಾ ಕೋಂ ಮಹದೇವು, ನೆಲ್ಲೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಚಿಕ್ಕಕೆಂಪನ ಮಾದೇಗೌಡ, 2]ನಿಂಗಮ್ಮ, 3]ಲೋಕೇಶ, ನೆಲ್ಲೂರು ಗ್ರಾಮ, ಮಳವಳ್ಳಿ ತಾಲ್ಲೂಕು ರವರುಗಳು ಸಂಸಾರದ ವಿಚಾರದಲ್ಲಿ ಮದುವೆಯಾದಗಿನಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 279, 337,304(ಎ) ಐ.ಪಿ.ಸಿ. ರೆ:ವಿ 187 ಐ.ಎಂ.ವಿ ಕಾಯ್ದೆ.

    ದಿನಾಂಕ: 20-03-2013 ರಂದು ಪಿರ್ಯಾದಿ ನಾಗೇಶ ಬಿನ್ ಸಣ್ಣಮಾಯೀಗೌಡ, ವಯಸ್ಸು 28 ವರ್ಷ, ಹಾಲುಮತ, ವ್ಯವಸಾಯ,  ಕರಿಹುರಳಿ ಕೊಪ್ಪಲು  ಗ್ರಾಮ,  ಬನ್ನೂರು ಹೋಬಳಿ, ಟಿ.ಎನ್.ಪುರ  ತಾಲ್ಲೋಕು.  ಮೈಸೂರು  ಜಿಲ್ಲೆ, ಮೊ.ನಂ.9743736647  ರವರು ನೀಡಿದ ದೂರಿನ ವಿವರವೇನೆಂದರೆ  ಏಂ-11 -9579 ರ ಗೂಡ್ಸ್ ಆಟೋ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತದೆ, ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವುಗಳು ಹೋಗುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿ ಮಾಡಿಸಿದ ಪರಿಣಾಮ ಮೋಟಾರ್ ಸೈಕಲ್ ಓಡಿಸುತ್ತಿದ್ದ ಬಸವರಾಜು ಮತ್ತು ನಾನು ಕೆಳಕ್ಕೆ ಬಿದ್ದಾಗ ಬಸವರಾಜುವಿಗೆ ಪೆಟ್ಟಾಗಿ ಸ್ಥಳದಲ್ಲೇ ಸತ್ತುಹೋಗಿರುತ್ತಾನೆ. ಹಾಗೂ ನನಗೆ ಬಲ ಮುಂಡಿ, ಬಲಭಾಗದ ಕಿವಿ ಹತ್ತಿರ, ಬಲಕಣ್ಣು, ಎಡಕಣ್ಣುಗಳಿಗೆ ಹಾಗೂ ಇತರೆ ಕಡೆಗಳಿಗೆ ಪೆಟ್ಟಾಗಿರುತ್ತೆ ಈ ಬಗ್ಗೆ ಪ್ರಕರಣ ದಾಖಲಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 279, 304 (ಎ), 120 (ಬಿ) ಕೂಡ 201 ಐಪಿಸಿ ಮತ್ತು 187 ಐಎಂವಿ ಆಕ್ಟ್.

    ದಿನಾಂಕ: 20-03-2013 ರಂದು ಪಿರ್ಯಾದಿ ಪೊನ್ನುಸ್ವಾಮಿ ಬಿನ್. ಲೇ|| ರಾಜು, ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ;-18/19-03-2013 ರಂದು  ಪಿರ್ಯಾದಿ ಆರೋಪಿಗಳಾದ ಲಾರಿ ಡ್ರೈವರ್ ಇತರೆ 6 ಜನರು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ತಮ್ಮನ ಎದೆಯ ಮೇಲೆ ಹರಿಸಿದ್ದಾಗ ಫಿರ್ಯಾದಿಯವರ ತಮ್ಮ ರಕ್ತ ಕಕ್ಕಿ ಸ್ಥಳದಲ್ಲಿಯೇ ಸತ್ತುಹೋಗಿದ್ದು,  ಯಾರಿಗೂ ಗೊತ್ತಾಗುವುದು  ಬೇಡ ಪೊಲೀಸರಿಗೂ ತಿಳಿಸುವುದು ಬೇಡ ಇಲ್ಲಿಯೇ ಎಲ್ಲರೂ ಸೇರಿ ಸುಟ್ಟುಹಾಕಿಬಿಡೋಣ ಎಂದು ಹೇಳಿದಾಗ ಆರೋಪಿಗಳೆಲ್ಲರೂ ಸೇರಿಕೊಂಡು ಹೆಣವನ್ನು ರುದ್ರೇಶನ ತಂದೆ, ತಾಯಿಯನ್ನು ಸಮಾಧಿ ಮಾಡಿರುವ ಜಾಗದ ಹತ್ತಿರಕ್ಕೆ ತೆಗೆದುಕೊಂಡು ಹೋಗಿ, ಆದಿನ ರಾತ್ರಿಯೇ ಟೈರ್ ಗಳನ್ನು ಮತ್ತು ಸೌದೆ ತುಂಡುಗಳನ್ನು ಹಾಕಿ ಸುಟ್ಟು ಹಾಕಿರುತ್ತಾರೆ. ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 19-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-03-2013 ರಂದು ಒಟ್ಟು 29 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಕಳ್ಳತನ ಪ್ರಕರಣಗಳು,  1 ಎಸ್.ಸಿ/ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  2 ಕಳ್ಳತನ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      


ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.41/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 19-03-2013 ರಂದು ಪಿರ್ಯಾದಿ ಶೋಭಾ ಕೊಂ. ಶ್ರೀನಿವಾಸ, 23ವರ್ಷ, ವಕ್ಕಲಿಗರು, ಮನೆಕೆಲಸ, ಹಂದೇನಹಳ್ಳಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಪತಿ ಶ್ರೀನಿವಾಸ 30ವರ್ಷ, ವಕ್ಕಲಿಗರು,ವ್ಯವಸಾಯ, ಹಂದೇನಹಳ್ಳಿ ಗ್ರಾಮರವರು ದಿನಾಂಕ: 14-10-2011 ರಂದು ಮನೆಯಿಂದ ಎಲ್ಲೋ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ಮತ್ತು ಮನೆಯವರು ಎಲ್ಲಾ ಕಡೆ ಹುಡುಕಾಡಿ ಪತ್ತಯಾಗದ ಕಾರಣ, ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

  ದಿನಾಂಕ: 19-03-2013 ರಂದು ಪಿರ್ಯಾದಿ ಎನ್.ವರದರಾಜಚಾರ್ ಬಿನ್. ಲೇಟ್. ನಾರಾಯಣಚಾರ್, ವಾಸ ನಂ. 2846, ಪರಬ್ರಹ್ಮ ನಿಲಯ, 5ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರ ಅಣ್ಣ ಗೋವಿಂದರಾಜು ರವರ 22 ವರ್ಷದ, ಬಿಕಾಂ ಪದವೀಧರೆ, ವಿಶ್ವಕರ್ಮ ಜನಾಂಗ, ನಾಯಕನಪಾಳ್ಯ, ಮಾಡಬಳ್ಳ ಹೋಬಳಿ, ಮಾಗಡಿ ತಾಲ್ಲೂಕು, ರವರು ಇತ್ತೀಚೆಗೆ ಮನಶಾಂತಿ ಕಳೆದುಕೊಂಡಂತಿದ್ದು ಆಕೆಯನ್ನು ಸ್ಥಳ ಬದಲಾವಣೆ ಮಾಡುವ ಉದ್ದೇಶದಿಂದ ಸ್ವಲ್ಪ ದಿವಸ ಫಿರ್ಯಾದಿಯವರ ಮನೆಯಲ್ಲಿ ಇರಿಸಿದ್ದು ದಿನಾಂಕ: 18-03-2013 ರಂದು ಸಂಜೆ 06-00 ಗಂಟೆಯಲ್ಲಿ ಫಿರ್ಯಾದಿಯವರ ಮನೆಯಲ್ಲಿದ್ದವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹುಟ್ಟುಬಟ್ಟೆಯಲ್ಲಿ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಇದುವರೆಗೆ ಎಲ್ಲಾ ಕಡೆ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಜಿ.ಶಾಂತಕುಮಾರಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 457-380 ಐ.ಪಿ.ಸಿ.

