Moving text

Mandya District Police

Property Parade Press Meet On 31-07-2011


ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011 ಏಪ್ರಿಲ್, ಮೇ ಮತ್ತು ಜೂನ್ ಮಾಹೆ) ವರದಿಯಾದ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿಅಂಶಗಳು.


ವರದಕ್ಷಿಣೆ ಕಿರುಕುಳ ಪ್ರಕರಣಗಳು - 22
ಮಾನಭಂಗ ಪ್ರಕರಣಗಳು - 16
ರಸ್ತೆ ಅಪಘಾತ ಪ್ರಕರಣಗಳು - 99
ಜೂಜಾಟದ ಪ್ರಕರಣಗಳು - 103
ವೇಶ್ಯಾವಾಟಿಕೆ ಪ್ರಕರಣಗಳು - 4

ಮೇಲ್ಕಂಡ ಅಪರಾಧ ಶೀರ್ಷಿಕೆಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ : ರೂ 1,53,41,980/- (ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು, ವಾಹನಗಳು, ಮೊಬೈಲ್ ಹಾಗೂ ಇತರೆ)

ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ : ರೂ. 39,36,126/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ : ರೂ. 22,21,726/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)

ಇದೇ ಅವಧಿಯಲ್ಲಿ ಕಳವು ಪ್ರಕರಣಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 5 ಸಿಪಿಐ, 18 ಪಿಎಸ್ಐ, 15 ಎಎಸ್ಐ, 16 ಹೆಚ್.ಸಿ ಮತ್ತು 141 ಪಿಸಿ ರವರುಗಳಿಗೆ ` 29,235/- ನಗದು ಬಹುಮಾನ ನೀಡಲಾಗಿದೆ.

ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 52 ಅಪಘಾತ ಪ್ರಕರಣಗಳು , 5 ಕಳವು ಪ್ರಕರಣಗಳು, 12 ಕೆ.ಪಿ.ಕಾಯ್ದೆ ಮತ್ತು 1 ಕೊಲೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.

ಈ 3 ತಿಂಗಳ ಅವಧಿಯಲ್ಲಿ 5 ಹಲ್ಲೆ, 1 ಅಪಘಾತ, 5 ವರದಕ್ಷಿಣೆ ಕಿರುಕುಳ, 2 ಎಸ್.ಸಿ/ಎಸ್.ಟಿ, 1 ಕೊಲೆ, 7 ಕಳವು, ಮತ್ತು 1 ಅಪಹರಣ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆಯಾಗಿರುತ್ತದೆ.

ಇದೇ ಅವಧಿಯಲ್ಲಿ 21 ಹಲ್ಲೆ, 3 ಕಳವು, 5 ಅಪಘಾತ, 1 ವರದಕ್ಷಿಣೆ ಕಿರುಕುಳ, 1 ದರೋಡೆ ಪ್ರಯತ್ನ ಮತ್ತು 1 ಎಸ್.ಸಿ./ಎಸ್.ಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತದೆ.









Raid On 23-07-2011

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಮೊ,ಸಂ 221/11 ಕಲಂ 79-80 ಕೆಪಿ ಕಾಯಿದೆ

ದಿನಾಂಕ 22-07-11 ರಂದು ಪಿರ್ಯಾದಿ ಎಸ್, ಹೆಚ್ ವಸಂತ ಪಿಎಸ್ಐ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಂಡ್ಯದ ಸಿಟಿ ಕ್ಲಬ್ ನಲ್ಲಿ ಕೆಲವರು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸದಿರಿ ಮಾಹಿತಿಯನ್ನು ಮಾನ್ಯ ಡಿ,ಎಸ್,ಪಿ ಮಂಡ್ಯ ಉಪ-ವಿಭಾಗ ರವರಿಗೆ ತಿಳಿಸಿ ಅವರಿಂದ ಅನುಮತಿ ಪಡೆದು ಸಿಬ್ಬಂದಿಗಳೊಡನೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿಗಳಾದ ಎಂ.ವಿ. ನಾಗರಾಜು ಮತ್ತು ಇತರೆ 9 ಜನರನ್ನು ಬಂಧಿಸಿ ಮತ್ತು ಸದರಿಯವರಿಂದ 1.59.565 /- ರೂಗಳನ್ನು ವಶಪಡಿಸಿಕೊಂಡಿರಿತ್ತೆ

