Moving text

Mandya District Police

Press Note Date: 15-10-2011

ಪತ್ರಿಕಾ ಪ್ರಕಟಣೆ

1. ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 150/2011 ಕಲಂ 3 Cl (10) SC/ST Act, 1989 ಕೂಡ 143-427-504-114-506 ಕೂಡ 149 ಐಪಿಸಿ

ದಿನಾಂಕ:08-09-2011 ರಂದು ರಾತ್ರಿ ನಾಗಮಂಗಲ ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಗಣೇಶ ಉತ್ಸವಕ್ಕೆ ತಮಟೆ ಬಡಿಯಲಿಲ್ಲವೆಂಬ ವಿಚಾರಕ್ಕೆ ಸವರ್ಣೀಯರ ಮತ್ತು ಪರಿಶಿಷ್ಠ ಜನಾಂಗದವರ ನಡುವೆ ಉಂಟಾಗಿದ್ದ ಮನಸ್ತಾಪದ ವಿಚಾರದಲ್ಲಿ ಹಾಗೂ ದಿನಾಂಕ:05-10-2011 ರಂದು ರಾತ್ರಿ ಅದೇ ಗ್ರಾಮದ ಪರಿಶಿಷ್ಠ ಜನಾಂಗದವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದ ವಿಚಾರದಲ್ಲಿ ಕಸುವಿನಹಳ್ಳಿ ಗ್ರಾಮದ ಶಿವರಾಜು ಎಂಬುವವರು ದಿನಾಂಕ:10-10-2011 ರಂದು ನೀಡಿದ ದೂರಿನ ಮೇರೆಗೆ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ದಿನಾಂಕ:13-10-2011 ರಂದು ಈ ಕೆಳಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಶಿವಣ್ಣ @ ಶಿವರಾಮು ಬಿನ್ ಲೇ|| ದ್ಯಾವರೇಗೌಡ, 48 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
2. ಹಲಗೇಗೌಡ ಬಿನ್ ಲೇ|| ಕರೀಗೌಡ, 70 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.
3.ನಿಂಗಮ್ಮ ಕೋಂ ಲೇ|| ಜವರಯ್ಯ ಉ ಜವರೇಗೌಡ, ವಕ್ಕಲಿಗರು, ಕಸುವಿನಹಳ್ಳಿ ಗ್ರಾಮ.

ಮೇಲ್ಕಂಡ ಆರೋಪಿಗಳು ದಿನಾಂಕ:13-10-2011 ರಂದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುತ್ತಾರೆ.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇನ್ನುಳಿಕೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.
1.ಎಂ.ಕೃಷ್ಣಪ್ಪ ಬಿನ್ ಲೇ|| ಮುದ್ದೇಗೌಡ, 57 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
2.ಪುಟ್ಟಪ್ಪ ಬಿನ್ ಲೇ|| ಕಾಳೇಗೌಡ, 68 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
3.ಕೆ.ಪಿ.ಪಾಪೇಗೌಡ ಬಿನ್ ಲೇ|| ಕಾಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
4.ತೂಬಿನಕೆರೆ ವೆಂಕಟೇಶ ಬಿನ್ ತಿಮ್ಮೇಗೌಡ, 40 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
5.ಕೆ.ಎಂ.ಪುಟ್ಟೇಗೌಡ ಬಿನ್ ಮಾಯಣ್ಣ, 40 ವರ್ಷ, ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
6.ಮಂಜ @ ಕೆ.ಪಿ.ಮಂಜೇಗೌಡ ಬಿನ್ ಜಿ.ಪುಟ್ಟೇಗೌಡ,31 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು
7. ರಮೇಶ ಬಿನ್ ಲೆ|| ಮಾಯಣ್ಣ, 39 ವರ್ಷ,ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು.
8. ಅಕ್ಕಮ್ಮ ಕೋಂ ಲೇ|| ಮೆಡ್ಡಣ್ಣ @ ಚಿಕ್ಕ್ಕಮಾಯಣ್ಣ, 60 ವರ್ಷ, ವಕ್ಕಲಿಗರು, ವ್ಯವಸಾಯ, ಕಸುವಿನಹಳ್ಳಿ ಗ್ರಾಮ.ನಾಗಮಂಗಲ ತಾಲ್ಲೂಕು

ಸದರಿ ಪ್ರಕರಣದಲ್ಲಿ ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.

2. ಕಿರುಗಾವಲು ಪೊಲೀಸ್ ಠಾಣೆಯ ಮೊ.ಸಂ,118/2011 ಕಲಂ 341-324 ಕೂಡ 34 ಐಪಿಸಿ ಮತ್ತು 3 ಕ್ಲಾಸ್ (1) (X) ಎಸ್.ಟಿ/ಎಸ್.ಸಿ ಆಕ್ಟ್ 1989

ದಿನಾಂಕ:09-10-2011 ರಂದು ಸಂಜೆ ಕಿರುಗಾವಲು ಗ್ರಾಮದ ಶ್ರಂಗಾರ ಹೇರ್ ಡ್ರೆಸಸ್ ಸೆಲೂನ್ ನಲ್ಲಿ ಅದೇ ಗ್ರಾಮದ ಪರಿಶಿಷ್ಠ ಜನಾಂಗಕ್ಕೆ ಸೇರಿದ ಚಿಕ್ಕಮಂಚಯ್ಯ ಬಿನ್ ಲೇ|| ಪುಟ್ಟಮಂಚಯ್ಯನು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದಾಗ ಅಂಗಡಿ ಮಾಲೀಕರಾದ ಮರಿ ಬಿನ್ ಲೇ|| ಸಿದ್ದಯ್ಯ ಮತ್ತು ಆತನ ಮಗನಾದ ಮಹಾದೇವ ಇವರಿಬ್ಬರೂ ಕ್ಷೌರ ಮಾಡುವ ವಿಚಾರದಲ್ಲಿ ಜಗಳ ತೆಗದು, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣದಲ್ಲಿ ಈ ದಿನ ದಿನಾಂಕ:15-10-2011 ರಂದು ಈ ಕೆಳಕಂಡ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
1. ಮರಿ ಬಿನ್ ಲೇ|| ಸಿದ್ದಯ್ಯ, 72 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.
2. ಮಹಾದೇವ ಬಿನ್ ಸಿದ್ದಯ್ಯ, 32 ವರ್ಷ, ನಯನಕ್ಷತ್ರಿಯ ಜನಾಂಗ, ವಾಸ ಕಿರುಗಾವಲು.

ಕಿರುಗಾವಲು ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

No comments:

Post a Comment