ದಿನಾಂಕ: 19-03-2013 ರಂದು ಪಿರ್ಯಾದಿ ವಿಜಯಾಂಭ  ಕೋಂ. ಶ್ರೀನಿವಾಸ, ಎಲೆಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನವಾಡಿ ಕೊಠಡಿಯ   ಬೀಗ ಮುರಿದು 12 ಹೆಚ್.ಪಿ. ಖಾಲಿ ಗ್ಯಾಸ್ ಸಿಲಿಂಡರ್ ಅನ್ನು  ಕಳ್ಳತನ ಮಾಡಿಕೊಂಡುಹೋಗಿದ್ದು ಬೆಲೆ ಸುಮಾರು 1500/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 457 380 ಐ.ಪಿ.ಸಿ.

ದಿನಾಂಕ: 19-03-2013 ರಂದು ಪಿರ್ಯಾದಿ ಚೇತನ್.ಪಿ.ಎಸ್ ಬಿನ್ ಸುಬ್ರಮಣ್ಯರಾವ್, ಹಲಗೂರು ಟೌನ್, ಮಳವಳ್ಳಿ ತಾಃ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1]ಸತೀಶ 22ವರ್ಷ, ಗುಂಡಪ್ಪಶೆಡ್ಡ್, 2ನೇ ಕ್ರಾಸ್,  ಶಿವಮೊಗ್ಗ ಹಾಗು 2]ಕೃಷ್ಣ @ ಮಲೆಬೆನ್ನೂರು ಕೃಷ್ಣ -1ನೇ ಬೀದಿ, ಬೋವಿ ಕಾಲೋನಿ, ಮಲೆಬೆನ್ನೂರು ಗ್ರಾಮ, ಹರಿಹರ ತಾಲ್ಲೂಕು ರವರುಗಳು ದಿನಾಂಕ: 29-07-2009 ರ ಬೆಳಿಗ್ಗೆ 07-00 ಗಂಟೆಗೆ ಬಂದು ನಮ್ಮ ಮನೆಯ ಬಾಗಿಲನ್ನು ತೆಗೆಯಲು ಹೋದಾಗ ಮುಂಭಾಗಿಲು ಬೀಗ ಹೊಡೆದು ಡೋರ್ ಲಾಕ್ನ್ನು ಮೀಟಿ ಯಾರೋ ಕಳ್ಳರು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಬೀರುವನ್ನು ಹೊಡೆದು ಬೀರು ಒಳಗಿದ್ದ ಒಂದು ಜೊತೆ ಚಿನ್ನದ ಡ್ರಾಪ್ಸ್ ಮತ್ತು ಜುಮುಕಿಯನ್ನು ತೆಗೆದುಕೊಂಡು ಹಿಂಬಾಗಿಲನ್ನು ತೆಗೆದು ಹೊರಗೆ ಹೋಗಿರುತ್ತಾರೆ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಇದುವರೆವಿಗೂ ಪತ್ತೆ ಹಚ್ಚದಿದ್ದರಿಂದ ನಾನು ಹಲಗೂರು ಪೊಲೀಸ್ ಠಾಣೆಗೆ ಆ ದಿನ ದೂರು ನೀಡುತ್ತಿರುವುದಾಗಿ ದಿನಾಂಕ:17-08-2009 ರಂದು ಕೆ.ಎಂ.ದೊಡ್ಡಿ ಪೊಲೀಸರು ಕಳ್ಳರನ್ನು ಕರೆದುಕೊಂಡು ನಮ್ಮ ಮನೆಯನ್ನು ತೋರಿಸಿದರ ಮೇರೆಗೆ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ/ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 143-147-448-504-323-324-506 ರೆ/ವಿ 149 ಐಪಿಸಿ ಮತ್ತು 3 ಕ್ಲಾಸ್ [10] ಎಸ್.ಸಿ/ ಎಸ್.ಟಿ ಪಿ.ಎ.ಆಕ್ಟ್ 1989.

ದಿನಾಂಕ: 19-03-2013 ರಂದು ಪಿರ್ಯಾದಿ ಎಂ. ಸುದರ್ಶನ್ ಬಿನ್. ಲೇ. ಮಹದೇವಸ್ವಾಮಿ, ಪರಿಶಿಷ್ಟ ಜಾತಿ, ಕಾಡುಕೊತ್ತನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿಯರ್ಾದಿಯವರ ಮನೆಯ ಹತ್ತಿರ ಪರಿಶಿಷ್ಟ ಜನಾಂಗದ ಬಸವರಾಜು ಮತ್ತು ಶಿವಕುಮಾರ್ ಎಂಬುವರಿಗೆ ಈ ಕೇಸಿನ ಆರೋಪಿಗಳಾದ 1] ನಂಜುಂಡ. 2] ಚೇತನ. 3] ಸತೀಶ, 4] ಗಿರೀಶ, 5] ಭಾಸ್ಕರ, 6] ಯುಗಾದಿ 7] ಪ್ರವೀಣ ಹಾಗು 8] ಅನಿಲ್ ಎಲ್ಲರೂ ಕಾಡುಕೊತ್ತನಹಳ್ಳಿ  ಗ್ರಾಮ ರವರುಗಳು ಜಾತಿ ನಿಂದನೆ ಮಾಡಿ, ಗಲಾಟೆ ಮಾಢಿ ಹೊಡೆದು ಬೈಯ್ಯುತ್ತಿದ್ದಾಗ ಶಬ್ದ ಕೇಳಿ ಮನೆಯಿಂದ ಹೊರ ಬಂದ ಪಿಯರ್ಾದಿಯವರಿಗೆ ಮೇಲ್ಕಂಡ ಆರೋಪಿಗಳು ನಿನ್ನನ್ನು ಎಂದೋ ಮುಗಿಸಬೇಕಾಗಿತ್ತು, ಈ ದಿನ ಸಿಕ್ಕಿದ್ದೀಯೇ, ಎಂದು ಪಿರ್ಯಾದಿಯವರು ಅಂತರ್ಜಾತಿ ವಿವಾಹವಾಗಿರುವ ಹಳೆಯ ದ್ವೇಷ ಇಟ್ಟುಕೊಂಡು, ಪಿಯರ್ಾದಿಗೆ ದೊಣ್ಣೆಯಿಂದ ಹೊಡೆದು, ಅಕ್ರಮವಾಗಿ ಮನೆಗೆ ನುಗ್ಗಿ, ಪಿರ್ಯಾದಿಯ ತಾಯಿ & ಹೆಂಡತಿಗೆ   ಹೀನಾ ಮಾನವಾಗಿ ಬೈಯ್ದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 379  ಐ.ಪಿ.ಸಿ.

ದಿನಾಂಕ: 19-03-2013 ರಂದು ಪಿರ್ಯಾದಿ ಎನ್.ಎಸ್. ಶಂಭುಗೌಡ, 38 ವರ್ಷ, ವಿ.ಸಿ. ಚಾನಲ್  ಕೆಳಗೆ ಅನ್ನಪೂಣರ್ೆಶ್ವರಿ ನಗರ, ಕ್ಯಾತುಂಗೆರೆ ಲೇ. ಔಟ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು  ತಮ್ಮ ಮನೆಯ ಹಿಂಭಾಗ ತಮ್ಮ ಬಾಬ್ತು  ಕೆಎ-11-2873  ಕಾರನ್ನು ನಿಲ್ಲಿಸಿದ್ದು  ದಿನಾಂಕಃ-18-03-2013  ರಂದು  ರಾತ್ರಿ ನಿಲ್ಲಿಸಿದ್ದು  ಯಾರೋ  ಕಳ್ಳರು  ಕಾರಿನ ಹಿಂಭಾಗದ  ಗ್ಲಾಸ್ ನ್ನು  ಬಿಚ್ಚಿ  ಮ್ಯೂಸಿಕ್ ಸ್ಟೀರಿಯೋವನ್ನು  ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ  ಇದರ ಅಂದಾಜು  ಬೆಲೆ  9200/-  ರೂ  ಗಳಾಗುತ್ತದೆ  ಪತ್ತೆ  ಮಾಡಿಕೊಡಿ ಎಂದು ಕೊಟ್ಟ ದೂರಾಗಿರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 379 ಐ.ಪಿ.ಸಿ.