Raid On 18-07-2011

ಕೆರಗೋಡು ಪೊಲೀಸ್ ಠಾಣೆ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 18-07-11 ರಂದು 00-15 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಪೊಲೀಸ್ ಠಾಣೆಯ ಸರಹದ್ದಿನ ಆಲಕೆರೆ ಗ್ರಾಮದ ಚನ್ನಬಸಣ್ಣನವರ ಮನೆಯ ಮುಂದೆ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 277 ಗುರುಸ್ವಾಮಿ ಎಂ.ಎಸ್ , ಸಿ.ಹೆಚ್.ಸಿ 04 ಎಂ ಮಾದಯ್ಯಮ ಮತ್ತು ಸಿಪಿಸಿ ರಮೇಶ, ಅರಸು, ಬಾಬು,ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 7.700 ರೂ ಹಣ, 4 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 2 ದ್ವಿಚಕ್ರ ವಾಹನ, 1 ಮಾರುತಿ ಕಾರ್ ಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಶಿವರಾಜು ಮತ್ತು ಇತರರೆ 7 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

Raid On 17-07-2011

ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 17-07-11 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಂಡ್ಯ ತಾಲ್ಲೋಕು ಕೂಲಕಾರನದೊಡ್ಡಿ ಗ್ರಾಮದ ಚಿಕ್ಕಮೊಗಣ್ಣನವರ ಕಬ್ಬಿನ ಗದ್ದೆಯ ಪಕ್ಕದ ಗಾಡಿ ಜಾಡು ರಸ್ತೆಯಲ್ಲಿ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ರಮೇಶ, ಅರಸು ಮತ್ತು ಬಾಬು, ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 13.820 ರೂ ಹಣ, ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 4 ದ್ವಿಚಕ್ರ ವಾಹನಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಪುಟ್ಟರಾಜು ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 17-07-11 ರಂದು ಮಧ್ಯಾಹ್ನ 18-30 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಎ.ಆರ್ ವೆಂಕಟೇಶ ಮೂರ್ತಿ ಸಿ.ಪಿ.ಐ ಶ್ರೀರಂಗಪಟ್ಟಣ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಶ್ರೀರಂಗಪಟ್ಟಣ ಟೌನ್ ಪ್ರವಾಸಿ ಮಂದಿರದ ಹಿಂಭಾಗ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 34500 ರೂ ಹಣ, ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಸಂತೋಷ ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

press Note Dated: 16-07-2011.

Press Note Dated: 15-07-2011.

Raid On 09-07-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ, 474/11 ಕಲಂ 79-80 ಕೆ.ಪಿ ಕಾಯಿದೆ

ದಿನಾಂಕ 10-07-11 ರಂದು ಪಿರ್ಯಾದಿ ಶ್ರೀ ಎ.ಆರ್. ವೆಂಕಟೇಶ ಮೂರ್ತಿ ಸಿ.ಪಿಐ ಶ್ರೀರಂಗಪಟ್ಟಣ ವೃತ್ತ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ಶ್ರೀರಂಗಪಟ್ಟಣದ ಐ.ಬಿ ಗೆ ಹೋಗಿ ದಾಳಿಮಾಡಲಾಗಿ ಆರೋಪಿಗಳಾದ ಶಿವಕುಮಾರ ಮತ್ತು ಇತರೆ 8 ಜನರು ಒಂದು ರೂಂ ನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಎಂಬ ಜೂಜಾಟ ಆಡುತ್ತಿದ್ದವರನ್ನು ಹಿಡಿದ್ದು ಠಾಣೆಗೆ ಕರೆತಂದು ಕೇಸು ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮತ್ತು ಸದರಿಯವರಿಂದ 47.500/- ರೂ ಗಳನ್ನು ವಶಪಡಿಸಿಕೊಂಡಿರುತ್ತೆ

Press note 09-07-2011


ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಒಬ್ಬ ದ್ವಿಚಕ್ರ ವಾಹನ ಕಳ್ಳನ ಬಂಧನ

