Moving text

Mandya District Police

Raid On 18-07-2011

ಕೆರಗೋಡು ಪೊಲೀಸ್ ಠಾಣೆ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 18-07-11 ರಂದು 00-15 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಪೊಲೀಸ್ ಠಾಣೆಯ ಸರಹದ್ದಿನ ಆಲಕೆರೆ ಗ್ರಾಮದ ಚನ್ನಬಸಣ್ಣನವರ ಮನೆಯ ಮುಂದೆ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 277 ಗುರುಸ್ವಾಮಿ ಎಂ.ಎಸ್ , ಸಿ.ಹೆಚ್.ಸಿ 04 ಎಂ ಮಾದಯ್ಯಮ ಮತ್ತು ಸಿಪಿಸಿ ರಮೇಶ, ಅರಸು, ಬಾಬು,ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 7.700 ರೂ ಹಣ, 4 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 2 ದ್ವಿಚಕ್ರ ವಾಹನ, 1 ಮಾರುತಿ ಕಾರ್ ಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಶಿವರಾಜು ಮತ್ತು ಇತರರೆ 7 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

No comments:

Post a Comment