ದಿನಾಂಕ: 19-03-2013 ರಂದು ಪಿರ್ಯಾದಿ ಎಂ ರಾಜು ಬಿನ್. ಮಹದೇವಶೆಟ್ಟಿ, ಕೋಟೆ ಮಡಿವಾಳರ ಬೀದಿ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಳವಳ್ಳಿ ಅನಂತರಾಮಯ್ಯ ಸರ್ಕಲ್ ಮಾತೃಶ್ರೀ ಮೊಬೈಲ್ ಅಂಗಡಿಯ ಮುಂಬಾಗ ಮದ್ಯಾಹ್ನ 02-00 ಗಂಟೆಯ ಸಮಯದಲ್ಲಿ ನನ್ನ ಮೋಟಾರ್ ಸೈಕಲ್  ನಿಲ್ಲಿಸಿ ಮೊಬೈಲ್ ಅಂಗಡಿಯ ಒಳಕ್ಕೆ ಹೋಗಿ ವಾಪಸ್ಸು ಬಂದು ನೊಡಲಾಗಿ ನನ್ನ ಬಾಬ್ತು ಕೆ.ಎ-51 ಹೆಚ್-9536 ಮೋಟಾರ್ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಕದ್ದಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 19-03-2013 ರಂದು ಪಿರ್ಯಾದಿ ಸುಜಯ್.ಕೆ. ಬಿನ್. ಕೃಷ್ಣಕುಮಾರ್, ಕಡತನಾಳು ಗ್ರಾಮ, ಎಸ್.ಆರ್.ಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ಮೂತರ್ಿ ಬಿನ್ ಪುಟ್ಟಸ್ವಾಮಿ,28 ವರ್ಷ, ಬನ್ನೂರು ಗ್ರಾಮ ರವರಿಗೆ ಯಾವುದೋ ವಿಷದ ಹಾವು ಆತನ ಬಲಕಾಲಿನ ಪಾದದ ಮೇಲಿನ ಭಾಗಕ್ಕೆ ಎರಡು ಕಡೆ ಕಚ್ಚಿದ್ದು, ನಾವುಗಳು ತಕ್ಷಣ ಮೂತರ್ಿಯನ್ನು ಚಿಕಿತ್ಸೆ ಬಗ್ಗೆ ಪಾಂಡವಪುರ ಚಚರ್್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಎಂದು ವೈಧ್ಯರು ತಿಳಿಸಿದರು. ಮೃತನ ಸಾವಿಗೆ ಯಾವುದೇ ಅನು ಮಾನ ಇರುವುದಿಲ್ಲ, ಮೂರ್ತಿಗೆ ಯಾವುದೋ ವಿಷದ ಹಾವು ಕಚ್ಚಿ ಮೃತಪಟ್ಟಿರುತ್ತಾನೆ ಎಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ತಾವುಗಳು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.  

Daily DCR Dated:18-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-03-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳ್ಳತನ ಪ್ರಕರಣಗಳು,  1 ರಾಬರಿ ಪ್ರಕರಣ,  1 ಅತ್ಯಾಚಾರ ಪ್ರಕರಣ,  1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 15 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 


ಕಳ್ಳತನ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ನಂಜೇಗೌಡ ಬಿನ್. ಈರೇಗೌಡ, 65 ವರ್ಷ, ಹಾಲುಮತ, ವ್ಯವಸಾಯ, ಚಿಕ್ಕತಾರಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಪಿರ್ಯಾದಿಯ ಮನೆಯ ಹಿಂಬಾಗದ ಕೊಟ್ಟಿಗೆಯ ಬಾಗಿಲ ಚಿಲಕವನ್ನು ಯಾವುದೋ ಆಯುಧದಿಂದ ತೆಗೆದು ಮನೆಯ ಒಳಗಡೆ ಬಂದು ಮನೆಯಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಅದರಲ್ಲಿದ್ದ ಚಿನ್ನದ ಹಾಗೂ ಬೆಳ್ಳಿಯ ಒಡವೆಗಳನ್ನು ಹಾಗೂ 2000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಬಿ.ಕೆ.ಲಿಂಗೇಗೌಡ, ಪ್ರಾಚಾರ್ಯರು, ಸ.ಪ.ಪೂ.ಕಾಲೇಜು, ಕದಬಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ದಿಃ 16-03-2013 ರಾತ್ರಿ ವೇಳೆ ಅಥವಾ ದಿನಾಂಕಃ 17-03-2013 ರ ಹಗಲು ಅಥವಾ ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಮೌಲ್ಯ ಸುಮಾರು 68000/- ರೂ.ಗಳಾಗಿರುತ್ತದೆ. ಕೊಠಡಿಯ ಬೀಗವನ್ನು ಹೊಡೆದು ಕಂಪ್ಯೂಟರ್ ಉಪಕರಣಗಳನ್ನು ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಾಗಿಸಲಾಗಿದೆ.


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಹೆಚ್.ಎನ್.ಪ್ರೇಮಕುಮಾರಿ ಕೋಂ. ಸಿ.ಕೆ.ಚಂದ್ರ, ಶಿಕ್ಷಕಿ, ಶಿಶುಪಾಲನಾ ಕೇಂದ್ರ, ಶ್ರೀ ಗೀತಾ ಪ್ರೌಢಶಾಲೆ ಆವರಣ, ಶಂಕರನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾತ್ರಿವೇಳೆಯಲ್ಲಿ ಯಾರೋ ಕಳ್ಳರು ಸದರಿ ಶಿಶುಪಾಲನಾ ಕೇಂದ್ರದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಜಖಂಗೊಳಿಸಿ ಒಳ ಪ್ರವೇಶಿಸಿ ಒಳಗಡೆ ಇಟ್ಟಿದ್ದ ಭಾರತ್ ಕಂಪನಿಯ ಒಂದು ಭಾರತ್ ಗ್ಯಾಸ್ ಸಿಲಿಂಡರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 1500/- ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಾಬರಿ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 392 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ಎನ್.ಶಾರದ ಕೋಂ. ಕೃಷ್ಣೇಗೌಡ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ ಸೈಕಲ್ನ ಹಿಂಭಾಗ ಮತ್ತು ಮುಂಭಾಗ ನಂಬರ್ ಇರುವುದಿಲ್ಲ. ಮೇಲ್ಕಂಡ ಚಿನ್ನದ ಸರವು 50 ಗ್ರಾಂ ತೂಕದ ಅಂಜಲಿ ಕಟಿಂಗ್ ಮಾದರಿಯ ಎರಡೆಳೆ ಚಿನ್ನದ ಮಾಂಗಲ್ಯ ಸರವಾಗಿದ್ದು, ಇದರಲ್ಲಿ 5 ಗ್ರಾಂ ತೂಕದ ಚಿನ್ನದ ಮಾಂಗಲ್ಯ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು, ಮಾಂಗಲ್ಯದ ಅಕ್ಕಪಕ್ಕದಲ್ಲಿ ಹವಳ ಮತ್ತು ಕರಿಮಣಿ ಇರುತ್ತದೆ ತನ್ನ ಚಿನ್ನದ ಚೈನ್ ಅನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅತ್ಯಾಚಾರ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 376-417 ಐ.ಪಿ.ಸಿ.