ಮಂಡ್ಯ ನಗರ, ಮಳವಳ್ಳಿ ಟೌನ್ ಮತ್ತು ಬನ್ನೂರು ಟೌನ್ [ ಮೈಸೂರು ಜಿಲ್ಲೆ] ಕಡೆಗಳಲ್ಲಿ ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯಾದ ಮಹದೇವ @ ಎಡಚ ಬಿನ್ ಲೇಟ್ ಮಹಲಿಂಗಪ್ಪ 45 ವರ್ಷ ಹರಳಹಳ್ಳಿ ಗ್ರಾಮ ಮದ್ದೂರು ತಾಲ್ಲೋಕು ಈತನು ಕೊಲೆ ಕೇಸಿನಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ದಿನಾಂಕ 10-04-2011 ರಂದು ಬಿಡುಗಡೆಯಾಗಿದ್ದು ಈತನು ಮಣಿಕಂಠ ಗರೀಭಿ ಸೈಟ್ ನಿವಾಸಿ ಮಾದರಹಳ್ಳಿ ಗ್ರಾಮ ಮದ್ದೂರು ತಾಲ್ಲೋಕು ನೊಂದಿಗೆ ಜೊತೆ ಗೂಡಿ ನಕಲಿ ಬಳಿ ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೋಕು, ಕಿರುಗಾವಲು ಹೋಬಳಿ, ಭೀಮನಹಳ್ಳಿ. ಮಾಗನಹಳ್ಳಿ, ರಾಮನಾಥಮೊಳೆ ಈಗೆ ಹಲವಾರು ಕಡೆ ಒಟ್ಟು 19 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದವನು, ಶ್ರೀ ಕಾಂತರಾಜು ವೃತ್ತ ನಿರೀಕ್ಷಕರ ಮಂಡ್ಯ ನಗರ ವೃತ್ತ ಮಂಡ್ಯ ಮತ್ತು ಶಿವರಾಜು ಪೊಲೀಸ್ ಪಿ.ಎಸ್.ಐ ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರ ಮತ್ತು ಸಿಬ್ಬಂದಿಗಳ ದೊರೆತ ಖಚಿತ ಮಾಹಿತಿಯ ಮೇರೆಗೆ ಆರೋಪಿ ಮಹದೇವ @ ಎಡಚ ಬಿನ್ ಲೇಟ್ ಮಹಲಿಂಗಪ್ಪನನ್ನು ಬಂಧಿಸಿ ಆತನ ಬಳಿ ಇದ್ದ 8 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ವಾಹನವನ್ನು ವಶಪಡಿಸಿಕೊಂಡು, ಸದರಿ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿರುತ್ತೆ, ಹಾಗೂ ಮತ್ತೋಬ್ಬ ಆರೋಪಿಯಾದ ಮಣಿಕಂಠ ಮದ್ದೂರು ಗರೀಭಿ ಸೈಟಿ ನಿವಾಸಿ ಈತನು ಇನ್ನೂ ದಸ್ತಗಿರಿಯಾಗಿರುವುದಿಲ್ಲ,

ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಮಾನ್ಯ ಎಸ್.ಪಿ. ಸಾಹೇಬರು ಮಂಡ್ಯ ಜಿಲ್ಲೆ, ಮಂಡ್ಯ ಮತ್ತು ಅಫಾರ ಜಿಲ್ಲೆ ಪೊಲೀಸ್ ವರಿಷ್ಠರು ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ,

ಕಳುವಾದ 19 ಟಿ.ವಿ.ಎಸ್. ಎಕ್ಸ್, ಎಲ್ ಮೊಪೆಡ್ ಗಳಲ್ಲಿ 11 ದ್ವಿಚಕ್ರ ವಾಹನದ ಮಾಲಿಕರಿಗೆ ಹಿಂದಿರುಗಿಸಲಾಗಿದ್ದು. ಇನ್ನಳಿದ 8 ವಾಹನಗಳ ಮಾಲಿಕರು ಪತ್ತೆಯಾಗ ಬೇಕಾಗಿದೆ, ಹಾಗೂ 8 ವಾಹನಗಳ ಮಾಹಿತಿ ಈ ಕೆಳಕಂಡಂತೆ ಇರುತ್ತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿಳಾಸ ಸಿ.ಪಿ.ಐ ಮಂಡ್ಯ ನಗರ ವೃತ್ತ ಫೋನ್ ನಂ 08232-223132, ಮಂಡ್ಯ ಪೂರ್ವ ಪೊಲೀಸ್ ಠಾಣೆ ನಂ 08232-224777, ಮತ್ತು ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಂ ನಂ 08232-224888




