Moving text

Mandya District Police

press Note Dated: 01-06-2011.

ಪತ್ರಿಕಾ ಪ್ರಕಟಣೆ

ಇತ್ತೀಚೆಗೆ ಪಾಂಡವಪುರ ತಾಲ್ಲೋಕಿನಲ್ಲಿ ವರದಿಯಾಗಿರುವ ಕನ್ನ ಕಳವು ಮತ್ತಿತರ ಪ್ರಕರಣಗಳ ಹಿನ್ನೆಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳ ಪತ್ತೆ ಮಾಡಲು ಶ್ರೀರಂಗಪಟ್ಟಣ ಉಪ-ವಿಭಾಗದಲ್ಲಿ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ. ಕೃಷ್ನಮೂರ್ತಿ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು.

ಈ ತಂಡ ಕಾರ್ಯಪ್ರವೃತ್ತರಾಗಿ ದಿನಾಂಕ 31-05-11 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಪಾಂಡವಪುರ ತಾಲ್ಲೋಕು ದೊಡ್ಡಬ್ಯಾಡರಹಳ್ಳಿ ರೈಲ್ವೆ ಗೇಟ್ ಬಳಿ ಸಂಶಯಾಸ್ಪದವಾಗಿ ಸ್ಕೂಟರ್ ತಳ್ಳಿಕೊಂಡು ಹೋಗುತ್ತಿದ್ದ ಪ್ರಸನ್ನಕುಮಾರ್ ಉಃ ಪ್ರಸನ್ನ ಉಃ ಪಚ್ಚಿ ಬಿನ್ ಲಗಳಯ್ಯ 32 ವರ್ಷ ಶಾಂತಿನಗರ ಪಾಂಡವಪುರ ಟೌಣ್ ಎಂಬುವನನ್ನು ದಸ್ತಗಿರಿ ಮಾಡಿ ಈತನು ಕೊಟ್ಟ ಸುಳುವಿನ ಮೇರೆಗೆ ಈ ಕೆಳಕಂಡ ಕೇಸುಗಳಿಗೆ ಸಂಬಂದಪಟ್ಟ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 256/11 ಕಲಂ 379 ಐಪಿಸಿ

ದಿನಾಂಕ 24-05-11 ರ ರಾತ್ರಿ ಪಾಂಡವಪುರ ಟೌನ್ ಮಹಾತ್ನಗಾಂಧಿ ನಗರದ ಶ್ರೀ ಕೆ. ಕೃಷ್ಣಪ್ಪ ಬಿನ್ ಕೃಷ್ಣಪ್ಪ ಎಂವುವರ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ್ ಚೇತಕ್ ಸ್ಕೂಟರ್ ನಂ ಕೆಎ-02-ಎಸ್-6276 ನ್ನು ಕಳವು ಮಾಡಿಕೋಮಡು ಹೋಗಿದ್ದು ಸುಮಾರು ಐದು ಸಾವಿರ ಬೆಲೆ ಬಾಳುವ ಸ್ಕೂಟರನ್ನು ಅಮಾನತ್ತು ಪಡಿಸಿರುತ್ತಾರೆ

ಇದಲ್ಲದೆ ಸದರಿ ಆರೋಫಿ ಕೊಟ್ಟ ಸುಳುವಿನ ಮೇರೆಗೆ ಬನ್ನಘಟ್ಟ ಗ್ರಾಮದ ನಾಲೆ ಬಳಿ ಜಮೀನಿಗಳಿಗೆ ನೀರು ಹೊಡೆದುಕೊಳ್ಳಲು ಅಲವಡಿಸಿದ್ದ ಮೂರು ಪಂಪ್ ಸೆಟ್ ಮೋಟಾರ್ ಗಳನ್ನು ಅಂದರೆ 10 ಹೆಚ್.ಪಿ. ಒಂದು ಪಂಪ್ ಸೆಟ್ ಮೋಟಾರ್ ಮತ್ತು 7.5 ಹೆಚ್.ಪಿ ಯ ಎರಡು ಪಂಪ್ ಸೆಟ್ ಮೋಟಾರ್ ಗಳನ್ನು ಅಂದಾಜು 56000/- ರೂ ಬೆಲೆ ಬಾಳುವ ಪಂಪ್ ಸೆಟ್ ಮೋಟಾರ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ

ಮೇಲ್ಕಂಡ ಆರೋಪಿ ನೀಡಿದ ಸುಳುವಿನ ಮೇರೆಗೆ ಒಟ್ಟು 61000-00 ರೂ ಬೆಲೆ ಮಾಳುವ ಸ್ಕೂಟರ್ ಮತ್ತು ಪಂಪ್ ಸೆಟ್ ಮೋಟಾರ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಶ್ರಮವಹಿಸಿದ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ. ಕೃಷ್ಣ ಮೂರ್ತಿ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ನಂ 144 ಮಹದೇವಯ್ಯ. ಪಿ.ಸಿ 649 ಲಕ್ಷ್ಮಣ ಪಿ.ಸಿ 565 ಮೆಹಬೂಬ್ ಪಾಷ, ಪಿಸಿ 580 ರಮೇಶ. ಪಿ.ಸಿ. 731 ರಾಜೇ ಅರಸ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.

No comments:

Post a Comment