ದಿನಾಂಕ: 18-03-2013 ರಂದು ಪಿರ್ಯಾದಿ ನೀಡಿದ ದೂರು ಏನೆಂದರೆ ಆರೋಪಿ ಮಂಜು ಬಿನ್. ಗಣೇಶ್, ಕಾವೇರಿಪುರ ಗ್ರಾಮ, ಪಾಂಡವಪುರ ತಾಲ್ಲೂಕು ರವರು ಮಂಜು ಎಂಬುವನು ಮದ್ಯಾಹ್ನ 01-00 ಗಂಟೆಯ ಸಮಯದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ಬಂದು ನಾನು ನಿನ್ನನು ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿ ಮಾತನಾಡುತ್ತಿದ್ದಾಗ ನನ್ನನ್ನು ಹಿಡಿದುಕೊಂಡು ಪುಸಲಾಯಿಸಿ ಬಲವಂತದಿಂಧ ನನ್ನನ್ನು ಸಂಬೋಗ ಮಾಡಿ ನಾನು ಅಳುತ್ತಾ ಕುಳಿತ್ತಿದ್ದಾಗ ನೀನು ಯಾರಿಗೂ ಹೇಳಬೇಡ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಪುಸಲಾಯಿಸಿ ಆಗಿದ್ದಾಗ್ಗೆ ನಮ್ಮ ಮನೆಗೆ ಬಂದು ಬಲವಂತವಾಗಿ ಸಂಬೋಗ ಮಾಡಿ ಹೋಗುತ್ತಿದ್ದನು. ದಿನಾಂಕ: 17-03-2013 ರಂದು ಮಂಜುವನ್ನು ಕರೆದು ಈಗ ನಾನು 7 ವರೆ ತಿಂಗಳ ಗರ್ಭಿಣಿಯಾಗಿದ್ದೀನಿ ಮದುವೆ ಮಾಡಿಕೊ ಎಂದು ಕೇಳಿದಾಗ ನನಗೂ ನಿನಗೂ ಏನು ಸಂಬಂದ ವಿಲ್ಲಾ ಎಂದು ನಿರಾಕರಿಸಿರುತ್ತಾನೆ ಆದ್ದರಿಂದ ಈತನ ಮೇಲೆ ಕಾನೂನು ರೀತಿ ಕ್ರಮ ತೆಗೆದೆಕೊಳ್ಳಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ. ನಂ. 23/13 ಕಲಂ. 366(ಎ) ಐ.ಪಿ.ಸಿ.


ದಿನಾಂಕ: 18-03-2013 ರಂದು ಪಿರ್ಯಾದುದಾರ ಗಮ್ಮೇಗೌಡ ಬಿನ್. ಲೇಟ್. ದಾಸೇಗೌಡ, ಒಕ್ಕಲಿಗ, ವ್ಯವಸಾಯ, ಸೊಳ್ಳೆಪುರ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 18-03-2013 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿರ್ಯಾದಿಯ ಮಗಳನ್ನು ಯಾರೋ ಸೊಳ್ಳೆಪುರ ಬಸ್ ನಿಲ್ದಾಣದಲ್ಲಿ ಪುಸಲಾಯಿಸಿ ಅಥವಾ ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ : 

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 18-03-2013 ರಂದು ಪಿರ್ಯಾದುದಾರ ಮರಿಯಪ್ಪ ಬಿನ್. ರಾಜೇಂದ್ರನ್, ಕ್ರಿಶ್ಚಿಯನ್, ತಮಿಳು ಕಾಲೋನಿ, ಬೆಸಗರಹಳ್ಳಿ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ 18-03-2013 ರಂದು ಪಿರ್ಯಾದಿ ಅಣ್ಣನ ಮಗಳು ಕಾಲೇಜಿಗೆ ಹೋಗಿ ಬರುತ್ಥೇನೆಂದು ಮಂಡ್ಯಕ್ಕೆ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ನೆಂಟರು, ಸ್ಣೇಹಿತರ ಮನೆಗಳಲ್ಲಿ ಹುಡುಕಲಾಗಿ ಸಿಕ್ಕಿರುವುದಿಲ್ಲ ಆದ್ದರಿಂದ ಕಾಣೆಯಾದ ನನ್ನ ಅಣ್ಣನ ಮಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 17-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-03-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ರಾಬರಿ ಪ್ರಕರಣ ಹಾಗು 19 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 

ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 17-03-2013 ರಂದು ಪಿರ್ಯಾದಿ ರಾಜಮ್ಮ ಕೋಂ. ಶಶಿಧರ, ಧನಗೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಉಮಾದೇವಿ ಕೋಂ. ರಂಗಸ್ವಾಮಿ, ರವರು ಗರ್ಭಿಣಿಯಾಗಿದ್ದು ಅವರು ಹೊಸ ಮಾತ್ರೆಯ ಬದಲು ಹಳೆ ಮಾತ್ರೆಗಳನ್ನು ಹೊಟ್ಟೆನೋವಿನ ಕಾರಣದಿಂದ ನೋವಿನ ಭಾದೆಯಲ್ಲಿ ತೆಗೆದುಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 78/13 ಕಲಂ. 392 ಐ.ಪಿ.ಸಿ.

ದಿನಾಂಕ: 17-03-2013 ರಂದು ಪಿರ್ಯಾದಿ ಪಾಪೇಗೌಡ, ಬಸವೇಶ್ವರ ನಗರ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕುತ್ತಿಗೆಗೆ ಕೈಹಾಕಿ ಸುಮಾರು 65 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಆದ್ದರಿಂದ ಕಳ್ಳತನವಾದ ಮಾಂಗಲ್ಯ ಸರವನ್ನು ಹುಡುಕಿಕೊಡಬೇಕೆಂದು ಹಾಗು ಇವುಗಳ ಒಟ್ಟು ಮೌಲ್ಯ 1.30.000/- ರೂಗಳಾಗಿರುತ್ತದೆಂದು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DCR Dated 16-03-2013


ಈ ದಿನ ಮಂಡ್ಯ ಜಿಲ್ಲೆಯಲ್ಲಿ 25 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 3 ಅಪಘಾತ ಪ್ರಕರಣ, 2 ಯುಡಿಆರ್ 6 ಭದ್ರತಾ ಕಾಯ್ದೆ ಪ್ರಕರಣ, 2 ಹಲ್ಲೆ ಪ್ರಕರಣ, 1 ಕೌಟುಂಬಿಕ ದೌರ್ಜನ್ಯ ಪ್ರಕರಣ, 1 ನೀರಾವರಿ ಕಾಯ್ದೆ ಪ್ರಕರಣ ಹಾಗೂ 1 ಜಾನುವಾರು ಕಾಯ್ದೆ ಪ್ರಕರಣ ಮತ್ತು 9 ಇತರ ಪ್ರಕರಣಗಳು ವರದಿಯಾಗಿರುತ್ತದೆ. 

ಅಸ್ವಾಭಾವಿಕ ಸಾವು ಪ್ರಕರಣ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 08/13 ಕಲಂ 174 CrPC

ದಿ;16-03-2013 ರ ಸಂಜೆ 04-00 ಗಂಟೆಯ ಹಿಂದೆ, ಬೇವಿನಹಳ್ಳಿ ಗ್ರಾಮದಿಂದ ಎ.ಹುಲ್ಲಕೆರೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆಯ ಬದಿಯಲ್ಲಿ ವೃದ್ಧ ಮಹಿಳೆಯೊಬ್ಬರ ಅನಾಥ ಶವ ಬಿದ್ದಿದ್ದು, ಇವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು, ಗುಲಾಬಿ ಸೀರೆ, ಗೋಲ್ಡನ್ ಬಣ್ಣದ ರವಿಕೆ ಧರಿಸಿರುತ್ತಾರೆ.  ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿರುವ ದೂರಾಗಿರುತ್ತೆ.  