Type of Vehicle Chassis NO Engine NO
TVS XL Super Moped P1010f349361 P1010M344468
TVS XL Super Moped MD621BD1452B03059 OD1B51337198
TVS XL Super Moped P3307F790941 P1307M798885
TVS XL Super Moped P1302F712909 P1302M709481
TVS XL Super Moped P1203F561183 P1203M557560
TVS XL Super Moped P3204F571660 P1204M570471
TVS XL Super Moped MD621AD1441H16636 OD1H41203714
TVS XL Super Moped MD621AD1052L69007 OD1L51521241


Raid On 07-07-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಂ 113/11 ಕಲಂ 87 ಕೆ.ಪಿ. ಕಾಯಿದೆ

ದಿನಾಂಕ 07-07-11 ರಂದು ಸಂಜೆ 04-00 ಗಂಟೆಯಲ್ಲಿ ಬೆಳಗೊಳ ಗ್ರಾಮದ ಸರ್ವದರ್ಮ ಆಶ್ರಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮೇಲ್ಬಾಗಕ್ಕಾದಂತೆ ಪಾಳು ಬಿದ್ದಿರುವ ಸ್ಥಳದಲ್ಲಿ ಆರೋಪಿಗಳಾದ ಸಮೀಉಲ್ಲಾ ಖಾನ್ ಮತ್ತು ಇತರೆ 4 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಇಸ್ಟೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ಪಿರ್ಯಾದಿ ಸಿ.ಪಿ.ಐ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ದಾಳಿ ಮಾಡಿ 24.980 ರೂಗಳನ್ನು ವಶಪಡಿಸಿಕಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತೆ

Daily Crime Report Date: 05-07-2011

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 21 ಪಕ್ರಣಗಳು ವರದಿಯಾಗಿ ಅದರಲ್ಲಿ 2 ಕಳ್ಳತನ ಪ್ರಕರಣ, 1 ಹೆಂಗಸು ಕಾಣೆಯಾಗಿದ್ದಾಳೆ, 2 ಯು.ಡಿ.ಆರ್ ಪ್ರಕರಣ, 1 ಮಾನಭಂಗ ಪ್ರಕರಣ 1 ಎಸ್,ಸಿ/ ಎಸ್,ಟಿ ಕಾಯಿದೆ ಪ್ರಕರಣ ಮತ್ತು 14 ಇತರೆ ಪ್ರಕರಣಗಳು

ಕಳ್ಳತನ ಪ್ರಕರಣ
ಬಿಂಡಿಗನವಿಲೆ ಪೊಲೀಸ್ ಠಾಣೆ
1] ಮೊಸಂ 52/11 ಕಲಂ 457-380 ಐಪಿಸಿ ಪಿರ್ಯಾದಿ ಶಂಕರ ಮನೆಯಲ್ಲಿ ಮಲಗಿದ್ದಾಗ ಯಾರೋ ಆರೋಪಿಗಳು ಪಿರ್ಯಾದಿಯವರ ಮನೆಗೆ ನುಗ್ಗಿ ಮಚ್ಚದ ಮೇಲಿದ್ದ ಅವರ ಬಾಬ್ತು 12 ಗ್ರಾಂ ಚನ್ನದ ಚೈನ್ ಅನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ,

ನಾಗಮಂಗಲ ಪೊಲೀಸ್ ಠಾಣೆ
2] ಮೊ,ಸಂ 124/11 ಕಲಂ 457-380 ಐಪಿಸಿ ದಿನಾಂಕ 01-07-11 ರಂದು ರಾತ್ರಿ ವೇಳೆ ಕೊಟ್ಟಿಗಯಲ್ಲಿ ಕಟ್ಟು ಹಾಕಿದ್ದ ಅವರ ಬಾಬ್ತು ಸೀಮೆ ಹಸುವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ,

ಹೆಂಗಸು ಕಾಣೆಯಾಗಿದ್ದಾಳೆ
ಕೆ,ಆರ್ ಪೇಟ್ ಗ್ರಾಮಾಂತರ ಪೊಲೀಸ್ ಠಾಣೆ
1] ಮೊ.ಸಂ 187/11 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಕಾಣೆಯಾದ ಹೆಂಗಸು ಸಾಕಮ್ಮ ರವರು ತೋಟದ ಕಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ