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 14/13 ಕಲಂ 174 CrPC

16-03-13 ರಂದು ಮದ್ಯಾಹ್ನ 12-00  ಗಂಟೆಯ ಹಿಂದಿನ  ದಿನಗಳಲ್ಲಿ ಉತ್ತರ ಕಾವೇರಿ ಸೇತುವೆ ಬಳಿ ಕಾವೇರಿ ಹೊಳೆಗೆ ಸುಮಾರು 45-50 ವರ್ಷದ ಅಪರಿಚಿತ ಮಹಿಳೆ ಬಿದ್ದು ಮೃತ ಪಟ್ಟಿರುವುದಾಗಿ  ಕಂಡುಬಂದಿರುತ್ತೆ. ಮುಂದಿನ ಕ್ರಮ ಜರುಗಿಸ ಬೇಕಾಗಿ ಕೋರಿಕೆ ಎಂದು ಕೊಟ್ಟ ದೂರು

ಮಾರಣಾಂತಿಕ ಅಪಘಾತ ಪ್ರಕರಣ

ಶಿವಳ್ಳಿ ಠಾಣೆ ಪೊಲೀಸ್ ಠಾಣೆ ಮೊ ಸಂ 64/2013 ಕಲಂ 279-337-304(ಎ) ಐಪಿಸಿ

16-03-2013 ರಂದು  ಸಂಜೆ 4  ಗಂಟೆಯಲ್ಲಿ. ಮಂಡ್ಯ ಮೇಲು ಕೋಟೆ ಮುಖ್ಯ ರಸ್ತೆಯ ಮಲ್ಲೇನಹಳ್ಳಿಗೇಟ್ ಬಳಿ ಆರೋಪಿ ಕಾರ್ ಚಾಲಕ ಕೆ.ಎ-42-ಎಂ -1572  ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ನಾವುಗಳು ಹೋಗುತ್ತಿದ್ದ ಬೈಕ್ಗೆ ನಮ್ಮ ಕಡೆಗೆ ಆದಂತೆ ಬಂದು ಬಲವಾಗಿ ಡಿಕ್ಕಿ  ಹೂಡೆಸಿದರು. ಪಿರ್ಯಾದಿ ಸಾಗರ್ ರವರ ಜೊತೆ ಇದ್ದ ಸಿದ್ದ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಪೆಟ್ಟಾಗಿದ್ದ ಸಾಗರ್ ರವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ  ಸೇರಿಸಿದ್ದಾರೆ. ಈ ಅಪಾಘಾತಕ್ಕೆ ಕಾರಣನಾದ ಮೇಲ್ಕಂಡ  ಸದರಿ ಕಾರಿನ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು


ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ ಸಂ 17/2013 ಕಲಂ 279-304(ಎ) ಐಪಿಸಿ

ದಿನಾಂಕ.16/03/2013 ರಂದು ಸಂಜೆ 4-00ಗಂಟೆಯಲ್ಲಿ ಮಂಡ್ಯ ಸಿಟಿ ಕಡೆಯಿಂದ ಬನ್ನೂರು ಕಡೆಗೆ KSRTC ಬಸ್ಸು ಹೋಗುತ್ತಿದ್ದು ಅದರ ಚಾಲಕ ಅತಿವೇಗವಾಗಿ ಮತ್ತು ಎಡದಿಂದ ಏಕಾಏಕಿ ರಸ್ತೆಯ ಬಲಭಾಗಕ್ಕೆ ತನ್ನ ನಿರ್ಲಕ್ಷತೆಯಿಂದ ಓಡಿಸಿ ಬರುತ್ತಿದ್ದ. ನನ್ನ ತಾಯಿ ಹನುಮಮ್ಮಳಿಗೆ ಡಿಕ್ಕಿ ಹೊಡೆಸಿದ ರಭಸಕ್ಕೆ ನನ್ನ ತಾಯಿ ಕೆಳಗೆ ಬಿದ್ದೆಳು ತಕ್ಷಣ ಬಸ್ಸಿನ ಮುಂದಿನ ಬಲಭಾಗದ ಚಕ್ರ ನನ್ನ ತಾಯಿಯ ದೇಹದ ಮೇಲೆ ಹರಿದು ನಿಂತಿತು. ಆಗ ನಾನು ಮತ್ತು ಅಲ್ಲಿದ್ದ ಮರೀಗೌಡ ಬಡಾವಣೆಯ ಸುಬ್ಬಯ್ಯ ಹಾಗೂ ಸ್ಥಳದಲ್ಲಿದ್ದ ಇತರರು ಹತ್ತಿರ ಹೋಗಿ ನನ್ನ ತಾಯಿಯನ್ನು ಎತ್ತಿ ಉಪಚರಿಸಲಾಗಿ ನನ್ನ ತಾಯಿಯ ತಲೆ, ಬಲಗೈ ಮತ್ತು ಬಲಗಾಲಲ್ಲಿ ಜಜ್ಜಿದಂತ ಗಾಯಗಳಾಗಿ ಸ್ಥಳದಲ್ಲಿ ಸತ್ತು ಹೋಗಿದ್ದರು. ಈ ಅಪಾಘಾತಕ್ಕೆ ಕಾರಣನಾದ ಮೇಲ್ಕಂಡ  ಸದರಿ ಬಸ್ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು

ಕೌಟುಂಬಿಕ ದೌರ್ಜನ್ಯ ಪ್ರಕರಣ

ಮದ್ದೂರು ಪೊಲೀಸ್ ಠಾಣೆ ಮೊ ಸಂ 110/2013 ಕಲಂ 498(ಎ)-323-506 ಐಪಿಸಿ 

ಪಿರ್ಯಾದಿ ಸಿ.ಎಂ. ಉಮಾ ಕೋಂ ಟಿ. ಚನ್ನಪ್ಪ ರವರ ಗಂಡ ಐ.ಟಿ.ಬಿ.ಪಿ. ಪ್ಯಾರಾ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ರಜಾ ದಿನಗಳಲ್ಲಿ ಬಂದಾಗಲೆಲ್ಲಾ ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ತಂದೆಯ ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿರುತ್ತಾರೆ. ಈ ಬಗ್ಗೆ ನಾವು ಪಂಚಾಯಿತಿ ಮಾಡಿ ಠಾಣೆಗೂ ಸಹ ಸುಮಾರು ಸಲ ದೂರು ನೀಡಿದ್ದು, ದೂರಿನ ಮೇರೆಗೆ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿರುತ್ತಾರೆ. ದಿಃ16-03-13 ರ ಬೆಳಿಗ್ಗೆ 8-30 ರ ಸಮಯದಲ್ಲಿ ನನಗೆ ಹೊಡೆದು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಈತನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳು ಕೋರಿ

ನೀರಾವರಿ ಕಾಯ್ದೆ 

ಕಿಕ್ಕೇರಿ ಪೊಲೀಸ್ ಠಾಣೆ ಮೊ ಸಂ 51/2013 ಕಲಂ ಕಲಂ 430-427 ಐಪಿಸಿ ಕೂಡ 61(ಎ) ಮತ್ತು 61(ಬಿ) ಕನರ್ಾಟಕ ನೀರಾವರಿ ಕಾಯ್ದೆ.

ಆರೋಪಿಗಳಾದ 1] ಅಶೋಕ ಬಿನ್ ಪುಟ್ಟೇಗೌಡ, ಬೋರಾಪುರ ಹಾಗೂ ಇತರರು, ಎಲ್ಲರೂ ಕೆ.ಆರ್.ಪೇಟೆ ತಾಲೋಕು. ನಾಲೆಯಿಂದ ಅನಧಿಕೃತವಾಗಿ ನೀರನ್ನು ಪಡೆಯಲು ನಾಲಾ ಏರಿಯನ್ನು ಅಗೆದು 6 ಅಂಗುಲ ವ್ಯಾಸದ ಪೈಪನ್ನು ಹೂಳಿರುತ್ತಾರೆ. ದಿನಾಂಕಃ 12-03-2013 ರಂದು ಬೆಳಿಗ್ಗೆ 11-00 ಘಂಟೆಗೆ ನಾಲಾ ತಪಾಸಣೆ ವೇಳೆ ಸ್ಥಳ ಪರಿಶೀಲನೆ ಮಾಡಿದಾಗ ನಾಲಾ ಏರಿಯನ್ನು ಅಗೆದು ಪೈಪನ್ನು ಅಳವಡಿಸಿಕೊಂಡಿರುವುದು ಕಂಡು ಬಂದಿದೆ. ಸದರಿ ಅಗೆತದಿಂದ ಸಕರ್ಾರಿ ಸ್ವತ್ತಿಗೆ ರೂ 14081/- ಗಳಷ್ಟು ಹಾನಿ ಆಗಿದೆ ಎಂದು ಎಸ್.ಇ ನಿಂಗಪ್ಪ, ಅಸಿಸ್ಟಂಟ್ ಇಂಜಿನಿಯರ್, ನಂಜ 5 HLBC ಉಪವಿಭಾಗ, ಕೆ.ಆರ್ ಪೇಟೆ.ರವರು ನೀಡಿದ ದೂರು

ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ 

ಮಂಡ್ಯ ಪಶ್ಚಿಮ ಠಾಣೆ 68/13 353, 506, 188 ರೆ/ವಿ 34 ಐಪಿಸಿ 

16-03-13  1-30 ಪಿಎಂ ರಿಂದ 1-45 ಪಿಎಂ ನಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮಂಡ್ಯ ಸಿಟಿ ಆರೋಪಿಗಳು ಫಿರ್ಯಾದಿ ಕೆ.ಮಲ್ಲೇಶ ಬಿನ್ ಲೇಟ್ ಕಾಡೇಗೌಡ, ಸಹಾಯಕ ಭದ್ರತಾ ನಿರೀಕ್ಷಕರು, ಕೆಎಸ್ಆರ್ಟಿಸಿ, ಮಂಡ್ಯ ವಿಭಾಗ, ಮಂಡ್ಯ ಸಿಟಿ,  ರವರನ್ನು ಕುರಿತು ನೀನು ಏನಾದರೂ ಇನ್ನೊಂದು ಸಾರಿ ನಮ್ಮ ಬಸ್ಸನ್ನು ಅಲ್ಲಿಂದ ತೆರವುಗೊಳಿಸಿದರೆ ನಿನ್ನನ್ನು ಅಲ್ಲಿಯೇ ಕೊಂದು ಬಿಡುತ್ತೇವೆಂದು ಬೆದರಿಕೆ ಹಾಕಿ ಸಕರ್ಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಆರೋಪಿಗಳಾದ 1] ಸುಧಾಕರ ಬಿನ್ ಕುಳ್ಳೇಗೌಡ, ಕೆಎ-11 8582 ರ ಖಾಸಗಿ ಬಸ್ಸಿನ ಕಂಡಕ್ಟರ್, ವಾಸ ಕೊಪ್ಪ, ಮದ್ದೂರು ತಾಲ್ಲೂಕು. 2] ಶಶಿ ಬಿನ್ ಶಿವಣ್ಣ, ಬಸ್ ಏಜೆಂಟ್, ವಾಸ ಕಲ್ಲಹಳ್ಳಿ, ಮಂಡ್ಯ ಸಿಟಿ. ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು


ಬೆಳ್ಳೂರು ಪೊಲೀಸ್ ಠಾಣೆ ಮೊ ಸಂ 56/2013 ಕಲಂ 11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಫಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ಷನ್ ಆಕ್ಟ್ 1964

ದಿನಾಂಕಃ 16-03-2013 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಲ್ಯಾಂಕೋ ಚೆಕ್ ಪೋಸ್ಟ್ ಬಳಿ, ಎನ್.ಹೆಚ್.  48 ರಸ್ತೆಯಲ್ಲಿ. ಆರೋಪಿಗಳಾದ 1] ಸ್ವಾಮಿ, ನಾಗರಹಳ್ಳಿ ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, 2]ಶಿವಕುಮಾರ್ ಕೆಎ-20-ಎ-9198ರ 909ಗೂಡ್ಸ್ ವಾಹನದ ಚಾಲಕ ವಾಸ ಗಂಡಸಿ ಗ್ರಾಮ ಅರಸೀಕೆರೆ ತಾ ಹಾಸನ ಜಿಲ್ಲೆ, ರವರುಗಳು ರಾಸುಗಳನ್ನು ತುಂಬಿಕೊಂಡು ಪರವಾನಿಗೆ ಇಲ್ಲದೆ ಸಾಗಣೆ ಮಾಡುತ್ತಿದ್ದು,ಸದರಿ ವಾಹನವನ್ನು, ಚಾಲಕ ಮತು ರಾಸುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇರೆಗೆ.


DAILY CRIME REPORT DATED : 15-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-03-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹುಡುಗಿ ಕಾಣೆಯಾದ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,     2 ಕಳವು ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ವಂಚನೆ/ಹಣ ದುರುಪಯೋಗ ಪ್ರಕರಣ,  1 ಕೊಲೆ ಪ್ರಕರಣ,  1 ಅಪಹರಣ ಪ್ರಕರಣ ಹಾಗು 16 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಹುಡುಗಿ ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 15-03-2013 ರಂದು ಪಿರ್ಯಾದಿ ಚಿಣ್ಣೇಗೌಡ, ಕಂಡಯ್ಯನಪಾಳ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ 18 ವರ್ಷದ ಮಗಳು ಕೆ.ಎಂ.ದೊಡ್ಡಿ ಟೌನಿಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ದೊರೆರಾಜು, ನಂ. 2941, 7ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕನರ್ಾಟಕ ಬಾರ್ ಸರ್ಕಲ್ ಹತ್ತಿರ ಈತ ದಿನ ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಜನರು ಸುತ್ತುವರೆದು ನೋಡುತ್ತಿದ್ದು ನಾನು ಏನೆಂದು ನೋಡಲಾಗಿ ಸದರಿ ಆಸಾಮಿಯು ಸತ್ತು ಮಲಗಿದ್ದು ಈತ ಯಾವುದೋ ಖಾಯಿಲೆಯಿಂದ ಬಳಲಿ ದಿನಾಂಕ:14-03-2013 ರಂದು ರಾತ್ರಿ ವೇಳೆಯಲ್ಲಿ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕಾಂತರಾಜು ಬಿನ್. ಲೇಟ್. ದಿನದಯಾಳು ನಾಯ್ಡ, ರಾಜೇಂದ್ರನಗರ, ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಗೋಪಿ ಬಿನ್. ಲೇಟ್. ದಿನದಯಾಳುನಾಯ್ಡ, ರಾಜೇಂದ್ರನಗರ, ಮೈಸೂರು ರವರು ಬೆಂಕಿಕಾಂಯಿಸುವಾಗ ಆಕಸ್ಮಿಕವಾಗಿ ಎಡಮೊಗ್ಗುಲಿಗೆ ಬಿದ್ದು ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. 380 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕೃಷ್ಣ ಬಿನ್. ಡಿ.ಮಲ್ಲಿಗೆರೆ, ಕೊಪ್ಪ ಹೋ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ವ್ಯಕ್ತಿಗಳು ಪಿರ್ಯಾದಿಯವರ ಮನೆಯ ಬೀರು ಮೇಲಿದ್ದ ಕೀ ತೆಗೆದು ಬೀರುವಿನಲ್ಲಿದ್ದ 8ಗ್ರಾಂ ಮುತ್ತಿನ ಓಲೆ, 30ಗ್ರಾಂ ಚಿನ್ನದ ಮಾಂಗಲ್ಯದ ಚೈನು, 15ಗ್ರಾಂ ಚಿನ್ನದ ಒಂದೆಳೆ ಸರ, ಒಂದು ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 54/13 ಕಲಂ. 379 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ತೀರ್ಥ ಬಿನ್. ನಿಂಗಪ್ಪ, 40 ವರ್ಷ, ಬೆಳ್ಳೂರು ಕ್ರಾಸ್ ರವರು ನೀಡಿದ ದೂರಿನ ವಿವರವೇನೆಂದರೆ ಈಗ್ಗೆ ಸುಮಾರು 6 ತಿಂಗಳ ಹಿಂದೆ ಪಿರ್ಯಾಧಿಯವರ ಬಾಬ್ತು ಕೆ.ಎ-54-ಇ-0327 ಬಜಾಜ್ ಪ್ಲಾಟೀನ ಮೋಟರ್ ಬೈಕ್ ನ್ನು, ಮನೆಯ ಮುಂದೆ ನಿಲ್ಲಿಸಿದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 379 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಚಿಕ್ಕತಾಯಮ್ಮ ಕೋಂ ಮಹದೇವಯ್ಯ, ತಾಳೆಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಬಳಿ ಇಟ್ಟಿದ್ದ ಒಂದು ಕಂಚಿನ ಹಂಡೆ, 20 ಕೋಳಿಗಳು, 1 ಟಾಪರ್ಾಲಿನ್, 10 ಮೂಟೆ ಭತ್ತ ಹಾಗೂ ಇತರೆ ಸಾಮಾನುಗಳನ್ನು ಕಳ್ಳತನ ಮಾಡಿರುತ್ತಾರೆ ಇವರುಗಳ ಬೆಲೆ 14,450/- ರೂಗಳಾಗಿರುತ್ತೆ ಇವುಗಳನ್ನು ಕಳ್ಳತನ ಮಾಡಿರುವವರು ನಮ್ಮ ಗ್ರಾಮದ ನಾಗ & ಕೃಷ್ಣ ಎಂಬುವವರ ಮೇಲೆ ಅನುಮಾನವಿರುತ್ತೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 498(ಎ)- 506  ಐ.ಪಿ.ಸಿ.

     ದಿನಾಂಕ: 15-03-2013 ರಂದು ಪಿರ್ಯಾದಿ ರಂಜಿತಾ ಎಂ.ಕೆ. ಬಿನ್. ಕೃಷ್ಣಪ್ಪ, 3 ನೇ ಕ್ರಾಸ್, ತಾವರೆಗೆರೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು 1) ಗುರುಸ್ವಾಮಿ ಬಿನ್ ಶ್ರೀನಿವಾಸ್ ರಾಮನಗರ ಟೌನ್ ಹಾಗು 2) ಭಾಗ್ಯ ಕಾರಿನಲ್ಲಿ ನಮ್ಮ ಮನೆಯ ಹತ್ತಿರ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನು ಯಾವುದಾದರು ರೀತಿಯಲ್ಲಿ ಕೊಲೆ ಮಾಡಿ ಸಾಯಿಸಿ ಮದುವೆ ವೇಳೆಯಲ್ಲಿ ಕೊಟ್ಟಿರುವ ನನ್ನ ವಡವೆಗಳು ಹಾಗು ಖರ್ಚು ಮಾಡಿರುವ ಹಣವನ್ನು ವಾಪಸ್ಸು ಪಡೆದುಕೊಳ್ಳತ್ತೇನೆ ಎಂದು ಬೆದರಿಕೆ ಹಾಕಿ ನನಗೆ ಮಾನಸಿಕವಾಗಿ ಕಿರುಕುಳುಕೊಡುತ್ತಿರುತ್ತಾರೆ ಹಾಗು ಕೊಲೆ ಬೆದರಿಕೆ ಸಹಾ ಹಾಕಿರುತ್ತಾನೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಹಣ ದುರುಪಯೋಗ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 408-409 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕೆ.ಸುರೇಂದ್ರ ಹೆಗಡೆ, ಮ್ಯಾನೇಜರ್, ವಿಜಯಾ ಬ್ಯಾಂಕ್, ಮೈಸೂರು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಶಿವಣ್ಣ ಹಾಗೂ ಇತರೆ 6 ಜನ ವಿಜಯಾ ನೌಕರರು ವಿಜಯಾ ಬ್ಯಾಂಕಿನಲ್ಲಿ ಎಲ್.ಐ.ಸಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬ್ಯಾಂಕಿನ ಕೆಲಸಗಾರರು 5 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡು ಬ್ಯಾಂಕಿಗೆ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. 302 ಐ.ಪಿ.ಸಿ.

       ದಿನಾಂಕ: 15-03-2013 ರಂದು ಪಿರ್ಯಾದಿ ಶಿವ ಬಿನ್. ಮಾರಯ್ಯ,  32 ವರ್ಷ,  ಕೂಲಿ ಕೆಲಸ,  ಆಲಭುಜನಹಳ್ಳಿ ಗ್ರಾಮ, ಮದ್ದೂರು ತಾಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಈಕೆಯ ಗಂಡ ಕರಿಯಪ್ಪ ಬಿನ್ ಲೇ; ಪೋತ್ತಯ್ಯ, 45ವರ್ಷ, ಗಂಗಾಮತ ಜನಾಂಗ, ಗಾರೆ ಕೆಲಸ, ವಾಸ ಕನಲಿ ಗ್ರಾಮ, ಮಂಡ್ಯ. ತಾಲೊಕು ರವರು ತನ್ನ  ಪತ್ನಿಯ  ಶೀಲದ ಬಗ್ಗೆ ಶಂಕಿಸಿ ಈ  ಕಾರಣದಿಂದ  ಆಗಾಗ್ಗೆ  ಅವಳಿಗೆ ಗಲಾಟೆ  ಮಾಡಿ ಹೊಡೆದು ಮನೆಯಿಂದ  ಹೊರಗೆ ಹಾಕಿದ್ದು ಈ ಬಗ್ಗೆ  ನಮ್ಮ  ತಂದೆ  ಗ್ರಾಮದ  ಮುಖಂಡರ ಮೂಲಕ  ನನ್ನ  ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟು ಬಂದಿದ್ದು  ಮೇಲ್ಕಂಡ  ಕಾರಣದಿಂದ  ದಿನಾಂಕಃ-15-03-2013  ರಂದು  ಮದ್ಯಾಹ್ನ  12-30 ರಿಂದ 02-00 ಗಂಟೆಯ  ಸಮಯದಲ್ಲಿ  ತಮ್ಮ ಭಾವ  ಆತನ ಹೆಂಡತಿ ಜ್ಯೋತಿ ಮನೆಯಲ್ಲಿ  ಮಲಗಿರುವಾಗ ಆಕೆಯ ಕತ್ತನ್ನು  ಚಾಕುವಿನಿಂದ ಕೂಯ್ದು  ಕೊಲೆ ಮಾಡಿರುತ್ತಾನೆಂದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಜರೂರು ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 363 ಕೂಡ 34 ಐ.ಪಿ.ಸಿ.

       ದಿನಾಂಕ: 15-03-2013 ರಂದು ಪಿರ್ಯಾದಿ ಗೋಸೇಗೌಡ ಬಿನ್. ತಿಮ್ಮೇಗೌಡ ಪಿ. ಹೊಸಹಳ್ಳಿ ಗ್ರಾಮ, ಶ್ರೀ ರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಯದುಕುಮಾರ ಇತರೆ ಇಬ್ಬರು, ಎಲ್ಲೂರು ಪಿ.ಹೊಸಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರುಗಳು ಪಿರ್ಯಾದಿಯವರ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 14-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ವಾಹನ/ಸಾಮಾನ್ಯ ಕಳವು ಪ್ರಕರಣಗಳು, 1 ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ,   2 ಯು.ಡಿ.ಆರ್. ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ರಾಬರಿ ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

 
ವಾಹನ/ಸಾಮಾನ್ಯ ಕಳವು ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 379 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಚಿಕ್ಕೇಗೌಡ ಬಿನ್ ನಂಜೇಗೌಡ, ಕಡಿಲುವಾಗಿಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:13-03-2013ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಹತ್ತಿರ ಇಟ್ಟಿದ್ದ ಜನರೇಟರ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 75/13 ಕಲಂ. 379 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಬಿ.ರಾಮು ಬಿನ್. ಬೋರೆಗೌಡ, ಹೇಮಾವತಿ ಬಡಾವಣೆ, ಕೆ.ಆರ್.ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಬಾಬ್ತು ಹೀರೊ ಹೊಂಡಾ ಸ್ಪಂಡರ್ ಪ್ಲಸ್, ಮೋಟಾರ್ ಸೈಕಲ್ ನಂ. ಕೆಎ-54-ಇ-631 ರ ಬೈಕನ್ನು ನಿಲ್ಲಿಸಿ ಅಂಗಡಿ ಸಾಮಾನು ತರಲು ಹೋಗಿದ್ದು ಅರ್ಧಗಂಟೆ ನಂತರ ಬಂದು ನೋಡಲಾಗಿ ಯಾರೋ ನನ್ನ ಮೋಟಾರ್ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 379 ಐ.ಪಿ.ಸಿ.