ಯು.ಡಿ.ಆರ್ ಪ್ರಕರಣ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ
1] ಯು.ಡಿ.ಆರ್ ನಂ 25/11 ಕಲಂ 174 ಸಿ.ಆರ್,ಪಿಸಿ ದಿನಾಂಕ 05-07-11 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವಮ್ಮ ರವರ ತಂದೆ ರಂಗಯ್ಯ ರವರು ಮನೆಯ ಬಳಿ ಇದ್ದಾಗ ಹಾವು ಕಚ್ಚಿ ಮೃತಪಟ್ಟಿರುತ್ತಾರೆ

2] ಯು.ಡಿ.ಆರ್ ನಂ 26/11 ಕಲಂ 174 ಸಿಆರ್.ಪಿ.ಸಿ ದಿನಾಂಕ 05-07-11 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಪಿರ್ಯಾದಿ ಸತ್ಯಪ್ಪ ಪೆಟ್ರೋಲ್ ಬಂಕ್ ಹಿಂಭಾಗ ಇರುವ ಖಾಲಿ ಸೈಟಿನಲ್ಲಿ ಕಾಡು ಬಾಗೆ ಮರಕ್ಕೆ ನೇಣುಹಾಕಿಕೊಂಡು ಯಾವುದೋ ಅಪರಿಚಿತ ವ್ಯಕ್ತಿ ಸುಮಾರು 50-55 ವರ್ಷ ರವರು ಮೃತಪಟ್ಟಿರುತ್ತಾನೆ

ಮಾನಭಂಗ ಪ್ರಕರಣ
ಮದ್ದೂರು ಪೊಲೀಸ್ ಠಾಣೆ
1] ಮೊ.ಸಂ 280/11 ಕಲಂ 376-417-420 ರೆ/ವಿ 34 ಐಪಿಸಿ ದಿನಾಂಕ 05-07-11 ರಂದು ಆರೋಪಿ ನಂದೀಶ ಪರಸ್ಪರ ಪ್ರೀತಿಸುತ್ತಿದ್ದು,ಈಗ್ಗೆ 3 ತಿಂಗಳ ಹಿಂದೆ ಬಂದು ದಿವಸ ಆರೋಪಿ ಯಾರು ಇಲ್ಲದ ಸಮಯದಲ್ಲಿ ಪಿರ್ಯಾದಿ ಮನೆಗೆ ಬಂದು ಪಿರ್ಯಾದಿ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದ್ದು. ಈ ವಿಚಾರವನ್ನು ಪಿರ್ಯಾದಿ ತಂದೆ ತಾಯಿಗೆ ತಿಳಿಸಿ ಪಂಚಾಯ್ತಿ ಮಾಡಲಾಗಿ, ಆರೋಪಿ ಮಧುವೆಯಾಗುವುದಾಗಿ ಹೇಳಿದ್ದು, ನಂತರದ ದಿನಗಳಲ್ಲಿ ಮದುವೆಯಾಗಬೇಕಾದರೆ 2 ಲಕ್ಷ ರೂ ವರದಕ್ಷಿಣೆ ಕೋಡಿ ಎಂದು ಬೇಡಿಕೆ ಇಟ್ಟಿರುವುದಾಗಿ ದೂರು

ಎಸ್,ಸಿ/ ಎಸ್,ಟಿ ಕಾಯಿದೆ ಪ್ರಕರಣ
ಬೆಳಕಾವಡಿ ಪೊಲೀಸ್ ಠಾಣೆ
1] ಮೊ.ಸಂ 77/11 ಕಲಂ 504-506-323 ರೆ/ವಿ 34 ಐಪಿಸಿ ಮತ್ತು 3 ಕ್ಲಾಸ್ [1] ಮತ್ತು [10] ಎಸ್.ಸಿ/ ಎಸ್.ಟಿ ಕಾಯಿದೆ , ಆರೋಪಿಗಳಾದ ಮಹದೇವ ಮತ್ತು ಇತರರೂ ಗಿಡ ಕೀಳುವ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ದೂರು