ದಿನಾಂಕಃ 14-03-2013 ರಂದು ಫಿಯರ್ಾದಿಯವರು ನಾಗಮಂಗಲದ ಎಸ್.ಬಿ.ಎಂ. ನಿಂದ 4,00,000-00 ರೂ.ಗಳನ್ನು ಡ್ರಾಮಾಡಿಕೊಂಡು ತಮ್ಮ ಆಕ್ಟಿವ್ ಹೋಂಡಾ ಸ್ಕೂಟರ್ನ ಸೀಟ್ ಕೆಳಗಿನ ಲಾಕರ್ನಲ್ಲಿ ಇಟ್ಟು, ರಾಮದೇವ ಬ್ಯಾಂಕರ್ಸ್ ಅಂಗಡಿಯ ಒಳಗಡೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಫಿಯರ್ಾದಿಯವರ ಸ್ಕೂಟರ್ನ ಸೀಟನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, 4,00,000-00 ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬುದು ದೂರಿನ ಸಾರಾಂಶವಾಗಿರುತ್ತೆ.


4. ಮದ್ದೂರು ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 379 ಐ.ಪಿ.ಸಿ. 

ದಿನಾಂಕ: 14-03-2013 ರಂದು ಸುರೇಶ ಬಿನ್. ನೀಲಕಂಠನಹಳ್ಳಿ, ನಗರಕೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:10-03-2013 ರಂದು ಅರುವನಹಳ್ಳಿ ಬೀರೆಶ್ವರ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕೆಎ11-ಜೆ-2914  ಮೋಟಾರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಬೆಲೆ ಸುಮಾರು 20.000/- ರೂ ಗಳಾಗಿರುತ್ತೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 9, 39, 40, 44, 49, 50, 51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972.

ದಿನಾಂಕ: 14-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ., ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ  ಆರೋಪಿಗಳಾದ 1] ಕಲ್ಲುಸಕ್ಕರೆ ಬಿನ್.ಧನಕೋಟಿರಾವ್, 35 ವರ್ಷ, ಮತ್ತು 2] ಕಾಶಿರಾಮ್ ಬಿನ್ ಗಣೇಶ ರವರುಗಳು ಕಾಡು ಗೌಜಲಕ್ಕಿಗಳನ್ನು ಹಿಡಿದು, ಅವುಗಳನ್ನು ಸಾಯಿಸಿ, ಅವುಗಳ ಚರ್ಮ ಸುಲಿದು, ಮಾಂಸವನ್ನು ಮಾರಾಟಮಾಡುತ್ತಿದ್ದಾಗ, ಅವರುಗಳನ್ನು ಫಿರ್ಯಾದಿ ಹಾಗೂ ಪಂಚರೊಡನೆ ಸುತ್ತುವರಿದು ಹಿಡಿಯಲು ಹೋದಾಗ ಆರೋಪಿ -2 ರವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಆರೋಪಿ-1 ರವರನ್ನು ಮತ್ತು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕಾಡು ಗೌಜಲಕ್ಕಿಗಳ ಮಾಂಸವನ್ನು ಠಾಣೆಗೆ ತಂದು ಸ್ವಯಂ ವರದಿ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.


ಯು.ಡಿ.ಆರ್. ಪ್ರಕರಣಗಳು :

1.ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ರಾಮಚಂದ್ರೇಗೌಡ.ಕೆ, ಹೊಸೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗ ಕಿರಣ್ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಆಗಿ ಅವನ ಕತ್ತಿನ ಬಳಿ ಪೆಟ್ಟಾಗಿದ್ದ ನನ್ನ ಮಗ ಕಿರಣನನ್ನು  ನೋಡಿದ ಉಮೇಶ ಎಂಬುವವನು ಬಿಡಿಸಲು ಹೋದ ಉಮೇಶನಿಗೆ ಕರೆಂಟ್ ಹೊಡೆದಿದ್ದು. ಈ ಶಬ್ದ ಕೇಳಿದ     ಜನರು ನಾವು ಎಲ್ಲರೂ ಹೋಗಿ ನೋಡಿ ಕೆ.ಇ.ಬಿ. ಯವರಿಗೆ ಹೇಳಿ ವಿದ್ಯುತ್ ಆಪ್ ಮಾಡಿಸಿ ಹೋಗಿ ನೋಡಲಾಗಿ ತನ್ನ ಮಗ ಕಿರಣ್ ಸತ್ತು ಹೋಗಿದ್ದು ಪೆಟ್ಟಾಗಿದ್ದ ಉಮೇಶನನ್ನು ಆಸ್ಪತ್ರೆಗೆ ಸೇರಿಸಿರುತ್ತೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಕುಮಾರ ಬಿನ್. ಶಿವಣ್ಣ, 32 ವರ್ಷ, ನೆಲಮನೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 13-03-2013 ರಂದು ರಾತ್ರಿ 09-15 ರಾತ್ರಿ ಆಕಸ್ಮಿಕವಾಗಿ  11 ಕೆವಿ,  ವಿದ್ಯುತ್  ಲೈನ್ ಕಟ್ಟಾಗಿ ಬಿದ್ದು  ಪಿರ್ಯಾದಿಯವರ ತಾಯಿ ಸಾಕಮ್ಮ  ಕೋಂ. ಶಿವಣ್ಣ, 50 ವರ್ಷ, ನೆಲಮನೆ ಗ್ರಾಮ ರವರ ಮೇಲೆ ಬಿದ್ದು ಅವರ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279 304(ಎ) ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಪಂಚಲಿಂಗೇಗೌಡ ಬಿನ್ ಲೇಟ್. ಲಿಂಗೇಗೌಡ, ಡಿ.ಕೆ.ಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಡಿ.ಕೆ.ಶಿವಕುಮಾರ್ ಗಾಡಿ ಸಮೇತ ಕೆಳಗೆ ಬಿದ್ದಾಗ ಶಿವಕುಮಾರನಿಗೆ ಬಲಕೈ ಮುರಿದಿದ್ದು, ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು ದಿನಾಂಕ: 05-03-2013 ರಂದು 05-45 ಗಂಟಿಯಲ್ಲಿ ಚಂದೂಪುರ ಪಕ್ಕದ  ಶನಿದೇವರ ದೇವಸ್ಥಾನದ ಪಕ್ಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈ ದಿವಸ ದಿನಾಂಕಃ 14-03-2013 ರಂದು ಬೆಳಿಗ್ಗೆ 08-15 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 125/13 ಕಲಂ. 395 ಐ.ಪಿ.ಸಿ.

ದಿನಾಂಕ: 14-03-2013 ರಂದು ಪಿರ್ಯಾದಿ ಪ್ರತಾಪ ಬಿನ್. ಮೋಹನ ರಾವ್, ಮಂಡಿ ಮೊಹಲ್ಲಾ, ಮೈಸೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮೈಸೂರಿಗೆ ಹೋಗುವಾಗ ಅಪರಿಚಿತ 6 ಜನ ಆಸಾಮಿಗಳು ಪಿರ್ಯಾದಿಯವರನ್ನು  ತಡೆದು ಹೆದರಿಸಿ ಚಾಕುವನ್ನು ತೋರಿಸಿ ಕೈಗಳನ್ನು  ಹಿಡಿದುಕೊಂಡು ಜೇಬಿನಲ್ಲಿದ್ದ 38000/- ರೂ ಹಣ ಹಾಗೂ ಸುಮಾರು 6. 1/2 ಗ್ರಾಂ ತೂಕದ ಚಿನ್ನದ ಉಂಗುರ  ಇದರ ಅಂದಾಜು ಒಟ್ಟು ಬೆಲೆ 58.000/- ಗಳಾಗಿರುತ್ತೆ ಇವುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.